ಆ್ಯಪ್ನಗರ

ವಾಳದ, ಗಾಣಿಗೇರ ಅಮಾನತು ರದ್ದು

ನರಗುಂದ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಚಂಬಣ್ಣ ವಾಳದ, ದಶರಥ ಗಾಣಿಗೇರ ಅಮಾನತು ರದ್ದುಗೊಳಿಸಿದ ಕೆಪಿಸಿಸಿ ಕ್ರಮ ವಿರೋಧಿಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರು, ಯುವ ಕಾಂಗ್ರೆಸ್‌ ಕಾರ್ಯಕರ್ತರು ಅಮಾನತು ರದ್ದು ಮಾಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

Vijaya Karnataka 2 Apr 2019, 5:00 am
ನರಗುಂದ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಚಂಬಣ್ಣ ವಾಳದ, ದಶರಥ ಗಾಣಿಗೇರ ಅಮಾನತು ರದ್ದುಗೊಳಿಸಿದ ಕೆಪಿಸಿಸಿ ಕ್ರಮ ವಿರೋಧಿಸಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರು, ಯುವ ಕಾಂಗ್ರೆಸ್‌ ಕಾರ್ಯಕರ್ತರು ಅಮಾನತು ರದ್ದು ಮಾಡದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.
Vijaya Karnataka Web the suspension of the gas and gasoline suspension
ವಾಳದ, ಗಾಣಿಗೇರ ಅಮಾನತು ರದ್ದು


ವರ್ಷದ ಆರಂಭದಲ್ಲಿ ನರಗುಂದ ಮತ್ತು ಹೊಳೆಆಲೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರನ್ನಾಗಿ ಮಾಜಿ ಶಾಸಕರ ಪುತ್ರ ಪ್ರವೀಣ ಯಾವಗಲ್ಲ ಮತ್ತು ಮಲ್ಲಣ್ಣ ಕೊಳೆನವರ ಅವರನ್ನು ನೇಮಕಗೊಳಿಸಿದ್ದನ್ನು ವಿರೋಧಿಸಿ ಹಿಂದಿನ ಅಧ್ಯಕ್ಷ ಚಂಬಣ್ಣ ವಾಳದ, ದಶರಥ ಗಾಣಿಗೇರ ಸೇರಿದಂತೆ ಹಲವು ಮೂಲ ಕಾಂಗ್ರೆಸ್ಸಿಗರು ಎಂದು ಹೇಳಿಕೊಂಡ ಗುಂಪು ಮಾಜಿ ಶಾಸಕರ ವಿರುದ್ದ ತಿರುಗಿ ಬಿದ್ದು ಬೃಹತ್‌ ಸಮಾವೇಶ ನಡೆಸಿ ಜಿಲ್ಲಾ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಕೆಪಿಸಿಸಿ ಗಮನಕ್ಕೆ ತರದೆ ಸಮಾವೇಶ ಆಯೋಜಿಸಿದ ದೂರಿನ ಮೇಲೆ ಕೆಪಿಸಿಸಿ ಅಧ್ಯಕ್ಷ ವೈ.ಎನ್‌.ಘೋರ್ಪಡೆ ಅವರು ಜ.1ರಂದು ಅಮಾನತುಗೊಳಿಸಿದ್ದರು. ಅಮಾನತುಗೊಂಡ ನಂತರ ಮೂಲ ಕಾಂಗ್ರೆಸ್‌ ಮುಖಂಡರು ಯಾವುದೆ ಪಕ್ಷ ದಲ್ಲಿ ಗುರುತಿಸಿಕೊಳ್ಳದೆ ತಟಸ್ಥರಾಗಿದ್ದರು. ಜತೆಗೆ ಕೆಪಿಸಿಸಿ ಅಧ್ಯಕ್ಷ ರಲ್ಲಿ ಅಮಾನತು ರದ್ದುಗೊಳಿಸಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಮಾ.29ರಂದು ಅಮಾನತು ರದ್ದುಗೊಳಿಸಿ ಚಂಬಣ್ಣ ವಾಳದ ಮತ್ತು ದಶರಥ ಗಾಣಿಗೇರ ಅವರನ್ನು ಪಕ್ಷ ಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕೆಂದು ಮುಖಂಡರಿಗೆ ನಿರ್ದೇಶಿಸಿದ್ದಾರೆ.

ಮಾಜಿ ಶಾಸಕ ಬಿ.ಆರ್‌.ಯಾವಗಲ್ಲ, ಜಿಲ್ಲಾ ಅಧ್ಯಕ್ಷ ಜಿ.ಎಸ್‌.ಪಾಟೀಲ, ನಂಜಯ್ಯನಮಠ, ನವೀನ ಶೆಟ್ಟಿ, ರಾಮಲಿಂಗಯ್ಯ ಹಾಗೂ ಕ್ಷೇತ್ರದ ಮುಖಂಡರ ಗಮನಕ್ಕೆ ತರದೆ ಅಮಾನತು ರದ್ದುಗೊಳಿಸಿದ್ದನ್ನು ವಿರೋಧಿಸಿ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿರುವ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಾಜು ಕಲಾಲ ಅವರು ಈ ಎಲ್ಲ ಬೆಳವಣಿಗೆ ಹಿಂದೆ ಇರುವ ಕಾಣದ ಕೈ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ