ಆ್ಯಪ್ನಗರ

ವಿಚಾರ ಸಂಕಿರಣದಲ್ಲಿ ಡಾ.ಬಿರಾದಾರ ಸಲಹೆ

ಗದಗ : ಪ್ರತಿಯೊಬ್ಬ ರೈತ ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಲಾಭಗಳಿಸುವತ್ತ ಗಮನ ಹರಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಸಿ. ಬಿರಾದಾರ ಹೇಳಿದರು.

ವಿಕ ಸುದ್ದಿಲೋಕ 11 Apr 2016, 4:00 am
ಗದಗ : ಪ್ರತಿಯೊಬ್ಬ ರೈತ ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ಲಾಭಗಳಿಸುವತ್ತ ಗಮನ ಹರಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಸಿ. ಬಿರಾದಾರ ಹೇಳಿದರು.
Vijaya Karnataka Web tip seminar dabiradara
ವಿಚಾರ ಸಂಕಿರಣದಲ್ಲಿ ಡಾ.ಬಿರಾದಾರ ಸಲಹೆ


ನಗರದ ಜ.ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ‘ಸ್ವಾವಲಂಬಿ ಕಷಿಕ, ಆಹಾರ ಭದ್ರತೆಯ ಪ್ರತೀಕ’ ಎಂಬ ಕಷಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಸತತ ಬರಗಾಲದಿಂದ ದೂರ ಇರಲು ಪ್ರತಿಯೊಬ್ಬ ರೈತನು ಕೃಷಿಗೆ ಪೂರಕವಾದ ಉಪಕಸುಬುಗಳಾದ ಹೈನುಗಾರಿಕೆ, ಕೋಳಿ, ಆಡು, ಕುರಿ, ಮೊಲ ಸಾಕಾಣಿಕೆ ಜತೆಗೆ ಮೀನು ಹಾಗೂ ಜೇನು ಸಾಕಾಣಿಕೆ ಮಾಡಬೇಕು ಎಂದು ಸಲಹೆ ಮಾಡಿದರು.

ಕೃಷಿಯಲ್ಲಿ ತಾಂತ್ರಿಕತೆಗಳನ್ನು ಸದಾ ಹುಡುಕುತ್ತಿರುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ತೆಂಗು, ಬಾಳೆ, ಅಡಕೆ, ಹತ್ತಿ ಮೆಕ್ಕೆಜೋಳ, ತರಕಾರಿಗಳು, ಜೋಳ, ಹೈನುಗಾರಿಕೆ ಮತ್ತು ಹಸಿರು ಮನೆ ಮುಂತಾದ ಬೆಳೆಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಬೆಳೆ ಪಡೆಯಲು ಸಾಧ್ಯವಾಗುತ್ತದೆ.

ಕಳೆದ ವರ್ಷ ಸಾಕುಷ್ಟು ರೈತರು ಆತ್ಮಹತ್ಯೆಗೆ ಬಲಿಯಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯವು ರೈತ ಚೇತನ ಸಹಾಯವಾಣಿ ಪ್ರಾರಂಭ ಮಾಡಿದೆ. ಈ ಮೂಲಕ ರೈತರಿಗೆ ದಿನದ 24 ಗಂಟೆ ಹಲವಾರು ಸಲಹೆಗಳನ್ನು ನೀಡಲಾಗುತ್ತಿದೆ.

ಹೊಲಗಳಿಗೆ ರೈತರು ರಾಸಾಯನಿಕ ಗೊಬ್ಬರ ಹಾಕದೆ ಕೊಟ್ಟಿಗೆ ಗೊಬ್ಬರ ಹಾಕುವುದರಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಯುವಕ ಮತ್ತು ಯುವತಿಯರನ್ನು ಕೃಷಿಯತ್ತ ಹೆಚ್ಚು ಒಲವು ಮೂಡಿಸುವ ಸಲುವಾಗಿ ಕೃಷಿ ವಿಶ್ವವಿದ್ಯಾಲಯದಿಂದ ಪ್ರತಿ ವರ್ಷ ಕೃಷಿ ಯುವಕ, ಕೃಷಿ ಯುವತಿಯರನ್ನು ಗುರುತಿಸಿ ಅವರಿಗೆ ಸನ್ಮಾನ ನೀಡಿ ಇತರೆ ಯುವಕರಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ವಿ.ಐ.ಬೆಣಗಿ ಮಾತನಾಡಿ, ಮಣ್ಣಿನ ಫಲವತ್ತತೆ ಹೆಚ್ಚಿಸುವ, ರೈತನ ಒಡನಾಡಿಯಾಗಿರುವ ಎರೆಹುಳು ಗೊಬ್ಬರವು ನಿಸರ್ಗ ನೀಡಿರುವ ಅತ್ಯಮೂಲ್ಯ ಕೊಡುಗೆಯಾಗಿದ್ದು, ರೈತರು ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ಕೊಟ್ಟಿಗೆ ಹಾಗೂ ಎರೆಹುಳು ಗೊಬ್ಬರ ಬಳಸಬೇಕು ಎಂದು ತಿಳಿಸಿದರು. ಜ.ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕೃಷಿಯಲ್ಲಿ ಸಾಧನೆ ಮಾಡಿದ ಪ್ರೇಮಾ ಮೇಟಿ, ಸಿದ್ದಪ್ಪ ಹುಲಜೋಗಿ, ಅಸೀಫ್‌ಅಲಿ ದಾವಲಸಾಬ್ ಹುಲಜೋಗಿ ಅವರನ್ನು ಶ್ರೀಗಳು ಸನ್ಮಾನಿಸಿದರು.

ಡಾ.ಬಿ.ಎಚ್.ಬಬಲಾದ, ಡಾ.ಪಿ.ಎಸ್.ಹೂಗಾರ, ಡಾ.ಸುರೇಶ ಅಳಗುಂಡಗಿ, ಡಾ.ಶ್ರೀಪಾದ ಕುಲಕರ್ಣಿ, ಡಾ.ಗೋಪಾಲ ಎಂ, ಡಾ.ಎಸ್.ಪಿ.ಹಲಗಲಿಮಠ, ಕೂಡ್ಲೆಪ್ಪ ಗುಡಿಮನಿ, ಬಸವರಾಜ ಹ್ಯಾಟಿ, ಪ್ರಕಾಶ ಕರಿಸೋಮನಗೌಡ್ರ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ