ಆ್ಯಪ್ನಗರ

ಗುಡ್ಡದಿಂದ ಉರುಳಿದ ಬಂಡೆ

ಗಜೇಂದ್ರಗಡ (ಗದಗ): ಸಮೀಪದ ಬೊಮ್ಮಸಾಗರ ಗುಡ್ಡದ ಮೇಲಿನ ಬೃಹತ್‌ ಕಲ್ಲುಬಂಡೆಯೊಂದು ಗುರುವಾರ ಉರುಳಿ ಕೆಳಗಿರುವ ಗ್ರಾಮದ ದುರ್ಗಾದೇವಿ ಉಗ್ರಾಣ ಕೋಣೆಗೆ ಅಪ್ಪಳಿಸಿದೆ.

Vijaya Karnataka 20 Sep 2019, 5:00 am
Vijaya Karnataka Web the rock that fell from the hill
ಗುಡ್ಡದಿಂದ ಉರುಳಿದ ಬಂಡೆ
ಗಜೇಂದ್ರಗಡ (ಗದಗ): ಸಮೀಪದ ಬೊಮ್ಮಸಾಗರ ಗುಡ್ಡದ ಮೇಲಿನ ಬೃಹತ್‌ ಕಲ್ಲುಬಂಡೆಯೊಂದು ಗುರುವಾರ ಉರುಳಿ ಕೆಳಗಿರುವ ಗ್ರಾಮದ ದುರ್ಗಾದೇವಿ ಉಗ್ರಾಣ ಕೋಣೆಗೆ ಅಪ್ಪಳಿಸಿದೆ.

ಎರಡು ದಿನದಿಂದ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿಗ್ರಾಮಕ್ಕೆ ಹೊಂದಿಕೊಂಡ ಗುಡ್ಡದಿಂದ ಮೂರು ಅಡಿ ಎತ್ತರದಿಂದ 15 *20 ಅಡಿ ಬಂಡೆ ಉರುಳಿದೆ.

ಒಂದು ತುಕಡಿ ಬಂಡೆಕಲ್ಲುಕೆಳಗೆ ಉರುಳುತ್ತಾ ಬರುವದನ್ನು ಕಂಡ ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿದ್ದಾರೆ. ಗ್ರಾಮ ದೇವತೆ ಉಗ್ರಾಣ ಚಾವಣಿ ಮತ್ತು ಪಕ್ಕದ ಅಂಗನವಾಡಿ ಕಟ್ಟಡ ಮೇಲೆ ಬಂಡೆ ಬಿದ್ದಿದ್ದರಿಂದ ಆ ಕಟ್ಟಡಗಳು ಜಖಂಗೊಂಡಿವೆ. ಅದೃಷ್ಟವಶಾತ್‌ ಜೀವಹಾನಿ ಆಗಿಲ್ಲ್ಲ.

ಸ್ಥಳ ಪರಿಶೀಲಿಸಿದ ತಹಸೀಲ್ದಾರ ಗುರುಶಿದ್ದಯ್ಯ ಹಿರೇಮಠ ಅವರು ''ಬಂಡೆ ಉರುಳಿದ ವಿಷಯವನ್ನು ಜಿಲ್ಲಾಭೂಗರ್ಭ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ''ಎಂದು ತಿಳಿಸಿದರು. ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ