ಆ್ಯಪ್ನಗರ

ರೈತ ಮಹಿಳೆಯರ ಗರ್ಜನೆ

ಹೊಳೆಆಲೂರ: ನಮ್ಮ ಮನೆ ಮಗ್ಗಲು ಮನೆ ಗಟ್ಟಿಮುಟ್ಟಾಗಿದೆ... ಆದರೂ ಬಿದ್ದ ಮನೆ ಪಟ್ಟಿಯಲ್ಲಿಬಂದಿದೆ... ನಮ್ಮದು ಪೂರಾ ಡ್ಯಾಮೇಜ್‌ ಆಗಿದೆ.. ಎಂಜಿನಿಯರ ಸಮೇತ ಅಧಿಕಾರಿಗಳ ತಂಡ ನಮ್ಮ ಮನೆಗೆ ಬಂದು ಫೋಟೋ ಹೊಡ್ಕೊಂಡು ಹೋಗ್ಯಾರ.. ಪಟ್ಟಿಯಲ್ಲಿನಮ್ಮ ಮನೆ ಹೆಸರೇ ಬಂದಿಲ್ಲ...!

Vijaya Karnataka 28 Sep 2019, 5:00 am
ಹೊಳೆಆಲೂರ: ನಮ್ಮ ಮನೆ ಮಗ್ಗಲು ಮನೆ ಗಟ್ಟಿಮುಟ್ಟಾಗಿದೆ... ಆದರೂ ಬಿದ್ದ ಮನೆ ಪಟ್ಟಿಯಲ್ಲಿಬಂದಿದೆ... ನಮ್ಮದು ಪೂರಾ ಡ್ಯಾಮೇಜ್‌ ಆಗಿದೆ.. ಎಂಜಿನಿಯರ ಸಮೇತ ಅಧಿಕಾರಿಗಳ ತಂಡ ನಮ್ಮ ಮನೆಗೆ ಬಂದು ಫೋಟೋ ಹೊಡ್ಕೊಂಡು ಹೋಗ್ಯಾರ.. ಪಟ್ಟಿಯಲ್ಲಿನಮ್ಮ ಮನೆ ಹೆಸರೇ ಬಂದಿಲ್ಲ...!
Vijaya Karnataka Web 27HLR3_25
ಹೊಳೆಆಲೂರಿನ ಗಾಡಗೋಳಿ ಕ್ರಾಸ್‌ ಬಳಿ ಉತ್ತರ ಕರ್ನಾಟಕ ರೈತ ಮಹಿಳಾ ಸಂಘದ ಗ್ರಾಮ ಘಟಕದ ನೇತೃತ್ವದಲ್ಲಿಮಹಿಳೆಯರು ಪಿಡಿಒ ಮಂಜುನಾಥ ಗಣಿಯವರಿಗೆ ಮನವಿ ಸಲ್ಲಿಸಿದರು.


ಹೀಗೆ ನಾನಾ ತರಹ ಮಹಿಳೆಯರು ಆದಿಯಾಗಿ ನೆರೆ ಸಂತ್ರಸ್ತರು ಗ್ರಾಪಂ ಅಧಿಕಾರಿಯನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡರು.

ಉತ್ತರ ಕರ್ನಾಟಕ ರೈತ ಮಹಿಳಾ ಸಂಘದ ಗ್ರಾಮ ಘಟಕದ ನೇತೃತ್ವದಲ್ಲಿಗಾಡಗೋಳಿ ಕ್ರಾಸ್‌ ಬಳಿ ಮಹಿಳೆಯರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಘಟಕದ ಉಪಾಧ್ಯಕ್ಷೆ ಶಾಂತಾ ಕಾತರಕಿ, ಸಮೀಕ್ಷೆ ಸರಿಯಾಗಿ ನಡೆದಿಲ್ಲ. ಪಟ್ಟಿಯನ್ನು ತಿರುಚಲಾಗಿದೆ. ನೈಜ ಸಂತ್ರಸ್ತರು, ಬಡವರಿಗೆ ಅನ್ಯಾಯವಾಗಿದೆ. ಹೀಗೆಯೇ ಮುಂದುವರಿದರೆ ನ್ಯಾಯಕ್ಕಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಪಿಡಿಒ ಮಂಜುನಾಥ ಗಣಿ ಮಾತನಾಡಿ, ಇನ್ನೂ 2 ಸಲ ಪರಿಶೀಲನೆ ಮಾಡುವ ಸಂಭವ ಇದೆ. ನಿಮ್ಮ ಮನೆ ಬಿದ್ದಿದ್ದರೆ ಅರ್ಜಿ ಕೊಡಿ ಪರಿಶೀಲನೆ ಮಾಡುತ್ತೇವೆ ಎಂದು ಸಮಜಾಯಿಸಿ ನೀಡಿದರು.

ಅಧ್ಯಕ್ಷೆ ಶರಣವ್ವ ಯಾದವಾಡ, ಅಕ್ಕ ಮಹಾದೇವಿ ಕಲ್ಲಾಪೂರ, ರೇಣುಕಾ ಮಣ್ಣೂರ, ದ್ರಾಕ್ಷಾಯಣಿ ಅಮಾತಿಗೌಡ್ರ, ರಂಗವ್ವ ಕರಡಿ, ಶಾವಕ್ಕ ಕಂದಗಲ್‌, ಶೈಲಾ ಹೆಬ್ಬಳ್ಳಿ, ಮಮತಾ ಅನಸೇರಿ, ಗಂಗವ್ವ ಜಿಗಳೂರ, ಶಾಂತವ್ವ ಸುಳ್ಳದ, ಗಿರಿಜವ್ವ ದಳವಾಯಿ, ಪಾರವ್ವ ಗಾಣಿಗೇರ, ಮೋತಿಲಾಲ ರಾವಳ, ಮುತ್ತಣ್ಣ ಹಡಪದ, ಮುತ್ತಣ್ಣ ಹೂಗಾರ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ