ಆ್ಯಪ್ನಗರ

ಬೇಗ ಬಂತು ಕಲ್ಲಂಗಡಿ

ಗದಗ: ಅವಳ ನಗರದಲ್ಲಿ ಕಳೆದ ಸುಮಾರು ದಿನಗಳಿಂದ ಬಿಸಿಲಿನ ತಾಪ ಏರ ತೊಡಗಿದೆ. ಬಿಸಿಲಿನ ಝಳದಿಂದ ಪಾರಾಗಿ, ದಣಿವಾರಿಸಿಕೊಳ್ಳಲು ಜನರು ತಂಪು ಪಾನೀಯ, ಎಳೆ ನೀರು, ಮಜ್ಜಿಗೆ, ಕಲ್ಲಂಗಡಿ ಹಣ್ಣುಗಳತ್ತ ಮುಖ ಮಾಡಿದ್ದಾರೆ.

Vijaya Karnataka 12 Feb 2020, 5:00 am
ಗದಗ: ಅವಳ ನಗರದಲ್ಲಿ ಕಳೆದ ಸುಮಾರು ದಿನಗಳಿಂದ ಬಿಸಿಲಿನ ತಾಪ ಏರ ತೊಡಗಿದೆ. ಬಿಸಿಲಿನ ಝಳದಿಂದ ಪಾರಾಗಿ, ದಣಿವಾರಿಸಿಕೊಳ್ಳಲು ಜನರು ತಂಪು ಪಾನೀಯ, ಎಳೆ ನೀರು, ಮಜ್ಜಿಗೆ, ಕಲ್ಲಂಗಡಿ ಹಣ್ಣುಗಳತ್ತ ಮುಖ ಮಾಡಿದ್ದಾರೆ.
Vijaya Karnataka Web 11RUDRAGOUD1_25
ಗದಗ ನಗರದಲ್ಲಿಬಿಸಿಲಿನ ಝಳದಿಂದ ಪಾರಾಗಲು ಜನರು ಕಲ್ಲಂಗಡಿ ಹಣ್ಣುಗಳನ್ನು ತಿನ್ನುತ್ತಿದ್ದಾರೆ.


ಜಿಲ್ಲೆಯಲ್ಲಿಬೇಸಿಗೆ ಪ್ರಾರಂಭದ ದಿನಗಳಲ್ಲಿಯೇ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಅಲ್ಲಲ್ಲಿಬಾಯಾರಿಕೆ ನೀಗಿಸುವ ಕಲ್ಲಂಗಡಿ ಹಣ್ಣುಗಳ ರಾಶಿ ದಾರಿ ಹೋಕರನ್ನು ಕೈ ಬೀಸಿ ಕರೆಯುತ್ತಿದೆ. ಬಿಸಿಲಿಗೆ ಬಸವಳಿದವರು ಹಣ್ಣು ತಿಂದು ಬಾಯಾರಿಸಿಕೊಳ್ಳುತ್ತಿದ್ದಾರೆ. ಪರಿಣಾಮ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಬಿಸಿಲು ತಣಿಸಲೆಂದು ನಗರದ ಪ್ರಮುಖ ಬೀದಿಗಳಲ್ಲಿಕಲ್ಲಂಗಡಿ ಹಣ್ಣುಗಳ ವ್ಯಾಪಾರ ಭರ್ಜರಿಯಾಗಿದೆ. ಖಾಲಿ ಜಾಗಗಳಲ್ಲಿಹಣ್ಣಿನ ರಾಶಿ ಹಾಕಿಕೊಳ್ಳುವ ವ್ಯಾಪಾರಿಗಳು ತಿಂಗಳುಗಟ್ಟಲೇ ಬಿಡಾರ ಹೂಡಿ, ವ್ಯಾಪಾರಕ್ಕೆ ಮುಂದಾಗಿದ್ದಾರೆ.

ತಂಪು ಪಾನೀಯಗೆ ಮೊರೆ ಹೋದ ಜನ:
ಜಿಲ್ಲೆಗೆ ವಿವಿಧ ಕೆಲಸಕ್ಕಾಗಿ ಆಗಮಿಸಿದ್ದ ಸಾವಿರಾರು ಜನರು ಬಿಸಿಲಿನ ದಾಹ ಕಡಿಮೆ ಮಾಡಿಕೊಳ್ಳಲು ತಂಪು ಪಾನೀಯ, ಎಳೆನೀರು, ಮಜ್ಜಿಗೆಯತ್ತ ಮುಖ ಮಾಡುತ್ತಿದ್ದಾರೆ. ಜನರು ಹೆಚ್ಚಿನ ಪ್ರಮಾಣದ ಕಲ್ಲಂಗಡಿ ಹಣ್ಣಿನ ಮೊರೆ ಹೊಗುತ್ತಿದ್ದಾರೆ. ಕಲ್ಲಂಗಡಿ ಹಣ್ಣಿನಲ್ಲಿನೀರಿನಂಶ ಹೆಚ್ಚು ಇರುತ್ತದೆ. ಜತೆಗೆ ಸೇವನೆಯಿಂದ ಬಾಯಾರಿಕೆ ಕಡಿಮೆಯಾಗುತ್ತದೆ ಎಂದು ಕಲ್ಲಂಗಡಿ ಪ್ರೀಯರು ಹೇಳುತ್ತಿದ್ದಾರೆ.

ಕಲ್ಲಂಗಡಿ ಹಣ್ಣುಗಳ ಪ್ರಮುಖ ಸ್ಥಳಗಳು:
ನಗರದ ಮುಳಗುಂದ ನಾಕಾ, ಹಳೆ ಜಿಲ್ಲಾಸ್ಪತ್ರೆ, ವೀರೇಶ್ವರ ಗ್ರಂಥಾಲಯದ ಬಳಿ, ಪಂಚರಹೊಂಡ ಬೆಟಗೇರಿಯ ಬಸ್‌ ನಿಲ್ದಾಣ ಹತ್ತಿರ ಸೇರಿದಂತೆ ವಿವಿಧೆಡೆ ಕಲ್ಲಂಗಡಿ ಹಣ್ಣಿನ ಮಾರಾಟ ನಡೆಯುತ್ತಿದೆ. ವರ್ತಕರು ದೊಡ್ಡ ಪ್ರಮಾಣದಲ್ಲಿಹಣ್ಣುಗಳನ್ನು ತಂದು ರಾಶಿ ಹಾಕಿದ್ದಾರೆ. ಚಿಕ್ಕ ಹಣ್ಣನಿಂದ ಹಿಡಿದು ದೊಡ್ಡ ಗಾತ್ರದ ಹಣ್ಣುಗಳು ಇಲ್ಲಿವೆ. ಕೆಲವರು ಅಲ್ಲಿಯೇ ಕತ್ತರಿಸಿ ಅದಕ್ಕೆ ಉಪ್ಪು್ಪ, ಖಾರ ಹಾಕಿಸಿಕೊಂಡು ತಿಂದರೆ, ಕೆಲ ಗ್ರಾಹಕರು ಹಣ್ಣುಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ವರ್ಷದ 12 ತಿಂಗಳೂ ಮಾರಾಟ :
3 ಕೆಜಿ ಹಣ್ಣಿನಿಂದ 17 ಕೆಜಿ ಗಾತ್ರದ ಹಣ್ಣಿನವರೆಗೆ ಅಂದರೆ ಗಾತ್ರಕ್ಕೆ ತಕ್ಕಂತೆ 50 ರಿಂದ 250 ರವರೆಗೆ ದರ ಇದೆ.ವರ್ಷದ 12 ತಿಂಗಳೂ ಮಾರುಕಟ್ಟೆಯಲ್ಲಿಕಲ್ಲಂಗಡಿ ಹಣ್ಣು ಇರುತ್ತದೆ. ಬೇಸಿಗೆ ಕಾಲದಲ್ಲಿ3 ರಿಂದ 4 ಕ್ವಿಂಟಾಲ್‌ ಕಲ್ಲಂಗಡಿ ಮಾರಾಟ ಆಗುತ್ತದೆ. ಸಾಮಾನ್ಯ ದಿನಗಳಲ್ಲಿ1 ರಿಂದ 2 ಕ್ವಿಂಟಾಲ್‌ ಮಾರಾಟ ಆಗುತ್ತದೆ. ಬಹುತೇಕ ಜನರು ಬೇಸಿಗೆಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ.

ಹಣ್ಣಿನ ಉಪಯೋಗ :
ಕಲ್ಲಂಗಡಿ ಹಣ್ಣಿನಲ್ಲಿಶೇ.90 ರಷ್ಟು ನೀರಿನಾಂಶ ಇರುವುದರಿಂದ ದೇಹಕ್ಕೆ ಉತ್ತಮ ಪೌಷ್ಟಿಕಾಂಶ ಲಭಿಸುತ್ತದೆ. ದೇಹದ ತೂಕ ಇಳಿಕೆಯಾಗಲು ಪೂರಕವಾಗುತ್ತದೆ. ರಕ್ತ ಶುದ್ಧಿಯಾಗುವುದರೊಂದಿಗೆ ಅಸಿಡಿಟಿ ಕಡಿಮೆ ಆಗುತ್ತದೆ. ಜತೆಗೆ ಕೆಂಪು ರಕ್ತಕಣಗಳು ವೃದ್ಧಿಯಾಗುತ್ತವೆ. ಉರಿ ಮೂತ್ರ ಕಡಿಮೆಯಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ