ಆ್ಯಪ್ನಗರ

ಕಾಲೇಜು ಸ್ಥಳಾಂತರದಲ್ಲಿ ಹಸ್ತಕ್ಷೇಪ ಇಲ್ಲ

ಗದಗ : ರಾಜ್ಯದಲ್ಲಿ ಸಮಿಶ್ರ ಸರಕಾರ ಇರುವುದರಿಂದ ಸರಕಾರದ ಆದೇಶದಂತೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಐದು ವರ್ಷದಲ್ಲಿ ರೋಣ ಮತಕ್ಷೇತ್ರಕ್ಕೆ ಮಾಜಿ ಶಾಸಕ ಜಿ.ಎಸ್‌. ಪಾಟೀಲ್‌ರ ಕೊಡುಗೆ ಏನು? ಎಂದು ಅವರು ಪ್ರಶ್ನೆ

Vijaya Karnataka 3 Jun 2019, 5:00 am
ಗದಗ : ರಾಜ್ಯದಲ್ಲಿ ಸಮಿಶ್ರ ಸರಕಾರ ಇರುವುದರಿಂದ ಸರಕಾರದ ಆದೇಶದಂತೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.
Vijaya Karnataka Web there is no intervention at college migration
ಕಾಲೇಜು ಸ್ಥಳಾಂತರದಲ್ಲಿ ಹಸ್ತಕ್ಷೇಪ ಇಲ್ಲ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಐದು ವರ್ಷದಲ್ಲಿ ರೋಣ ಮತಕ್ಷೇತ್ರಕ್ಕೆ ಮಾಜಿ ಶಾಸಕ ಜಿ.ಎಸ್‌. ಪಾಟೀಲ್‌ರ ಕೊಡುಗೆ ಏನು? ಎಂದು ಅವರು ಪ್ರಶ್ನೆ ಮಾಡಿದರು. ರೋಣ ನಗರದಲ್ಲಿನರುವ ಡಿಗ್ರಿ ಕಾಲೇಜಿಗೆ ನನ್ನ ಅವಧಿಯಲ್ಲಿ ಇದು ಕೇವಲ ಒಂದು ಕೊಠಡಿಯಲ್ಲಿ ಮಾತ್ರ ನಡೆಯುತ್ತಿತ್ತು. ಜತೆಗೆ ಪಿಯುಸಿ ಕಾಲೇಜಿನಲ್ಲಿ ತರಗತಿ ನಡೆಯುತ್ತಿತ್ತು. ನಂತರ ಅಧಿಕಾರ ಸ್ವೀಕರಿಸಿದ ನಂತರ ಸುಮಾರು ನಾಲ್ಕು ಕೋಟಿಗೂ ಅಧಿಕ ಹಣದಲ್ಲಿ ಇಂತಹ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದರು.

ಗಜೇಂದ್ರಗಡ ಮತ್ತು ರೋಣದಲ್ಲಿ ಬೃಹದಾಕಾರದ ಆಡಿಟೋರಿಯಂ ನಿರ್ಮಾಣ ಮಾಡುವ ಹಂಬಲ ಇತ್ತು. ಆದರೆ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಂಡಿತು. ಕಾಂಗ್ರೆಸ್‌ ಸರಕಾರದ ಆಡಳಿತದಲ್ಲಿ ಐದು ವರ್ಷ ಸಂಪೂರ್ಣವಾಗಿ ಪೂರ್ಣಗೊಂಡರೂ ಆಡಿಟೋರಿಯಂ ಕಾರ್ಯ ಮಾತ್ರ ಪೂರ್ಣಗೊಂಡಿಲ್ಲ. ಜತೆಗೆ ರೋಣಕ್ಕೆ ಹೈಸ್ಕೂಲ್‌ ಕಾಲೇಜು ಬಸ್‌ ಸ್ಟ್ಯಾಂಡ್‌ ಅಗ್ನಿಶಾಮಕ ದಳ ಮಿನಿ ವಿಧಾನಸೌಧ ಹಾಗೂ ಇನ್ನಿತರ ಜನಪರ ಯೋಗಿ ಕಾರ್ಯಗಳನ್ನು ಮಾಡಿದ್ದೇನೆ. ಆದರೆ ಜಿಎಸ್‌ ಪಾಟೀಲರು ಇಂತಹ ಯಾವುದೇ ಕಾರ್ಯಗಳನ್ನು ಮಾಡಿಲ್ಲ ಎಂದು ಆರೋಪಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಹೊಸದಾಗಿ ಡಿಗ್ರಿ ಕಾಲೇಜಿನ್ನು ಬದಾಮಿ ತಾಲೂಕಿನ ಗುಳೇದಗುಡ್ಡಕ್ಕೆ ತರಬಹುದಾಗಿತ್ತು. ಆದರೆ ನಾವು ವಿರೋಧ ಪಕ್ಷ ದಲ್ಲಿ ಇದ್ದೇವೆ. ಏನನ್ನು ಕೇಳುವುದಿಲ್ಲ ಎಂದು ಈ ರೀತಿಯಾಗಿ ಹುನ್ನಾರ ನಡೆದಿದೆ ಎಂದರು.

ಅಶೋಕ ವನ್ನಾಲ, ಶರಣಪ್ಪ ಕಂಬಳಿ, ರವಿರಾಜ ಚವ್ಹಾಣ, ಪ್ರಕಾಶ ಸಂಕಣ್ಣನವರ, ಮುತ್ತಣ್ಣ ಲಿಂಗನಗೌಡ್ರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ