ಆ್ಯಪ್ನಗರ

ವಿಶೇಷ ಸಭೆ ನಡೆಸಲು ಠರಾವ್‌ ಮಾಡಿ

ಶಿರಹಟ್ಟಿ: ಕಂದಾಯ ಇಲಾಖೆಯಲ್ಲಿಯ ಸಮಸ್ಯೆ ಬಗೆಹರಿಸಬೇಕಾದಂತಹ ತಹಸೀಲ್ದಾರ ಹಾಗೂ ಲಕ್ಷೆತ್ರ್ಮೕಶ್ವರ ತಹಸೀಲ್ದಾರ ಹಲವಾರು ಬಾರಿ ಸಭೆಗೆ ಗೈರು ಉಳಿಯುತ್ತಿರುವುದರಿಂದ ನಾವೇ ಅವರಿದ್ದಲ್ಲಿಗೆ ತೆರಳಿ ಶಿರಹಟ್ಟಿ ಹಾಗೂ ಲಕ್ಷೆತ್ರ್ಮೕಶ್ವರ ತಾಲೂಕು ಕೇಂದ್ರಗಳಲ್ಲಿವಿಶೇಷ ಸಭೆ ನಡೆಸುವುದಕ್ಕೆ ಠರಾವ್‌ ಪಾಸ್‌ ಮಾಡಬೇಕೆಂದು ಅಶೋಕಯ್ಯ ಮುಳಗುಂದಮಠ ,ಉಮಾ ಹೊನಗಣ್ಣವರ ಆಗ್ರಹಿಸಿದರು. ಅವರು ಶಿರಹಟ್ಟಿ ತಾಪಂ ಸಭಾ ಭವನದಲ್ಲಿಅಧ್ಯಕ್ಷೆ ಸುಶೀಲವ್ವ ಲಮಾಣಿ ಅಧ್ಯಕ್ಷತೆಯಲ್ಲಿಜರುಗಿದ ಸಭೆಯಲ್ಲಿಮಾತನಾಡಿದರು.

Vijaya Karnataka 4 Dec 2019, 5:00 am
ಶಿರಹಟ್ಟಿ: ಕಂದಾಯ ಇಲಾಖೆಯಲ್ಲಿಯ ಸಮಸ್ಯೆ ಬಗೆಹರಿಸಬೇಕಾದಂತಹ ತಹಸೀಲ್ದಾರ ಹಾಗೂ ಲಕ್ಷೆತ್ರ್ಮೕಶ್ವರ ತಹಸೀಲ್ದಾರ ಹಲವಾರು ಬಾರಿ ಸಭೆಗೆ ಗೈರು ಉಳಿಯುತ್ತಿರುವುದರಿಂದ ನಾವೇ ಅವರಿದ್ದಲ್ಲಿಗೆ ತೆರಳಿ ಶಿರಹಟ್ಟಿ ಹಾಗೂ ಲಕ್ಷೆತ್ರ್ಮೕಶ್ವರ ತಾಲೂಕು ಕೇಂದ್ರಗಳಲ್ಲಿವಿಶೇಷ ಸಭೆ ನಡೆಸುವುದಕ್ಕೆ ಠರಾವ್‌ ಪಾಸ್‌ ಮಾಡಬೇಕೆಂದು ಅಶೋಕಯ್ಯ ಮುಳಗುಂದಮಠ ,ಉಮಾ ಹೊನಗಣ್ಣವರ ಆಗ್ರಹಿಸಿದರು. ಅವರು ಶಿರಹಟ್ಟಿ ತಾಪಂ ಸಭಾ ಭವನದಲ್ಲಿಅಧ್ಯಕ್ಷೆ ಸುಶೀಲವ್ವ ಲಮಾಣಿ ಅಧ್ಯಕ್ಷತೆಯಲ್ಲಿಜರುಗಿದ ಸಭೆಯಲ್ಲಿಮಾತನಾಡಿದರು.
Vijaya Karnataka Web throw in a special meeting
ವಿಶೇಷ ಸಭೆ ನಡೆಸಲು ಠರಾವ್‌ ಮಾಡಿ


ಎರಡು ತಾಲೂಕುಗಳ ತಹಸೀಲ್ದಾರರನ್ನು ಸಂಪರ್ಕಿಸಿ ಸಭೆಯ ದಿನಾಂಕ ಗೊತ್ತುಪಡಿಸಬೇಕು. ಮುಂದಿನ ಸಾಮಾನ್ಯ ಸಭೆಗೆ ಇಬ್ಬರು ತಹಸೀಲ್ದಾರರು ಸಭೆಗೆ ಹಾಜರಾಗದಿದ್ದಲ್ಲಿಸಭೆ ನಡೆಸಲು ಅವಕಾಶ ಕಲ್ಪಿಸಬಾರದು ಎಂದು ಸದಸ್ಯ ಮುಳಗುಂದಮಠ ಹೇಳಿದರು. ಸದಸ್ಯೆ ಉಮಾ ಹೊನಗಣ್ಣವರ ಸಹಿತ ಗ್ರಾಮೀಣ ಭಾಗದಲ್ಲಿವೃದ್ದಾಪ್ಯ ವೇತನ ಹಲವು ತಿಂಗಳಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿಲ್ಲ. ಇದಕ್ಕೆ ನಿಖರ ಕಾರಣ ತಿಳಿಯುತ್ತಿಲ್ಲ. ಈ ಬಗ್ಗೆ ಹಲವು ಸಭೆಗಳಲ್ಲಿಪ್ರಸ್ತಾಪ ಮಾಡುತ್ತಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲಎಂದು ದೂರಿದರು.ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಇಒ ಡಾ. ಎನ್‌.ಎಚ್‌.ಓಲೇಕಾರ, ಮುಂದಿನ ಸಭೆಗೆ ಇಬ್ಬರು ತಹಸೀಲ್ದಾರರನ್ನು ಕರೆಸಲಾಗುವುದು ಎಂದರು.

106 ಕೊಠಡಿ ದುರಸ್ತಿಗೆ 2ಕೋಟಿ 65ಲಕ್ಷ :
ಮಳೆಯಿಂದ ಹಾನಿಗೀಡಾದಂತಹ 44 ಶಾಲೆಗಳ 106 ಕೊಠಡಿಗಳಿಗೆ 2ಕೋಟಿ 65ಲಕ್ಷ ಮಂಜೂರಾಗಿದೆ. ಈ ಅನುದಾನ ಶಾಲಾ ಎಸ್‌ಡಿಎಂಸಿ ಖಾತೆಗೆ ಜಮಾ ಆಗಲಿದೆ. ಜಿಪಂ ವತಿಯಿಂದಲೂ ಸಹ 2ಕೋಟಿ ನೀಡುವುದಾಗಿ ಹೇಳಿದ್ದಾರೆ. 22 ಶಾಲಾ ಕೊಠಡಿ ನೆಲಸಮಗೊಳಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ತಿಳಿಸಿದರು.

ಕಳಪೆ ಕಾಮಗಾರಿಗೆ ಯಾರು ಹೊಣೆ ?
ಶಿರಹಟ್ಟಿ ತಾಲೂಕಿನಲ್ಲಿಹಾದು ಹೋಗಿರುವ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ಅಪೂರ್ಣಗೊಂಡಿದೆ. ಜಂಗಲ್‌ ಕ್ಲೀಯರನ್ಸ್‌ ಆಗಿಲ್ಲ, ಕಳಪೆ ಕಾಮಗಾರಿ ಆಗಿದೆ ಇದಕ್ಕೆ ಯಾರು ಹೊಣೆ ? ಬಿಲ್‌ ಏಕೆ ಮಾಡಿದ್ದೀರಿ ಎಂದು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಲೋಕೋಪಯೋಗಿ ಇಲಾಖೆ ಎಇಇ ರಾಮಮೂರ್ತಿ ಅವರಿಗೆ ಪ್ರಶ್ನಿಸಿದರು. ಇದಕ್ಕೆ ಎಇಇ ಪ್ರತಿಕ್ರಿಯಿಸಿ ಗುತ್ತಿಗೆದಾರರಿಗೆ ಈಗಾಗಲೇ 3ಬಾರಿ ನೋಟಿಸ್‌ ನೀಡಲಾಗಿದೆ. ಫೈನಲ್‌ ಬಿಲ್‌ ಆಗಿಲ್ಲಎಂದರು.

ಉಪಾಧ್ಯಕ್ಷೆ ಪವಿತ್ರಾ ಮಂಜುನಾಥ ಶಂಕಿನದಾಸರ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಇತರರು ಉಪಸ್ಥಿತರಿದ್ದರು.

ಗಿಡ ಇಲ್ಲಾಂದ್ರೆ ಮೆಂಟೆನೆನ್ಸ್‌ ಏನ್‌ ಮಾಡ್ತೀರಿ :
ಅರಣ್ಯ ಇಲಾಖೆ ಪ್ರಗತಿ ವರದಿಯಲ್ಲಿಕುಂದ್ರಳ್ಳಿ-ಲಕ್ಷೆತ್ರ್ಮೕಶ್ವರ, ಅಕ್ಕಿಗುಂದ-ಶೆಟ್ಟಿಕೇರಿ, ಬಟ್ಟೂರ-ಬಡ್ನಿ ರಸ್ತೆ ಬದಿ ಗಿಡಗಳೇ ಇಲ್ಲಆದರೂ ಮೆಂಟೆನೆನ್ಸ್‌ ಏನ್‌ ಮಾಡ್ತೀರಿ ? ನಿಮ್ಮ ಕಥೆ ಕೇಳೋಕೆ ನಾವು ಇಲ್ಲಿಬಂದಿಲ್ಲಎಂದು ಪರಸಪ್ಪ ಇಮ್ಮಡಿ ಪ್ರಶ್ನಿಸಿದರು. ವರದಿ ಪ್ರಕಾರ ನಮಗೆ ನಿಮ್ಮ ಇಲಾಖೆ ವತಿಯಿಂದ ಸಸಿ ಇರುವ ಬಗ್ಗೆ ಸ್ಥಳ ಪರೀಶೀಲನೆಗೆ ನೀವು ಯಾವಾಗ ಆಗಮಿಸುತ್ತೀರಿ ಎಂಬುದನ್ನು ಈಗಲೇ ಹೇಳಬೇಕು ಎಂದು ಪಟ್ಟು ಹಿಡಿದರು. ವಲಯ ಅರಣ್ಯಾಧಿಕಾರಿ ಕಟ್ಟಿಮನಿ ಮಾತನಾಡಿ, ಈ ಕುರಿತು ಡಿ.9ರಂದು ಬರುವುದಾಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ