ಆ್ಯಪ್ನಗರ

ಪಾರಂಪರಿಕ ಕಲೆ ಬೆಳೆಸುವಲ್ಲಿಯುವ ಪೀಳಿಗೆ ಪಾತ್ರ ಪ್ರಮುಖ

ಶಿರಹಟ್ಟಿ : ಗ್ರಾಮೀಣ ಮಹಿಳೆಯರು ಸರಕಾರೇತರ ಸಂಘ ಸಂಸ್ಥೆಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದರ ಜತೆ ಕರ ಕುಶಲ ಕಲೆ ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿಯುವ ಪೀಳಿಗೆಯ ಪಾತ್ರ ಪ್ರಮುಖ ಎಂದು ಹುಬ್ಬಳ್ಳಿಯ ಮನ್‌ದೇಶಿ ಫೌಂಡೇಶನ್‌ನ ಸಂಯೋಜಕಿ ಬೇಬಿ ರೇಖಾ ಹೇಳಿದರು.

Vijaya Karnataka 1 Oct 2019, 5:00 am
ಶಿರಹಟ್ಟಿ : ಗ್ರಾಮೀಣ ಮಹಿಳೆಯರು ಸರಕಾರೇತರ ಸಂಘ ಸಂಸ್ಥೆಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದರ ಜತೆ ಕರ ಕುಶಲ ಕಲೆ ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿಯುವ ಪೀಳಿಗೆಯ ಪಾತ್ರ ಪ್ರಮುಖ ಎಂದು ಹುಬ್ಬಳ್ಳಿಯ ಮನ್‌ದೇಶಿ ಫೌಂಡೇಶನ್‌ನ ಸಂಯೋಜಕಿ ಬೇಬಿ ರೇಖಾ ಹೇಳಿದರು.
Vijaya Karnataka Web the role of the generation in the development of traditional art is important
ಪಾರಂಪರಿಕ ಕಲೆ ಬೆಳೆಸುವಲ್ಲಿಯುವ ಪೀಳಿಗೆ ಪಾತ್ರ ಪ್ರಮುಖ


ಪಟ್ಟಣದ ಎಫ್‌.ಎಂ.ಡಬಾಲಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿಹುಬ್ಬಳ್ಳಿಯ ಮನ್‌ದೇಶಿ ಫೌಂಡೇಶನ್‌ ವತಿಯಿಂದ ಸೋಮವಾರ ವಿದ್ಯಾರ್ಥಿನಿಯರಿಗಾಗಿ ನಡೆದ ಕರಕುಶಲ ತರಬೇತಿ ಕಾರಾರ‍ಯಗಾರದಲ್ಲಿಅವರು ಮಾತನಾಡಿದರು.

ಉಪನ್ಯಾಸಕ ಎನ್‌.ಹನುಮರಡ್ಡಿ ಮಾತನಾಡಿ, ವಿದ್ಯಾರ್ಥಿನಿಯರಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಕರಕುಶಲ ಕೌಶಲ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳಿದ್ದು ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ‍್ಯ ಎಂ.ಸಿ.ಭಜಂತ್ರಿ ಮಾತನಾಡಿ, ಮೆಹಂದಿ, ಕಸೂತಿ ಕಲೆ, ಪೇಪರ್‌ಬ್ಯಾಗ ತಯಾರಿಕೆ, ಮೇಣದಬತ್ತಿ, ಊದುಬತ್ತಿ, ರಾಖಿ ತಯಾರಿಕೆ ಸೇರಿದಂತೆ ಹಲವು ಬಗೆಯ ಕರಕುಶಲತೆ ಕಲಿಯುವ ಮೂಲಕ ವ್ಯಕ್ತಿತ್ವವಿಕಸನ ಮಾಡಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ಹೇಳಿದರು.

ನಂದಾ.ಎನ್‌.ಕುಲಕರ್ಣಿ, ವಿಜಯಲಕ್ಷಿತ್ರ್ಮೕ ಪಾಟೀಲ, ಆರ್‌.ಲಕ್ಷಿತ್ರ್ಮೕ ರಿಜ್ವಾನ, ಸುಧಾ ಹುಚ್ಚಣ್ಣನವರ, ಪೂಜಾ ಹವಾಲ್ದಾರಮಠ, ವೈ.ಎಸ್‌.ಪಂಗಣ್ಣವರ, ಪಿ.ಎನ್‌.ಕುಲಕರ್ಣಿ, ಎಫ್‌.ಎ.ಬಾಬುಖಾನವರ, ಎನ್‌.ಎಸ್‌.ಕಾಳಗಿ, ಎಂ.ಎಂ.ನದಾಫ, ಎಂ.ಕೆ.ಲಮಾಣಿ, ಮಂಜುಳಾ ಕ್ಯಾಸಕ್ಕಿ, ಗೀತಾ ಶೇಳಕೆ, ಸುಮಾ ದಾವಣಗೆರೆ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ