ಆ್ಯಪ್ನಗರ

ಉತ್ತಮ ಸೇವೆ ನೀಡುವುದೇ ಸಂಘದ ಉದ್ದೇಶ

ಗಜೇಂದ್ರಗಡ: ಗಜೇಂದ್ರಗಡ ಅಭಿವೃದ್ಧಿಯಲ್ಲಿಎಲ್ಲಸಹಕಾರಿ ಸಂಘಗಳ ಕೊಡುಗೆ ಅಪಾರ ಎಂದು ಸಂಘದ ಅಧ್ಯಕ್ಷ ಬಸವರಾಜ ಮತ್ತಿಕಟ್ಟಿ ಹೇಳಿದರು. ಶನಿವಾರ ಸ್ಥಳೀಯ ಪ್ರಿಯದರ್ಶಿನಿ ವಿವಿಧೋದ್ಧೇಶಗಳ ಸಹಕಾರಿ ಸಂಘ ವಾರ್ಷಿಕ ಸದಸ್ಯರ ಸಾಮಾನ್ಯ ಸಭೆಯಲ್ಲಿಮಾತನಾಡಿದರು.

Vijaya Karnataka 22 Sep 2019, 5:00 am
ಗಜೇಂದ್ರಗಡ: ಗಜೇಂದ್ರಗಡ ಅಭಿವೃದ್ಧಿಯಲ್ಲಿಎಲ್ಲಸಹಕಾರಿ ಸಂಘಗಳ ಕೊಡುಗೆ ಅಪಾರ ಎಂದು ಸಂಘದ ಅಧ್ಯಕ್ಷ ಬಸವರಾಜ ಮತ್ತಿಕಟ್ಟಿ ಹೇಳಿದರು.
Vijaya Karnataka Web the purpose of the association is to provide good service
ಉತ್ತಮ ಸೇವೆ ನೀಡುವುದೇ ಸಂಘದ ಉದ್ದೇಶ

ಶನಿವಾರ ಸ್ಥಳೀಯ ಪ್ರಿಯದರ್ಶಿನಿ ವಿವಿಧೋದ್ಧೇಶಗಳ ಸಹಕಾರಿ ಸಂಘ ವಾರ್ಷಿಕ ಸದಸ್ಯರ ಸಾಮಾನ್ಯ ಸಭೆಯಲ್ಲಿಮಾತನಾಡಿದರು.

ಪಟ್ಟಣದಲ್ಲಿಸಂಘವು ಆರ್ಥಿಕ ನೆರವು ನೀಡುವುದರ ಜತೆಗೆ ಸಾಮಾಜಿಕ ಚಟುವಟಿಕೆಯಲ್ಲಿಸಕ್ರಿಯವಾಗಿ ಪಾಲ್ಗೊಂಡಿದೆ. ಸಂಘ 9.94 ನಿವ್ವಳ ಲಾಭ ಗಳಿಸಿದೆ. ಷೇರುದಾರರಿಗೆ ಶೇ. 11 ಲಾಭಾಂಶ ವಿಂಗಡಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ರೈತರು, ವರ್ತಕರು, ಸಾಮಾನ್ಯ ಗ್ರಾಹಕರ ಅಭ್ಯದಯಕ್ಕೆ ಸಂಘ ಅಧ್ಯತೆ ನೀಡಿದೆ. ಅವರಿಗೆ ಉತ್ತಮ ಸೇವೆ ಕೊಡುವುದು ಸಂಘದ ಮೂಲ ಉದ್ದೇಶ ಎಂದರು.

ಕಾರ‍್ಯದರ್ಶಿ ಅಮರಯ್ಯಾ ಗೌರಿಮಠ ಮಾತನಾಡಿ, ಸಂಘದ ಅಭಿವೃದ್ಧಿಯಲ್ಲಿಸದಸ್ಯರ ಸಹಕಾರ ಸ್ಮರಣೀಯ. ಸಂಘವು ಶೈಕ್ಷ ಣಿಕ ಪ್ರಗತಿಗೆ ವಿಶೇಷ ಅಧ್ಯತೆ ಕೊಟ್ಟಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಎ, ಬಿಎಸ್ಸಿ, ಸೇರಿದಂತೆ ಉನ್ನತ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹ ಧನ ಜತೆಗೆ ಸನ್ಮಾನಿಸಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಉತ್ತಮ ಗ್ರಾಹರಿಗೆ ಸನ್ಮಾನಿಸಲಾಯಿತು. ಅವಿನಾಶ ಮತ್ತಿಕಟ್ಟಿ, ಗೀತಾ ವಾಲಿ, ಕಳಕಪ್ಪ ಪಟ್ಟಣಶೆಟ್ಟಿ, ಫಕಿರೇಶ ಕುರಡಗಿ, ನಿಂಗಬಸಪ್ಪ ಮಾಸ್ತಿ, ಲಕ್ಷತ್ರ್ಮಣ ಮಾಳೋತ್ತರ, ಕಂಠೆಪ್ಪ ಸಂಗನಾಳ, ಲೀಲಾ ಜಕ್ಕನಗೌಡರ, ಬಸವರಾಜ ಕರಬಾಶೆಟ್ರ, ಅಶೋಕ ಬುಗಡಿ, ಹನುಮಂತರಾವ್‌ ಕುಲಕರ್ಣಿ, ವಿಶ್ವನಾಥ ಕಂಚಗಾರ, ನಾಗರಾಜ ಕವಡಿಮಟ್ಟಿ, ಸಿದ್ಧಲಿಂಗಪ್ಪ ಹದ್ಲಿ, ಸುಮಂಗಲಾ ಯಂಕಚ್ಚಿ, ನಾಗಪ್ಪ ಲಕ್ಕಲಕಟ್ಟಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ