ಆ್ಯಪ್ನಗರ

ಕನ್ನಡದಲ್ಲಿ ವ್ಯವಹಾರ ಮಾಡಲು ಆಗ್ರಹ

ಗದಗ: ರಾಜ್ಯದಲ್ಲಿರುವ ಮಾರ್ವಾಡಿಗಳು ಹಾಗೂ ವಲಸಿಗರು ಕನ್ನಡದಲ್ಲಿವ್ಯವಹಾರ ಮತ್ತು ಕನ್ನಡದಲ್ಲಿಮಾತನಾಡಬೇಕು ಎಂದು ಕರ್ನಾಟಕ ಸಂಗ್ರಾಮ ಸೇನೆ ರಾಜ್ಯಾಧ್ಯಕ್ಷ ಸಂಜೀವ ದುಮಕನಾಳ ಹೇಳಿದರು.

Vijaya Karnataka 28 Aug 2019, 5:00 am
ಗದಗ: ರಾಜ್ಯದಲ್ಲಿರುವ ಮಾರ್ವಾಡಿಗಳು ಹಾಗೂ ವಲಸಿಗರು ಕನ್ನಡದಲ್ಲಿವ್ಯವಹಾರ ಮತ್ತು ಕನ್ನಡದಲ್ಲಿಮಾತನಾಡಬೇಕು ಎಂದು ಕರ್ನಾಟಕ ಸಂಗ್ರಾಮ ಸೇನೆ ರಾಜ್ಯಾಧ್ಯಕ್ಷ ಸಂಜೀವ ದುಮಕನಾಳ ಹೇಳಿದರು.
Vijaya Karnataka Web the urge to do business in kannada
ಕನ್ನಡದಲ್ಲಿ ವ್ಯವಹಾರ ಮಾಡಲು ಆಗ್ರಹ


ಮಂಗಳವಾರ ನಗರದ ಪತ್ರಿಕಾಭವನದಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಮಾರ್ವಾಡಿಗಳ ಕನ್ನಡ ವಿರೋಧಿ ನೀತಿಯನ್ನು ಕರ್ನಾಟಕ ಸಂಗ್ರಾಮ ಸೇನೆ ವಿರೋಧಿಸುತ್ತದೆ. ಮಾರ್ವಾಡಿಗಳು ರಾಜ್ಯದಲ್ಲಿಹಿಂದಿ ದರ್ಬಾರ ಮಾಡಬಾರದು. ಜತೆಗೆ ಎಲ್ಲ ವ್ಯವಹಾರವನ್ನು ಕನ್ನಡದಲ್ಲಿಯೇ ಮಾಡಬೇಕು. ಬೇರೆ ಬೇರೆ ರಾಜ್ಯದಿಂದ ವಲಸೆ ಬಂದಿರುವ ಯಾವುದೇ ಭಾಷೆಯವರು ಕನ್ನಡದಲ್ಲಿಯೇ ವ್ಯವಹಾರ ಮಾಡುವ ಜತೆಗೆ ಕನ್ನಡದಲ್ಲಿಮಾತನಾಡಬೇಕು ಎಂದರು.

ಪರರಾಜ್ಯದಿಂದ ಬಂದು ವಾಸಿಸುವವರ ಪರವಾಗಿ ವಕಾಲತ್ತು ವಹಿಸಿರುವ ಸಂಸದ ತೇಜಸ್ವಿ ಸೂರ್ಯ ತಕ್ಷಣ ರಾಜೀನಾಮೆ ನೀಡಬೇಕು. ಕನ್ನಡಿಗರಲ್ಲಿಕ್ಷೇಮೆ ಕೇಳಬೇಕು. ಕರ್ನಾಟಕ ರಾಜ್ಯವು ನೂರಕ್ಕೆ ನೂರು ಕನ್ನಡಿಗರ ರಾಜ್ಯ ಆಗಬೇಕು ಎಂದರು. ಶಿವನಗೌಡ ತಳಗಡಿ, ಶಂಕರಗೌಡ ಛಾಯನಗೌಡ್ರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ