ಗದಗ : ಅಲ್ಪಸಂಖ್ಯಾತರ ಮೇಲೆ ಪೂರ್ವಾಗ್ರಹ ಪೀಡಿತರಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಜರತ್ ಟಿಪ್ಪು ಸುಲ್ತಾನ ಅವರ ಜಯಂತಿ ರದ್ದುಗೊಳಿಸುವ ಮೂಲಕ ರಾಜ್ಯದಲ್ಲಿ ಸಹೋದರ ಭಾವನೆಯಿಂದ ಬಾಳುತ್ತಿರುವ ಹಿಂದೂ ಮುಸ್ಲೀಂರ ಮಧ್ಯೆ ಕಂದಕವನ್ನುಂಟುಮಾಡಿದ್ದಾರೆ ಎಂದು ರಾಜ್ಯ ಮುಸ್ಲೀಂ ಜಾಗೃತ ವೇದಿಕೆ ರಾಜ್ಯ ಸಂಚಾಲಕ ನಿಸಾರಅಹ್ಮದ ಖಾಜಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಜರತ ಟಿಪ್ಪು ಸುಲ್ತಾನ ಅವರು ಕೇವಲ ಅಲ್ಪಸಂಖ್ಯಾತರಿಗೆ ಸೇರಿದ ರಾಜರಲ್ಲ. ಅಂದಿನ ಇಡೀ ಮೈಸೂರು ರಾಜ್ಯದ ರಾಜರಾಗಿದ್ದವರು, ಅಂದಿನ ಬ್ರಿಟಿಷರ ವಿರುದ್ಧ ಹೋರಾಡಿ ಹಿಂದೂ ಮುಸ್ಲೀಮರ ನಡುವೆ ಬಾಂಧವ್ಯದ ಕೊಂಡಿಯಾಗಿದ್ದರು. ಶೃಂಗೇರಿ ಮಠ ಸೇರಿದಂತೆ ಹಲವಾರು ಹಿಂದೂ ದೇವಾಲಯ ಸಂರಕ್ಷಿಸಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಡಗು ಜಿಲ್ಲೆಯ ಶಾಸಕ ಕೆ.ಜಿ.ಬೋಪಯ್ಯ ಅವರ ಮನವಿಯ ಮೇರೆಗೆ ಹಜರತ್ ಟಿಪ್ಪು ಸುಲ್ತಾನ ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವುದು ಪ್ರಜಾಪ್ರಭುತ್ವ ವಿರೋಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಜರತ ಟಿಪ್ಪು ಸುಲ್ತಾನ ಅವರು ಕೇವಲ ಅಲ್ಪಸಂಖ್ಯಾತರಿಗೆ ಸೇರಿದ ರಾಜರಲ್ಲ. ಅಂದಿನ ಇಡೀ ಮೈಸೂರು ರಾಜ್ಯದ ರಾಜರಾಗಿದ್ದವರು, ಅಂದಿನ ಬ್ರಿಟಿಷರ ವಿರುದ್ಧ ಹೋರಾಡಿ ಹಿಂದೂ ಮುಸ್ಲೀಮರ ನಡುವೆ ಬಾಂಧವ್ಯದ ಕೊಂಡಿಯಾಗಿದ್ದರು. ಶೃಂಗೇರಿ ಮಠ ಸೇರಿದಂತೆ ಹಲವಾರು ಹಿಂದೂ ದೇವಾಲಯ ಸಂರಕ್ಷಿಸಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಡಗು ಜಿಲ್ಲೆಯ ಶಾಸಕ ಕೆ.ಜಿ.ಬೋಪಯ್ಯ ಅವರ ಮನವಿಯ ಮೇರೆಗೆ ಹಜರತ್ ಟಿಪ್ಪು ಸುಲ್ತಾನ ಜಯಂತಿ ಆಚರಣೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿರುವುದು ಪ್ರಜಾಪ್ರಭುತ್ವ ವಿರೋಧವಾಗಿದೆ ಎಂದು ಅವರು ತಿಳಿಸಿದ್ದಾರೆ.