ಆ್ಯಪ್ನಗರ

ಇಂದು ಮಹಾಂತ ಶ್ರೀಗಳ ಸ್ಮರಣೆ

ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಮೇ 27ರಂದು ತೋಂಟದಾರ್ಯ ಮಠದಲ್ಲಿ ನಡೆಯುವ 2434 ನೇಯ ಶಿವಾನುಭವದಲ್ಲಿ ಮಹಾಂತ ಜೋಳಿಗೆಯ ಇಳಕಲ್‌ ಪೂಜ್ಯ ಡಾ. ಮಹಾಂತಪ್ಪಗಳ ಪ್ರಥಮ ಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

Vijaya Karnataka 27 May 2019, 5:00 am
ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಮೇ 27ರಂದು ತೋಂಟದಾರ್ಯ ಮಠದಲ್ಲಿ ನಡೆಯುವ 2434 ನೇಯ ಶಿವಾನುಭವದಲ್ಲಿ ಮಹಾಂತ ಜೋಳಿಗೆಯ ಇಳಕಲ್‌ ಪೂಜ್ಯ ಡಾ. ಮಹಾಂತಪ್ಪಗಳ ಪ್ರಥಮ ಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
Vijaya Karnataka Web today is the memory of mahanta sree
ಇಂದು ಮಹಾಂತ ಶ್ರೀಗಳ ಸ್ಮರಣೆ


ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ. ಮಹಾಂತ ಶಿವಯೋಗಿಗಳ ಜೀವನ ಮತ್ತು ಸಾಧನೆ ಕುರಿತು ರಾಮದುರ್ಗದ ಬಸವ ಬೆಳಗು ತ್ರೈಮಾಸಿಕ ಪತ್ರಿಕೆ ಗೌರವ ಸಂಪಾದಕ ಪ್ರೊ. ಸಿದ್ಧಣ್ಣ ಲಂಗೋಟಿ ಉಪನ್ಯಾಸ ನೀಡುವರು.

ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ಮುಖ್ಯಸ್ಥ ಡಾ. ಮೃತ್ಯುಂಜಯ ಅಗಡಿ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ. ಧರ್ಮಗ್ರಂಥ ಪಠಣವನ್ನು ಕುಮಾರಿ ಐಶ್ವರ್ಯ ಶಂಕರಯ್ಯ ಹಿರೇಮಠ ಹಾಗೂ ವಚನ ಚಿಂತನವನ್ನು ಕುಮಾರಿ ತ್ರಿವಿಧ ಶಂಕರಯ್ಯ ಹಿರೇಮಠ ನೆರವೇರಿಸುವರು. ದಾಸೋಹ ಸೇವೆಯನ್ನು ಸದಾಶಿವಯ್ಯ ಸಂಗನಬಸಯ್ಯ ಮದರಿಮಠ ಹಾಗೂ ಶಿವಯೋಗಿ ಕಂಠಯ್ಯ ತೆಗ್ಗಿನಮಠ ಅವರು ವಹಿಸಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಎಂ.ಸಿ.ಐಲಿ ಹಾಗೂ ಶಿವಾನುಭವ ಸಮಿತಿ ಚೇರ್ಮನ್‌ ವಿವೇಕಾನಂದಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ