ಆ್ಯಪ್ನಗರ

ಬದುಕಿನಲ್ಲಿ ಹಾಸು ಹೊಕ್ಕಾದ ವಿಜ್ಞಾನ

ಡಂಬಳ: ಆಧುನಿಕ ತಂತ್ರಜ್ಞಾನ ಯುಗದ ದೈನಂದಿನ ಜೀವನದಲ್ಲಿವಿಜ್ಞಾನ ಹಾಸು ಹೊಕ್ಕಾಗಿದ್ದು ಅದನ್ನು ದುರುಪಯೋಗ ಪಡಿಸಿಕೊಳ್ಳದೆ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಪಂ ಸದಸ್ಯ ಈರಣ್ಣ ನಾಡಗೌಡ್ರ ಹೇಳಿದರು.

Vijaya Karnataka 30 Nov 2019, 5:00 am
ಡಂಬಳ: ಆಧುನಿಕ ತಂತ್ರಜ್ಞಾನ ಯುಗದ ದೈನಂದಿನ ಜೀವನದಲ್ಲಿವಿಜ್ಞಾನ ಹಾಸು ಹೊಕ್ಕಾಗಿದ್ದು ಅದನ್ನು ದುರುಪಯೋಗ ಪಡಿಸಿಕೊಳ್ಳದೆ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಪಂ ಸದಸ್ಯ ಈರಣ್ಣ ನಾಡಗೌಡ್ರ ಹೇಳಿದರು.
Vijaya Karnataka Web the science of hooking up in life
ಬದುಕಿನಲ್ಲಿ ಹಾಸು ಹೊಕ್ಕಾದ ವಿಜ್ಞಾನ


ಸಮೀಪದ ಮೇವುಂಡಿಯಲ್ಲಿಜರುಗಿದ ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮುಂಡರಗಿ ಸಮೂಹ ಸಂಪನ್ಮೂಲ ಕೇಂದ್ರ ಮೇವುಂಡಿ ಸಹಯೋಗದಲ್ಲಿಸಮುದಾಯದ ಸಹಕಾರದೊಂದಿಗೆ ಎರಡು ದಿನಗಳ ಕಾಲ ಜರುಗಲಿರುವ ಮಕ್ಕಳ ವಿಜ್ಞಾನ ಹಬ್ಬ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಏಕೆ? ಹೇಗೆ? ಎಂಬ ಪ್ರಶ್ನಾತೀತ ಗುಣ ಅಳವಡಿಸಿಕೊಳ್ಳಬೇಕು. ಯುವ ಪಿಳಿಗೆಗೆ ವಿಜ್ಞಾನದ ಅರಿವು ಅವಶ್ಯವಾಗಿದ್ದು ವಿದ್ಯಾರ್ಥಿಗಳಲ್ಲಿಅಡಗಿರುವ ಸೂಪ್ತ ಚೇತನ ಹೊರಹೊಮ್ಮಲು ಗ್ರಾಮೀಣ ಮಟ್ಟದಲ್ಲಿವಿಜ್ಞಾನ ಮಕ್ಕಳ ಹಬ್ಬ ಕಾರ್ಯಕ್ರಮ ಶ್ಲಾಘನೀಯವೆಂದರು.

ಸಿಆರ್‌ಪಿ ನಿಂಗು ಸೋಲಗಿ ಮಾತನಾಡಿ, ಈ ಮೊದಲು ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿಮಾತ್ರ ಜರುಗುತ್ತಿದ್ದ ಕಾರ್ಯಕ್ರಮವನ್ನು ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ರಾಜ್ಯದ ಎಲ್ಲಶಾಲೆಗಳಲ್ಲಿಯೂ ಆಚರಿಸಬೇಕೆಂಬ ಉದ್ಧೇಶದಿಂದ ರಾಜ್ಯದ 627 ಕ್ಲಸ್ಟರ್‌ಗಳಲ್ಲಿ34 ಜಿಲ್ಲೆಗಳಲ್ಲಿಹಬ್ಬ ಆಚರಿಸಲಾಗುತ್ತಿದ್ದು ಗದಗ ಜಿಲ್ಲೆಯ 16, ಮುಂಡರಗಿ ತಾಲೂಕಿನ 4ಕ್ಲಸ್ಟರ್‌ಗಳಲ್ಲಿಮಕ್ಕಳ ವಿಜ್ಞಾನ ಹಬ್ಬ ಆಚರಿಸಲಾಗುತ್ತಿದೆ ಎಂದರು. ಮೇವುಂಡಿಯಲ್ಲಿಸಮುದಾಯದ ಸಹಭಾಗಿತ್ವದಲ್ಲಿ10 ಜನ ಸಂಪನ್ಮೂಲ ಶಿಕ್ಷಕರಿಂದ 4ವಿಭಾಗದಲ್ಲಿವಿಜ್ಞಾನ ಕಲಿಕಾ ಹಬ್ಬ ಆಚರಿಸಲಾಗುತ್ತಿದೆ ಎಂದರು.

ಬಿಇಒ ಎಸ್‌.ಎನ್‌.ಹಳ್ಳಿಗುಡಿ, ಡಯಟ್‌ ಹಿರಿಯ ಉಪನ್ಯಾಸಕ ಶಂಕರ ಹಡಗಲಿ, ಗ್ರಾಪಂ ಅದ್ಯಕ್ಷೆ ಚಂದ್ರವ್ವ ಪೂಜಾರ, ಪಿಡಿಓ ಸಂತೋಷ ಹೂಗಾರ, ಆರ್‌.ಎಲ್‌.ಬದಾಮಿ, ಎಸ್‌.ವ್ಹಿ.ಅರಸಿನಾಳ, ಪಿ.ಸಿ.ಉಳ್ಳಾಗಡ್ಡಿ, ಅಂದಪ್ಪ ಹಾರೋಗೇರಿ, ಅಕ್ಕಮಹಾದೇವಿ ಕೊರ್ಲಹಳ್ಳಿ, ಶಕುಂತಲಾ ಹೈತಾಪೂರ, ಎಸ್‌.ಎನ್‌.ಅಂಗಡಿ, ಗಂಗಾಧರ ಅಣ್ಣೀಗೇರಿ ಇತರರು ಉಪಸ್ಥಿತರಿದ್ದರು.

ಜೆ.ಬಿ.ತಿಮ್ಮಾಪೂರ ನಿರೂಪಿಸಿದರು, ಜೆ.ಕೆ.ಕೊಟಗಿ ಸ್ವಾಗತಿಸಿದರು, ಆರ್‌.ಆರ್‌.ಈರಗಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ