ಆ್ಯಪ್ನಗರ

ರಸ್ತೆ ಪಕ್ಕ ಮಣ್ಣಿಲ್ಲ.... ಬಿದ್ರೆ ಮುಗಿತು....

ಹೊಳೆಆಲೂರ : 2007 ಹಾಗೂ 2009 ರಲ್ಲಿ ಹೊಳೆಆಲೂರ ಹೋಬಳಿಯಲ್ಲಿ ಬೆಣ್ಣಿ ಹಳ್ಳ ಹಾಗೂ ಮಲಪ್ರಭಾ ನದಿ ನೆರೆ ಹಾವಳಿ ಸಂದರ್ಭದಲ್ಲಿ ಅನೇಕ ಗ್ರಾಮಗಳಲ್ಲಿ ಸಂಕಷ್ಟ ಎದುರಾಗಿತ್ತು. ಅದಕ್ಕೆ ಶಾಶ್ವತ ಪರಿಹಾರಕ್ಕಾಗಿ ಊರಿಗೆ ಆಸರೆ ಯೋಜನೆಯಡಿ ಹೊಸ ನಗರಗಳನ್ನು ಸರಕಾರ

Vijaya Karnataka 13 May 2019, 5:00 am
ಹೊಳೆಆಲೂರ : 2007 ಹಾಗೂ 2009 ರಲ್ಲಿ ಹೊಳೆಆಲೂರ ಹೋಬಳಿಯಲ್ಲಿ ಬೆಣ್ಣಿ ಹಳ್ಳ ಹಾಗೂ ಮಲಪ್ರಭಾ ನದಿ ನೆರೆ ಹಾವಳಿ ಸಂದರ್ಭದಲ್ಲಿ ಅನೇಕ ಗ್ರಾಮಗಳಲ್ಲಿ ಸಂಕಷ್ಟ ಎದುರಾಗಿತ್ತು. ಅದಕ್ಕೆ ಶಾಶ್ವತ ಪರಿಹಾರಕ್ಕಾಗಿ ಊರಿಗೆ ಆಸರೆ ಯೋಜನೆಯಡಿ ಹೊಸ ನಗರಗಳನ್ನು ಸರಕಾರ ಹಾಗೂ ಸೇವಾ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿಸಲಾಯಿತು. ಅವುಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಸುರಿದರೂ ಯಾವುದೇ ಪ್ರಯೋಜನವಾಗಿಲ್ಲ.
Vijaya Karnataka Web GDG-12HLR1-40133

ಮಾಳವಾಡದಲ್ಲಿ ನಿರ್ಮಿಸಿದ ಸಿಸಿ ರೋಡ್‌ಗಳ ಪಕ್ಕದಲ್ಲಿ ಮಣ್ಣು ಹಾಕಿಲ್ಲ.


ಕೌಜಗೇರಿ ಗ್ರಾಪಂ ವ್ಯಾಪ್ತಿಯ ಮಾಳವಾಡ ಗ್ರಾಮದ ಶಿಫ್ಟಿಂಗ್‌ ಏರಿಯಾ ಆಸರೆ ಮನೆಗಳಿಗೆ ಮೂಲ ಸೌಕರ್ಯಗಳೇ ಇಲ್ಲ.

ಇತ್ತೀಚೆಗೆ ಸರಕಾರ ಅನೇಕ ಯೋಜನೆ ಇಲ್ಲಿ ಜಾರಿ ಮಾಡಿ ಅನುದಾನ ಬಿಡುಗಡೆ ಮಾಡಿದ್ದರೂ, ಕಾಟಾಚಾರಕ್ಕೆ ಎಂಬಂತೆ ಮಾಡಿ ಪೂರ್ತಿ ಮಾಡದಿರುವ ಪ್ರಕರಣ ಸಹ ಇವೆ.

ಸಿಸಿರೋಡ್‌ ಪಕ್ಕ ಮಣ್ಣು ಹಾಕಿಲ್ಲ:

ಲ್ಯಾಂಡ್‌ ಆರ್ಮಿಯಿಂದ ಮಾಡಿದ ಸಿಸಿ ರೋಡ್‌ಗಳ ಪಕ್ಕ ಮಣ್ಣು ಹಾಕದಿರುವುದರಿಂದ ರಸ್ತೆ ಬದಿಯ ಕಾಂಕ್ರಿಟ್‌ ಒಡೆದು ಹೋಗುವ ಸಾಧ್ಯತೆ ಇದೆ. ಮಳೆಗಾಲ ಪ್ರಾರಂಭವಾಗುವುದರಿಂದ ಇಲ್ಲಿನ ಎರೆ ಮಣ್ಣು ಮೊದಲೇ ಪೊಳ್ಳು. ಮಳೆ ಬಿದ್ದರೆ ಹಾಳಾಗುತ್ತವೆ. ರಸ್ತೆ ಪಕ್ಕ ಮಣ್ಣು ಹಾಕದೇ ಲ್ಯಾಂಡ್‌ ಆರ್ಮಿಯವರು ಕಾಮಗಾರಿಯನ್ನು ಅರ್ಧಂಬಂರ್ಧಮಾಡಿದ್ದಾರೆ.

ಇಡೀ ಆಸರೆ ಮನೆಗಳ ಏರಿಯಾ ಜಾಲಿಕಂಟಿ, ಮುಳ್ಳುಗಳಿಂದ ಆವೃತ್ತವಾಗಿದ್ದರೂ ಪಂಚಾಯಿತಿಯಿಂದ ಸ್ವಚ್ಛ ಮಾಡಿಸುತ್ತಿಲ್ಲ ಏಕೆ ಎಂದು ಅಲ್ಲಿನ ನಿವಾಸಿಗಳು ಆಕ್ರೋಶಗೊಂಡಿದ್ದಾರೆ.ಅಲ್ಲಿನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ 8-10 ವರ್ಷ ಕಳೆದಿದೆ. ಮನೆಗಳು ನೋಂದ ಆಗಿಲ್ಲ. ಇದರಿಂದ ಪಂಚಾಯಿತಿ ಸವಲತ್ತು ಸಿಗುವಲ್ಲಿ ತೊಂದರೆ ಅನುಭವಿಸುವಂತಾಗಿದೆ ಎಂಬುದು ಇಲ್ಲಿನ ನಿವಾಸಿಗಳ ಅಳಲು.

ಬಾಗಿದ ವಿದ್ಯುತ್‌ ಕಂಬಗಳು :

ರಸ್ತೆಗುಂಟ ಹೆಸ್ಕಾಂನಿಂದ ಹಾಕಿದ ಅನೇಕ ವಿದ್ಯುತ್‌ ಕಂಬಗಳು ಬಾಗಿ ನಿಂತಿವೆ. ಯಾವಾಗ ತಂತಿ ಬೀಳುವುದೋ, ಕಂಬ ಬೀಳುವುದೋ ಎನ್ನುವ ಆತಂಕ ಜನರಲ್ಲಿದೆ.ಹೆಸ್ಕಾಂ ಸಿಬ್ಬಂದಿ ಇತ್ತ ಕಡೆ ಲಕ್ಷ್ಯ ಹಾಕಿಲ್ಲ . ಅನೇಕ ಬಾರಿ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಕಂಬಗಳನ್ನು ಸರಿ ಮಾಡಿಲ್ಲ ಎಂಬುದು ಜನರ ಆರೋಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ