ಆ್ಯಪ್ನಗರ

ಇಂದು ಡಾ. ತೋಂಟದ ಶ್ರೀ ಪ್ರಥಮ ಪುಣ್ಯಸ್ಮರಣೆ

ಗದಗ: ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ಪ್ರಥಮ ಪುಣ್ಯಸ್ಮರಣೆ, ಅನುಭವ ಮಂಟಪ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ಗ್ರಂಥಗಳ ಬಿಡುಗಡೆ, ಪುತ್ಥಳಿ ಅನಾವರಣ ಸಮಾರಂಭ ಜ. ತೋಂಟದಾರ್ಯ ಮಠದಲ್ಲಿಅ. 10ರಂದು ಬೆಳಗ್ಗೆ 10 ಕ್ಕೆ ಜರುಗಲಿದೆ.

Vijaya Karnataka Web 9 Oct 2019, 5:00 am
ಗದಗ: ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ಪ್ರಥಮ ಪುಣ್ಯಸ್ಮರಣೆ, ಅನುಭವ ಮಂಟಪ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ಗ್ರಂಥಗಳ ಬಿಡುಗಡೆ, ಪುತ್ಥಳಿ ಅನಾವರಣ ಸಮಾರಂಭ ಜ. ತೋಂಟದಾರ್ಯ ಮಠದಲ್ಲಿಅ. 10ರಂದು ಬೆಳಗ್ಗೆ 10 ಕ್ಕೆ ಜರುಗಲಿದೆ.
Vijaya Karnataka Web today dr mr first greetings of the garden
ಇಂದು ಡಾ. ತೋಂಟದ ಶ್ರೀ ಪ್ರಥಮ ಪುಣ್ಯಸ್ಮರಣೆ


2019ನೇ ಸಾಲಿನ ಡಾ. ತೋಂಟದ ಸಿದ್ಧಲಿಂಗ ಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಬಸವ ಟಿವಿ ಮಾಲೀಕ ಈ. ಕೃಷ್ಣಪ್ಪ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರದಾನ ಮಾಡುವರು. ಪ್ರಶಸ್ತಿಯು 5 ಲಕ್ಷ ರೂ. ಮತ್ತು ಸಮ್ಮಾನ ಪತ್ರ ಒಳಗೊಂಡಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗ್ರಂಥ ಬಿಡುಗಡೆಗೊಳಿಸುವರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳು ಪುತ್ಥಳಿ ಅನಾವರಣಗೊಳಿಸುವರು. ಸಚಿವ ಸಿ.ಸಿ. ಪಾಟೀಲ ಅವರು ಲಿಂ. ತೋಂಟದ ಸಿದ್ಧಲಿಂಗ ಶ್ರೀಗಳ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಲಿದ್ದಾರೆ.

ಆದಿಚುಂಚನಗಿರಿ ಸಂಸ್ಥಾನಮಠದ ನಿರ್ಮಲಾನಂದನಾಥ ಸ್ವಾಮೀಜಿ ಅನುಭವ ಮಂಟಪ ಲೋಕಾರ್ಪಣೆಗೊಳಿಸುವರು. ಶಾಸಕ ಎಚ್‌.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಸಂಸದ ಶಿವಕುಮಾರ ಉದಾಸಿ ಇತರರು ಪಾಲ್ಗೊಳ್ಳುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ