ಆ್ಯಪ್ನಗರ

ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನ ಜಾಥಾ

ನರಗುಂದ: ತಂಬಾಕು ಉತ್ಪನ್ನಗಳಿಂದ ಆಗುವ ಹಾನಿ ಹಾಗೂ ತಂಬಾಕು ನಿಯಂತ್ರಣ ಕುರಿತು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಪೊಲೀಸ್‌ ಇಲಾಖೆ ನರಗುಂದ ಸಹಯೋಗದೊಂದಿಗೆ ಗುಲಾಬಿ ಆಂದೋಲನ ಎಂಬ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಲಾಯಿತು.

Vijaya Karnataka 15 Feb 2020, 5:00 am
ನರಗುಂದ: ತಂಬಾಕು ಉತ್ಪನ್ನಗಳಿಂದ ಆಗುವ ಹಾನಿ ಹಾಗೂ ತಂಬಾಕು ನಿಯಂತ್ರಣ ಕುರಿತು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಪೊಲೀಸ್‌ ಇಲಾಖೆ ನರಗುಂದ ಸಹಯೋಗದೊಂದಿಗೆ ಗುಲಾಬಿ ಆಂದೋಲನ ಎಂಬ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಲಾಯಿತು.
Vijaya Karnataka Web the pink movement jatha from the students
ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನ ಜಾಥಾ


ಇಲ್ಲಿನ ಸರಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿಜಾಥಾಕ್ಕೆ ತಹಸೀಲ್ದಾರ ಮಹೇಂದ್ರ ಚಾಲನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಆರ್‌.ಸಿ ಕೊರವನವರ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ,ಮುಖ್ಯ ಶಿಕ್ಷಕ ಪಿ.ಎಫ್‌.ಸೋಲ್ಲಾಪೂರ, ಗೋಪಾಲ ಸುರಪೂರ ಭಾಗವಹಿಸಿದ್ದರು.

ಜಾಥಾ ಮೂಲಕ ವಿದ್ಯಾರ್ಥಿನಿಯರು ತಂಬಾಕು ಮಾರಾಟಗಾರರಿಗೆ ಮತ್ತು ತಂಬಾಕು ಉತ್ಪನ್ನಗಳನ್ನು ಬಳಸುವವರಿಗೆ ತಂಬಾಕು ಸೇವನೆಯ ಹಾನಿಗಳ ಕುರಿತು ಕರ ಪತ್ರ ಮೂಲಕ ಗುಲಾಬಿ ಹೂ ನೀಡಿ ಅರಿವು ಮೂಡಿಸಿದರು. ಜತೆಗೆ ಆರೋಗ್ಯ ಇಲಾಖೆಯ ಎಂ.ಆರ್‌ .ಕುಲಕರ್ಣಿ, ಜಿ.ವಿ.ಕೊಣ್ಣೂರ, ಎನ್‌.ಬಿ.ಜೋಶಿ, ಭರತ ಇಟ್ಟಿಗಟ್ಟಿ, ಬಿ.ಎಂ.ಕೌಜಗೇರಿ, ಶಿವಾನಂದ ಕುರಹಟ್ಟಿ, ಎಂ.ಎಂ.ಮಸೂತಿಮನಿ, ಎಸ್‌.ಬಿ.ಹನ್ನೂರ, ಅಕ್ಕಮಾಹದೇವಿ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ