ಆ್ಯಪ್ನಗರ

ಉರಿ ಬಿಸಿಲಿನಲ್ಲಿಯೂ ತುರುಸಿನ ಮತದಾನ

ಮುಂಡರಗಿ : ಸ್ಥಳೀಯ ಪುರಸಭೆ ಚುನಾವಣೆಗೆ ಬುಧವಾರ ಶಾಂತರೀತಿಯಲ್ಲಿ ಮತದಾನ ನಡೆದಿದ್ದು, ಕೆಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ಸಣ್ಣ ಪುಟ್ಟ ವಾಗ್ವಾದ ಬಿಟ್ಟರೆ ಸಂಪೂರ್ಣ ಮತದಾನ ತುರುಸಿನಿಂದ ನಡೆದು ಉರಿ ಬಿಸಿಲಿನಲ್ಲಿಯೂ ಆಯಾ ಪಕ್ಷ ದ ಅಭ್ಯರ್ಥಿಗಳು ಮತದಾರರಿಗೆ ಕೈಮುಗಿಯುತ್ತ ಮತಯಾಚಿಸುತ್ತಿದ್ದು ಕಂಡುಬಂದಿತು.

Vijaya Karnataka 30 May 2019, 5:00 am
ಮುಂಡರಗಿ : ಸ್ಥಳೀಯ ಪುರಸಭೆ ಚುನಾವಣೆಗೆ ಬುಧವಾರ ಶಾಂತರೀತಿಯಲ್ಲಿ ಮತದಾನ ನಡೆದಿದ್ದು, ಕೆಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ಸಣ್ಣ ಪುಟ್ಟ ವಾಗ್ವಾದ ಬಿಟ್ಟರೆ ಸಂಪೂರ್ಣ ಮತದಾನ ತುರುಸಿನಿಂದ ನಡೆದು ಉರಿ ಬಿಸಿಲಿನಲ್ಲಿಯೂ ಆಯಾ ಪಕ್ಷ ದ ಅಭ್ಯರ್ಥಿಗಳು ಮತದಾರರಿಗೆ ಕೈಮುಗಿಯುತ್ತ ಮತಯಾಚಿಸುತ್ತಿದ್ದು ಕಂಡುಬಂದಿತು.
Vijaya Karnataka Web GDG-29MDR1  PU VOTE
ಮುಂಡರಗಿ ಪುರಸಭೆ ಚುನಾವಣೆಯಲ್ಲಿ 12 ನೇ ವಾರ್ಡ್‌ (ಶಿರೋಳ) ಮತಗಟ್ಟೆಯಲ್ಲಿ ಮತಚಲಾಯಿಸಲು ಸರದಿಯಲ್ಲಿ ನಿಂತಿರುವದು.


ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ 12, 22, ವಾರ್ಡ್‌ಗಳಲ್ಲಿ ಶೇ. 55ರಷ್ಟು ಮತದಾನವಾಗಿತ್ತು. ನಂತರ ಮತಗಟ್ಟೆಗಳು ಸ್ವಲ್ಪ ಮಟ್ಟಿಗೆ ನಿಧಾನಗತಿಯಲ್ಲಿ ಮತದಾನ ನಡೆದರೂ ಮಧ್ಯಾಹ್ನ 4ರ ನಂತರ ಮತ್ತೆ ತುರುಸಿನಿಂದ ಮತದಾನ ನಡೆಯಿತು.

23 ವಾರ್ಡ್‌ಗಳಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಪಕ್ಷೇತರರು ಸೇರಿದಂತೆ ಕಣದಲ್ಲಿ 70 ಅಭ್ಯರ್ಥಿಗಳು ಉಳಿದಿದ್ದು, 9836 ಪುರುಷರು, 10067 ಮಹಿಳಾ ಮತದಾರರಿದ್ದಾರೆ.

15, 18, 20, 22, ವಾರ್ಡ್‌ಗಳು ಪ್ರತಿಷ್ಠೆಯ ಕಣಗಳಾಗಿದ್ದು, ಶಾಸಕ ರಾಮಣ್ಣ ಲಮಾಣಿ ಸೇರಿದಂತೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಇತರ ಮುಖಂಡರು ಪದೇ ಪದೇ ವಾರ್ಡ್‌ಗಳಿಗೆ ಭೇಟಿ ನೀಡಿದರು.

5 ನೇ ವಾರ್ಡ್‌ನಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮತಚಲಾಯಿಸಿದರು. 21 ನೇ ವಾರ್ಡ್‌ ಮತಗಟ್ಟೆಯಲ್ಲಿ ವಿಶೇಷಚೇತನ ಲಲಿತಾ ಹಿರೇಮಠ ತ್ರಿಬೈಸಿಕಲ್‌ ಮೇಲೆ ಚುನಾವಣೆ ಸಹಾಯಕರೊಂದಿಗೆ ಬಂದು ಹಕ್ಕು ಚಲಾಯಿಸಿದರು.

ಪ್ರತಿ ವಾರ್ಡ್‌ನಲ್ಲಿಯೂ ಕಾರ್ಯಕರ್ತರು ಉತ್ಸಾಹದಿಂದ ಮತದಾರರನ್ನು ಓಲೈಸಿ ಕರೆತರುತ್ತಿರುವದು ಸಾಮಾನ್ಯವಾಗಿತ್ತು. ಶಾಸಕ ರಾಮಣ್ಣ ಲಮಾಣಿ, ಬಿಜೆಪಿ ಮುಖಂಡರಾದ ಕರಬಸಪ್ಪ ಹಂಚಿನಾಳ, ರವೀಂದ್ರ ಉಪ್ಪಿನಬೆಟಗೇರಿ, ದೇವಪ್ಪ ಕಂಬಳಿ, ಆನಂದಗೌಡ ಪಾಟೀಲ, ಎಸ್‌.ವಿ.ಪಾಟೀಲ, ಹೇಮಗಿರೀಶ ಹಾವಿನಾಳ ಸೇರಿದಂತೆ ಇತರರು ಶಾಸಕರೊಂದಿಗೆ ಎಲ್ಲ ವಾರ್ಡ್‌ಗಳಲ್ಲಿಯೂ ಸಂಚರಿಸಿದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮು ಕಲಾಲ, ಮಾಜಿ ಅಧ್ಯಕ್ಷ ಹೇಮಂತಗೌಡ ಪಾಟೀಲ, ರುದ್ರಗೌಡ ಪಾಟೀಲ, ದೃವಕುಮಾರ ಹೊಸಮನಿ, ಕೊಟ್ರೇಶ ಅಂಗಡಿ, ಜೆಡಿಎಸ್‌ ಮುಖಂಡರಾದ ಅಶೋಕ ತ್ಯಾವåಣ್ಣವರ, ಜೆ.ಕುರಗೋಡ ವಾರ್ಡ್‌ಗಳಲ್ಲಿ ಸುತ್ತು ಹಾಕಿದರು. 23 ವಾರ್ಡ್‌ಗಳಲ್ಲಿಯೂ ಕಾಂಗ್ರೆಸ್‌ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿರುವದು ಕಂಡು ಬಂದಿತು. ಇನ್ನು ಕೆಲವು ಕಡೆಗೆ ಪಕ್ಷೇತರ, ಜೆಡಿಎಸ್‌ ಅಭ್ಯರ್ಥಿಗಳ ಪ್ರಭಾವವೂ ಕಂಡಿತು.

ಗೆರೆ ದಾಟಿಸಲು ಪೊಲೀಸರ ಹರಸಾಹಸ

ಮತಗಟ್ಟೆಯಿಂದ ನೂರು ಮೀಟರ್‌ ಅಂತರದಲ್ಲಿ (ಗೆರೆ)ಅಭ್ಯರ್ಥಿಗಳು, ಕಾರ್ಯಕರ್ತರು ಮತಯಾಚಿಸುವ ಆದೇಶ ಇದ್ದರೂ ಪ್ರತಿ ವಾರ್ಡ್‌ನಲ್ಲೂ ಗೆರೆ ದಾಟಿ ಅಭ್ಯರ್ಥಿಗಳು ಒಳಬರುವದನ್ನು ಪೊಲೀಸರು ತಡೆದು ತಡೆದು ಸಾಕಾಗುತ್ತಿತ್ತು. ಹೀಗಾಗಿ ಕೆಲವು ಬಾರಿ ಕಾಂಗ್ರೆಸ್‌, ಬಿಜೆಪಿ ಪಕ್ಷ ಗಳ ಕಾರ್ಯಕರ್ತರು, ಅಭ್ಯರ್ಥಿಗಳ ನಡುವೆ ಗೆರೆ ದಾಟಿ ಬರುವ ಬಗ್ಗೆ ಜಟಾಪಟಿ ನಡೆಯುತ್ತಲೇ ಇತ್ತು. ಪೊಲೀಸರ ನಿಯಂತ್ರಣ ಮಾಡುತ್ತಲೇ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ