ಆ್ಯಪ್ನಗರ

ಗುರು,ತಂದೆ,ತಾಯಿ ಋುಣ ತೀರಿಸಲಾಗದು

ಗಜೇಂದ್ರಗಡ: ಹೆತ್ತ ತಂದೆ, ತಾಯಿ ಗುರುವಿನ ಋುಣ ತೀರಿಲಾಗದು. ಮನುಷ್ಯನಲ್ಲಿಅಡಗಿರುವ ಅಜ್ಞಾನ ಪರಿಹರಿಸಿ ಸುಜ್ಞಾನ, ಸುವಿಚಾರ ಬಿತ್ತುವುದು ಗುರು ಮಾಡುತ್ತಾನೆ ಎಂದು ಜುಕ್ತಿಹಿರೇಮಠ ಡಾ. ಕೊಟ್ಟೂರಬಸವೇಶ್ವರ ಶಿವಾಚಾರ್ಯರು ಹೇಳಿದರು.

Vijaya Karnataka 17 Sep 2019, 5:00 am
ಗಜೇಂದ್ರಗಡ: ಹೆತ್ತ ತಂದೆ, ತಾಯಿ ಗುರುವಿನ ಋುಣ ತೀರಿಲಾಗದು. ಮನುಷ್ಯನಲ್ಲಿಅಡಗಿರುವ ಅಜ್ಞಾನ ಪರಿಹರಿಸಿ ಸುಜ್ಞಾನ, ಸುವಿಚಾರ ಬಿತ್ತುವುದು ಗುರು ಮಾಡುತ್ತಾನೆ ಎಂದು ಜುಕ್ತಿಹಿರೇಮಠ ಡಾ. ಕೊಟ್ಟೂರಬಸವೇಶ್ವರ ಶಿವಾಚಾರ್ಯರು ಹೇಳಿದರು.
Vijaya Karnataka Web the teacher father and mother cannot pay off
ಗುರು,ತಂದೆ,ತಾಯಿ ಋುಣ ತೀರಿಸಲಾಗದು


ಸಮೀಪದ ಸೂಡಿ ಗ್ರಾಮ ಜುಕ್ತಿಹಿರೇಮಠದಲ್ಲಿಲಿಂ. ಉಮಾಪತಿ ಶಿವಾಚಾರ್ಯರ 72ನೇ ಪುಣ್ಯಸ್ಮರಣೆ ಹಾಗೂ ಜಾತ್ರಾ ಮಹೋತ್ಸವ ಪ್ರಯುಕ್ತ ರಾಘವಾಂಕ ಕವಿ ವಿರಚಿತ ಶ್ರೀ ಸಿದ್ಧರಾಮ ಶಿವಯೋಗಿಗಳ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣಕ್ಕೆ ಧರ್ಮದ ಅರಿವು ಮುಖ್ಯ. ವ್ಯಕ್ತಿತ್ವ ವಿಕಸನಕ್ಕೆ ಗುರುವಿನ ಜ್ಞಾನ ಭೋಧನೆ ಅಗತ್ಯ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣತೆ ಎಲ್ಲರೂ ಅಳವಡಿಕೆ ಅಗತ್ಯ. ಇದರಿಂದ ಸಾತ್ವಿಕ ಸಮಾಜ ನಿರ್ಮಾಣವಾಗಲಿದೆ ಎಂದರು.

ತೆಕ್ಕಲಕೋಟೆ ಕಂಬಳಿಮಠದ ಶ್ರೀ ವೀರಭದ್ರ ಶಿವಾಚಾರ್ಯರು ಮಾತನಾಡಿ, ಪ್ರವಚನಗಳಿಂದ ಭಕ್ತರ ಬದುಕಿನ ಬಾಳಿನಲ್ಲಿಜ್ಞಾನ ದೊರೆ ಯಲಿದೆ. ಮನುಕುಲದ ಉದ್ಧಾರಕ್ಕಾಗಿ ಧರ್ಮಸಂಸ್ಕಾರ ಅಗತ್ಯ. ಯೋಗ್ಯ ಗುರು ದೊರೆಯಬೇಕಾದರೆ ಶ್ರದ್ಧಾ, ಭಕ್ತಿಯ ಸೇವೆ ಅಗತ್ಯ ಎಂದರು.

ಶ್ರೀ ಶಿವಶಾಂತವೀರ ಸ್ವಾಮಿಗಳು ಸಾನ್ನಿಧ್ಯ ವಹಿದ್ದರು. ಪ್ರವಚನಕಾರ ಎಂ. ಶರಣಯ್ಯಾ ಶಾಸ್ತ್ರೀಗಳು, ವೀರಭದ್ರಪ್ಪ ಮಾರನಬಸರಿ, ಕೇದಾ ರಸ್ವಾಮಿ ಜುಕ್ತಿಹಿರೇಮಠ, ಶೆಖರಗೌಡ ಪಾಟೀಲ, ಶರಣಪ್ಪ ಹೂಗಾರ, ಶರಣಪ್ಪ ಕಾಶಪ್ಪನವರ, ಈಶಪ್ಪ ರೋಣದ, ಉಮೇಶ ಮಾರನಬಸರಿ, ಅಮದಾನಗೌಡ್ರ ಪಾಟೀಲ, ಶಿವಪ್ಪ ಅಮರಗಟ್ಟಿ, ಸಂಗಮೇಶ ಮಾರನಬಸರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ