ಆ್ಯಪ್ನಗರ

ಇಂದು ರೈತ ಹುತಾತ್ಮ ದಿನ,15 ಜನಕ್ಕೆ ಮಾತ್ರ ಅವಕಾಶ

ನರಗುಂದ: 40ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜು.21 ರಂದು ಬೆಳಗ್ಗೆ 9 ರಿಂದ 1.30ರೊಳಗೆ ಹುತಾತ್ಮ ವೀರಗಲ್ಲಿಗೆ ನಾನಾ ರಾಜಕೀಯ ಪಕ್ಷಗಳು, ರೈತ ಪರ, ಕನ್ನಡ ಪರ ಸಂಘ ಸಂಸ್ಥೆಗಳಿಗೆ ಶ್ರದ್ಧಾಂಜಲಿ ಅರ್ಪಿಸಲುವ ಕಾಲಾವಕಾಶ ನೀಡಲಾಗಿದೆ.

Vijaya Karnataka 21 Jul 2020, 5:00 am
ನರಗುಂದ: 40ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜು.21 ರಂದು ಬೆಳಗ್ಗೆ 9 ರಿಂದ 1.30ರೊಳಗೆ ಹುತಾತ್ಮ ವೀರಗಲ್ಲಿಗೆ ನಾನಾ ರಾಜಕೀಯ ಪಕ್ಷಗಳು, ರೈತ ಪರ, ಕನ್ನಡ ಪರ ಸಂಘ ಸಂಸ್ಥೆಗಳಿಗೆ ಶ್ರದ್ಧಾಂಜಲಿ ಅರ್ಪಿಸಲುವ ಕಾಲಾವಕಾಶ ನೀಡಲಾಗಿದೆ.
Vijaya Karnataka Web 20NRD1_25
ನರಗುಂದ ರೈತ ಹುತಾತ್ಮ ಈರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲು.


ಕೊರೊನಾ ಹಿನ್ನೆಲೆಯಲ್ಲಿಸಭೆ ಸಮಾರಂಭಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿಹತ್ತರಿಂದ 15 ಜನರಿಗೆ ಮಾತ್ರ ಶ್ರದ್ಧಾಂಜಲಿ ಅರ್ಪಿಸಿ ವೀರಗಲ್ಲುಎದುರಲ್ಲಿಭಾಷಣಕ್ಕೆ ಅವಕಾಶವಿದೆ. ಹೆಚ್ಚು ಜನರು ಸೇರಲು ಅವಕಾಶವಿಲ್ಲಎಂದು ತಾಲೂಕು ಆಡಳಿತ ಸೂಚನೆ ನೀಡಿದೆ.

ತಹಸೀಲ್ದಾರ ಕಚೇರಿಯಲ್ಲಿನಡೆದ ಪೂರ್ವಭಾವಿ ಸಭೆಯಲ್ಲಿಸಿದ್ಧ ಪಡಿಸಿದ ವೇಳಾಪಟ್ಟಿಯಂತೆ ಬೆಳಗ್ಗೆ 9 ಕ್ಕೆ ರೈತ ಸಂಘ, ಕರವೇಯಿಂದ, 10.30ಕ್ಕೆ ಕಳಸಾ ಬಂಡೂರಿ, ಮಹದಾಯಿ ಮಹಾವೇದಿಕೆ, ಜೈ ಕರ್ನಾಟಕದಿಂದ, 11-15ಕ್ಕೆ ಬಿಜೆಪಿಯಿಂದ, 12 ಕ್ಕೆ ಜೆಡಿಎಸ್‌ಯಿಂದ, 12.45ಕ್ಕೆ ಕಾಂಗ್ರೆಸ್‌ ಪಕ್ಷ ಹಾಗೂ ಮಲಪ್ರಭಾ ಅಚ್ಚುಕಟ್ಟು ಹೋರಾಟ ಸಮಿತಿ, ರೈತ ಶ್ರಮಿಕರ ಪಕ್ಷಾತೀತ ಹೋರಾಟ ಸಮಿತಿಯಿಂದ ಶ್ರದ್ಧಾ ಂಜಲಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ರೈತ ಚಳವಳಿಗೆ 40 ವರ್ಷ:
40 ವರ್ಷಗಳ ಹಿಂದೆ ನಡೆದ ನರಗುಂದ ರೈತ ಚಳವಳಿಗೆ ಇನ್ನು ನ್ಯಾಯ ಸಿಕ್ಕಿಲ್ಲವೆನ್ನುವುದು ರೈತರ ಆರೋಪ.
ಜು.21,1981 ರೈತರ ಜಮೀನುಗಳಿಗೆ ನೀರು ಹರಿಸದೆ ನೀರಿನ ಕರ ವಸೂಲಿಗೆ ನಿಂತ ಸರಕಾರದ ವಿರುದ್ದ ಸೆಡ್ಡು ಹೊಡೆದ ಗುಂಡಿಗೆ ಎದೆಕೊಟ್ಟು ನಿಂತು ಪ್ರಾಣಾರ್ಪಣೆ ಗೈದ ರೈತರು ತಮ್ಮ ಶಕ್ತಿ ತೋರಿಸಿಕೊಟ್ಟ ದಿನ. ಉತ್ತರ ಕರ್ನಾಟಕ ಜನರ ಬೇಡಿಕೆಯಾದ ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ತನ್ನಿ ಮಲಪ್ರಭೆಗೆ ನೀರು ಹರಿಸಿ ಎಂಬ ಹಕ್ಕೊತ್ತಾಯಕ್ಕೆ ಐದು ದಶಗಳ ಇತಿಹಾಸವಿದೆ. ರಾಜಕೀಯ ಹಗ್ಗ ಜಗ್ಗಾಟದ ಮಧ್ಯ ಕಳಸಾ ಬಂಡೂರಿ ಯುವ ಹೋರಾಟ ಸಮಿತಿ, ರೈತ ಸೇನಾ ಕರ್ನಾಟಕ ಸೇರಿ ಹಲವು ಸಂಘಟನೆ ಹೋರಾಟ ಮಾಡಿಕೊಂಡು ಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ