ಆ್ಯಪ್ನಗರ

ಶಿಕ್ಷಣವಿಲ್ಲದ ಬದುಕು ಶೂನ್ಯ ; ಡಾ.ಸಿ.ವಿ.ಮಾಳಗಿ

ಗಜೇಂದ್ರಗಡ: ಶಿಕ್ಷಣವೊಂದಿದ್ದರೆ ಜೀವನದಲ್ಲಿಏನೆಲ್ಲವನ್ನು ಸಾಧಿಸಬಹುದು. ಶಿಕ್ಷಣವಿಲ್ಲದ ಬದುಕು ಶೂನ್ಯ ಹೀಗಾಗಿ ಪಾಲಕರು ಮಕ್ಕಳ ವಿದ್ಯಾರ್ಥಿ ಜೀವನವನ್ನು ವ್ಯವಸ್ಥಿತ ರೀತಿಯಲ್ಲಿರೂಪಿಸಿದಾಗ ಮಾತ್ರ ಉನ್ನತ ಗುರಿಗಳನ್ನು ತಲುಪಲು ಸಾಧ್ಯ ಎಂದು ಡಾ.ಸಿ.ವಿ.ಮಾಳಗಿ ಹೇಳಿದರು.

Vijaya Karnataka 24 Nov 2020, 5:00 am
ಗಜೇಂದ್ರಗಡ: ಶಿಕ್ಷಣವೊಂದಿದ್ದರೆ ಜೀವನದಲ್ಲಿಏನೆಲ್ಲವನ್ನು ಸಾಧಿಸಬಹುದು. ಶಿಕ್ಷಣವಿಲ್ಲದ ಬದುಕು ಶೂನ್ಯ ಹೀಗಾಗಿ ಪಾಲಕರು ಮಕ್ಕಳ ವಿದ್ಯಾರ್ಥಿ ಜೀವನವನ್ನು ವ್ಯವಸ್ಥಿತ ರೀತಿಯಲ್ಲಿರೂಪಿಸಿದಾಗ ಮಾತ್ರ ಉನ್ನತ ಗುರಿಗಳನ್ನು ತಲುಪಲು ಸಾಧ್ಯ ಎಂದು ಡಾ.ಸಿ.ವಿ.ಮಾಳಗಿ ಹೇಳಿದರು.
Vijaya Karnataka Web 23GJD-1_25
ಗಜೇಂದ್ರಗಡದ ಬನಶಂಕರಿ ದೇವಸ್ಥಾನದಲ್ಲಿದಿ. ಪಾರ್ವತಮ್ಮ ಶಂಕ್ರಪ್ಪ ಕಡ್ಡಿ ಅವರ 22ನೇ ವರ್ಷದ ಸ್ಮರಣಾರ್ಥವಾಗಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿವಿದ್ಯಾರ್ಥಿಗಳಿಗೆ ನಗದು ಮತ್ತು ಪ್ರಮಾಣ ಪತ್ರ ನೀಡಲಾಯಿತು.


ಇಲ್ಲಿನ ಬನಶಂಕರಿ ದೇವಸ್ಥಾನದಲ್ಲಿದಿ.ಪಾರ್ವತಮ್ಮ ಶಂಕ್ರಪ್ಪ ಕಡ್ಡಿ ಅವರ 22ನೇ ವರ್ಷದ ಸ್ಮರಣಾರ್ಥ ಸೋಮವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿಗಜೇಂದ್ರಗಡ ಭಾಗದ ಪ್ರೌಢ ಶಾಲೆಗಳಲ್ಲಿಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿಮಾತನಾಡಿದರು.

ವಿದ್ಯಾರ್ಥಿಗಳ ಜೀವನದಲ್ಲಿಎಸ್ಸೆಸ್ಸೆಲ್ಸಿಯು ಪ್ರಮುಖ ಘಟ್ಟವಾಗಿದೆ. ಇಲ್ಲಿಂದಲೇ ಜೀವನದ ಸೋಲು, ಗೆಲುವುಗಳು ಆರಂಭವಾಗುತ್ತದೆ. ಅಲ್ಲದೆ, 10ನೇ ತರಗತಿ ವಾರ್ಷಿಕ ಪರೀಕ್ಷೆಗಳಲ್ಲಿವಿದ್ಯಾರ್ಥಿಗಳು ಗಳಿಸುವ ಅಂಕಗಳ ಮೇಲೆ ಇಡೀ ಜೀವನದ ಭವಿಷ್ಯ ನಿರ್ಧಾರವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ದುಶ್ಚಟಗಳಿಗೆ ಒಳಗಾಗದೆ ಉನ್ನತ ಹುದ್ದೆ-ಗುರಿಗಳತ್ತ ಹೆಚ್ಚಿನ ಒತ್ತು ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಶಿಕ್ಷಕ ಕೆ.ಬಿ.ಚಾಗರಿ ಮಾತನಾಡಿದರು. ತೃಪ್ತಿ ಮಾಳಗಿ, ಅಕ್ಷತಾ ಕೆಲೂರ, ಸುಷ್ಮೀತಾ ಗುಡಗಿ ಅವರಿಗೆ ನಗದು, ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯೋಪಾಧ್ಯಾಯ ಎಂ.ಎಸ್‌.ತೋಟದ, ಡಾ.ಶಿವಾನಂದ ಮಾಳಗಿ, ಪರಣ್ಣ ಕಡ್ಡಿ, ಎನ್‌.ಕೆ.ಸರ್ಕಾವಸ, ಎಸ್‌.ಎಸ್‌.ನರೇಗಲ್ಲ, ಪಾಲಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ