ಆ್ಯಪ್ನಗರ

ಸಾಮರಸ್ಯ ಮೂಡಿಸಿದ ಅಚ್ಚಳಿಯದ ನೆನಪು

ರೋಣ: 2012 ಜೂನ್‌ 16 ರಲ್ಲಿತಾಲೂಕಿನ ಕರಮುಡಿಯಲ್ಲಿದಲಿತರ ಹಾಗೂ ಸವರ್ಣಿಯರ ನಡುವೆ ನಡೆದ ಅಸ್ಪಶ್ರತೆ ಜಗಳ ತಾರಕಕ್ಕೇರಿದಾಗ ಸ್ವತಃ ಪೇಜಾವರ ಶ್ರೀಗಳು ಗ್ರಾಮಕ್ಕೆ ಆಗಮಿಸಿ ಶಾಂತಿ ಸಂಧಾನ ನಡೆಸಿದ ನೆನಪು ಜನರ ಮನಸ್ಸಿನಲ್ಲಿಅಚ್ಚಳಿಯದೆ ಉಳಿದಿದೆ.

Vijaya Karnataka 30 Dec 2019, 5:00 am
ರೋಣ: 2012 ಜೂನ್‌ 16 ರಲ್ಲಿತಾಲೂಕಿನ ಕರಮುಡಿಯಲ್ಲಿದಲಿತರ ಹಾಗೂ ಸವರ್ಣಿಯರ ನಡುವೆ ನಡೆದ ಅಸ್ಪಶ್ರತೆ ಜಗಳ ತಾರಕಕ್ಕೇರಿದಾಗ ಸ್ವತಃ ಪೇಜಾವರ ಶ್ರೀಗಳು ಗ್ರಾಮಕ್ಕೆ ಆಗಮಿಸಿ ಶಾಂತಿ ಸಂಧಾನ ನಡೆಸಿದ ನೆನಪು ಜನರ ಮನಸ್ಸಿನಲ್ಲಿಅಚ್ಚಳಿಯದೆ ಉಳಿದಿದೆ.
Vijaya Karnataka Web 29RON1_25
ಕರಮುಡಿ ಗ್ರಾಮಕ್ಕೆ ಬಂದಿದ್ದ ಪೇಜಾವರ ಶ್ರೀಗಳು.


ಒಂದು ದಶಕದ ಹಿಂದೆ ಕರಮುಡಿಯಲ್ಲಿದಲಿತರು ಹಾಗೂ ಸವರ್ಣಿಯರ ನಡುವೆ ಜಗಳ ತಾರಕಕ್ಕೆ ಏರಿತ್ತು. ಗ್ರಾಮದಲ್ಲಿಸವರ್ಣಿಯರು ದಲಿತರನ್ನು ಅಸ್ಪಶ್ರತೆ ದೃಷ್ಟಿಯಿಂದ ಕಾಣುತ್ತಿದ್ದರು. ದಲಿತರಿಗೆ ಕ್ಷೌರದ ಅಂಗಡಿಗಳಿ, ಗಿರಣಿಗಳಿಗೆ, ಹೊಟೆಲ್‌ಗಳಲ್ಲಿನಿರ್ಭಂಧಿಸಲಾಗಿತ್ತು. ಈ ಘಟನೆ ಪರಿಹರಿಸಲು ಪೇಜಾವರ ಶ್ರೀಗಳು ಸ್ವತಃ ಗ್ರಾಮಕ್ಕೆ ಆಗಮಿಸಿ ಭೂಮಿಯಲ್ಲಿಜನಿಸಿದ ಪ್ರತಿಯೊಬ್ಬರಿಗೆ ಜೀವಿಸುವ ಹಕ್ಕು ಇದೆ. ಇಲ್ಲಿಎಲ್ಲರು ಒಂದೇ ಯಾರು ಮೇಲಲ್ಲ. ಯಾರು ಕೀಳಲ್ಲ. ಗ್ರಾಮದಲ್ಲಿಇರುವ ಎಲ್ಲಧರ್ಮದ ಜನರು ಪರಸ್ಪರ ಸೌಹಾರ್ಧತೆ ಶಾಂತಿಯಿಂದ ಸಹೋದರರಂತೆ ಬಾಳಬೇಕು ಎಂದು ದಲಿತರ ಹಾಗೂ ಸವರ್ಣಿಯರ ನಡುವಿನ ಜಗಳವನ್ನು ಶಾಂತಿ ಸಂಧಾನ ಸಭೆಯ ಮೂಲಕ ಬಗೆಹರಿಸಿದ್ದರು.

2013 ರಲ್ಲಿನಡೆದ ಶಾಂತಿ ಸಂಧಾನ ಸಭೆಯಲ್ಲಿಅಂದಿನ ಶಾಸಕ ಇಂದಿನ ಸಚಿವ ಸಿ.ಸಿ.ಪಾಟೀಲ, ಮಾಜಿ ಶಾಸಕ ಬಿ.ಆರ್‌.ಯಾವಗಲ್ಲಸೇರಿದಂತೆ ಮತ್ತಿತರರು ಶಾಂತಿ ಸಂಧಾನ ಸಭೆಯಲ್ಲಿಪಾಲ್ಗೊಂಡಿದ್ದರು. ಗ್ರಾಮದ ಮುಖಂಡ ಪಕ್ಕೀರಗೌಡ ಸಂಕನಗೌಡ್ರ ಮನೆಗೆ ತೆರಳಿ ಶಾಂತಿಯುತ ಸಹಬಾಳ್ವೆ ನಡೆಸುವಂತೆ ಸೂಚಿಸಿದ್ದರು. ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶ ಮಾಡಿಸಿದ್ದರು.

ತಾಲೂಕಿನ ಸೂಡಿ ಗ್ರಾಮದ ರಸ್ತೆಯ ಪಕ್ಕದಲ್ಲಿನಿರ್ಮಾಣವಾದ 30 ಅಡಿ ಪರಮೇಶ್ವರ ಮೂರ್ತಿ ಅನಾವರಣ ಹಾಗೂ ಶಿವಧಾಮ ಉದ್ಘಾಟನೆಯನ್ನು 2018 ರ ನ. 27 ರಂದು ಪೇಜಾವರ ಶ್ರೀಗಳು ನೆರೆವೇರಿಸಿದ್ದರು.

1984 ರಲ್ಲಿತಾಲೂಕಿನಲ್ಲಿಬರಗಾಲ ಸಂಭವಿಸಿದ ಸಂದರ್ಭದಲ್ಲಿತಾಲೂಕಿನ ಕುರುಡಗಿ ಗ್ರಾಮಕ್ಕೆ ಆಗಮಿಸಿದ ಪೇಜಾವರ ಶ್ರೀಗಳು ಅಂದು 7 ಲಕ್ಷ ರೂ. ಖರ್ಚು ಮಾಡಿ ಗ್ರಾಮದಲ್ಲಿಕೆರೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು. ಕೆರೆ ನಿರ್ಮಾಣ ಕಾಮಗಾರಿಯಲ್ಲಿಗ್ರಾಮಸ್ಥರಿಗೆ ಕೆಲಸ ನೀಡಿ ದವಸ ಧಾನ್ಯಗಳನ್ನು ನೀಡಿ ಕೂಲಿಯನ್ನು ಸಹ ನೀಡಿ ಅವರಿಗೆ ಬದುಕು ಕಟ್ಟಿಕೊಟ್ಟರು. ಗ್ರಾಮಸ್ಥರಿಗೆ ಆಫ್ರಿಕನ್‌ ತಳಿಯ 300 ಆಡುಗಳನ್ನು ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ