ಆ್ಯಪ್ನಗರ

ಕಾಮಗಾರಿ ಅಪೂರ್ಣ, ಜನ ಪರದಾಟ

ನರಗುಂದ: ಇಲ್ಲಿನ ಮುಖ್ಯ ರಸ್ತೆಗೆ ಹೊಂದಿಕೊಂಡು ಹೊಸಕೇರಿ ಸಂದಿಯಿಂದ ಮುಖ್ಯ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮತ್ತು ಮೂತ್ರಾಲಯಕ್ಕೆ ಹೋಗಿ ಬರುವ ರಸ್ತೆಗೆ ಅಡ್ಡಲಾಗಿ ಚರಂಡಿ ಮೇಲೆ ಸಿಡಿ ನಿರ್ಮಿಸುವ ಉದ್ದೇಶದಿಂದ 15 ದಿನಗಳ ಹಿಂದೆ ಚರಂಡಿ ಒಡೆದು ಹಾಕಿ ಹಾಕಿ ಕೈಬಿಟ್ಟಿರುವುದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Vijaya Karnataka 6 Oct 2019, 5:00 am
ನರಗುಂದ: ಇಲ್ಲಿನ ಮುಖ್ಯ ರಸ್ತೆಗೆ ಹೊಂದಿಕೊಂಡು ಹೊಸಕೇರಿ ಸಂದಿಯಿಂದ ಮುಖ್ಯ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮತ್ತು ಮೂತ್ರಾಲಯಕ್ಕೆ ಹೋಗಿ ಬರುವ ರಸ್ತೆಗೆ ಅಡ್ಡಲಾಗಿ ಚರಂಡಿ ಮೇಲೆ ಸಿಡಿ ನಿರ್ಮಿಸುವ ಉದ್ದೇಶದಿಂದ 15 ದಿನಗಳ ಹಿಂದೆ ಚರಂಡಿ ಒಡೆದು ಹಾಕಿ ಹಾಕಿ ಕೈಬಿಟ್ಟಿರುವುದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Vijaya Karnataka Web the work is incomplete people are paralyzed
ಕಾಮಗಾರಿ ಅಪೂರ್ಣ, ಜನ ಪರದಾಟ


ಪುರಸಭೆ ಕೈಗೆತ್ತಿಕೊಂಡ ಕಾಮಗಾರಿಗಳನ್ನು ಪೂರ್ಣಗೊಳಿಸದೆ ಗುಂಡಿ ತೋಡಿ ಕೈಬಿಡುತ್ತದೆ. ಎರಡು ದಿನದ ಹಿಂದೆ ವೃದ್ದನೊಬ್ಬ ಗೋಡೆ ಸಹಾಯದಿಂದ ಚರಂಡಿ ದಾಟಲು ಹೋಗಿ ಬಿದ್ದು ಸರಕಾರಿ ಆಸ್ಪತೆಯಲ್ಲಿಸಿಕಿತ್ಸೆ ಪಡೆದ ಘಟನೆ ನಡೆದಿದೆ.

ಗುಡ್ಡದ ಹಿರೇಮಠ, ಹಸಬಿ ಅವರ ಮನೆ ಸುತ್ತಮುತ್ತಲಿನ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ವ್ಯಾಪಾರಸ್ಥರಿಗೆ ಹೊಸಕೇರಿ ಸಂದಿಯಲ್ಲಿನ ಮೂತ್ರಾಲಯಕ್ಕೆ ಹೋಗಲಾರದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಲವರು ಗೋಡೆ ಸಹಾಯದಿಂದ ಚರಂಡಿ ದಾಟಲು ಹರಸಾಹಸ ಪಡುತ್ತಿದ್ದಾರೆ. ಇದೆ ಮಾರ್ಗವಾಗಿ ಮುಖ್ಯ ಮಾರುಕಟ್ಟೆಗೆ ಹೋಗುವ ಜನ ಸುತ್ತುವರಿದು ಹೋಗುವಂತಾಗಿದೆ.

ಮುಖ್ಯಾಧಿಕಾರಿ,ಎಂಜನೀಯರ್‌ ಸಹ ಕಚೇರಿಯಲ್ಲಿಲ್ಲ. ಪುರಸಭೆ ಸದಸ್ಯರು ಇದ್ದು ಇಲ್ಲದಂತಾಗಿದ್ದು ಸಮಸ್ಯೆಗಳನ್ನು ಯಾರಲ್ಲಿಹೇಳಿಕೊಳ್ಳುವುದು ಎಂದು ಹಳೆ ಬೆಣ್ಣಿ ಬಜಾರದ ನಿವಾಸಿಗಳಾದ ಎಂ.ಬಿ.ಕಲ್ಲನಗೌಡ್ರ, ಎಲ್ಲಪ್ಪ ಜೋಳದ, ಚನ್ನಬಸಪ್ಪ ಬಾಳಿಕಾಯಿ, ಸಿದ್ದು ಬಾಳಿಕಾಯಿ, ಗುರಪ್ಪ ಸಿಂದೋಗಿ, ಈಶ್ವರಪ್ಪ ಬಾಳಿಕಾಯಿ ಮುಂತಾದವರು ಸಿಡಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಪರದಾಟ ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ