ಆ್ಯಪ್ನಗರ

ಇಂದು ಸಂತ ಸೇವಾಲಾಲ ಜಯಂತಿ

ಮುಂಡರಗಿ : ತಾಲೂಕು ಸೇವಾಲಾಲ ಸಮಿತಿ ಆಶ್ರಯದಲ್ಲಿ ಫೆ. 18 ರಂದು ಬೆಳಗ್ಗೆ 11 ಕ್ಕೆ ಸಂತ ಸೇವಾಲಾಲರ 280 ನೇ ಜಯಂತ್ಯುತ್ಸವ ಹಾಗೂ ಲಂಬಾಣಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರನ್ನು ಸನ್ಮಾನಿಸಲಾಗುವದು ಎಂದು ಬಂಜಾರ ಸಮಾಜದ ಮುಖಂಡ ಸುಭಾಷ ಗುಡಿಮನಿ ತಿಳಿಸಿದರು.

Vijaya Karnataka 18 Feb 2019, 5:00 am
ಮುಂಡರಗಿ : ತಾಲೂಕು ಸೇವಾಲಾಲ ಸಮಿತಿ ಆಶ್ರಯದಲ್ಲಿ ಫೆ. 18 ರಂದು ಬೆಳಗ್ಗೆ 11 ಕ್ಕೆ ಸಂತ ಸೇವಾಲಾಲರ 280 ನೇ ಜಯಂತ್ಯುತ್ಸವ ಹಾಗೂ ಲಂಬಾಣಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕರನ್ನು ಸನ್ಮಾನಿಸಲಾಗುವದು ಎಂದು ಬಂಜಾರ ಸಮಾಜದ ಮುಖಂಡ ಸುಭಾಷ ಗುಡಿಮನಿ ತಿಳಿಸಿದರು.
Vijaya Karnataka Web today saint sevalaala jayanti
ಇಂದು ಸಂತ ಸೇವಾಲಾಲ ಜಯಂತಿ


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ 11 ಲಂಬಾಣಿ ತಾಂಡಾದ ಅಂದಾಜು 8 ಸಾವಿರ ಜನರು ಸೇರುತ್ತಾರೆ, ರಾಘವೇಂದ್ರ ಮಠದಿಂದ ಸೇವಾಲಾಲರ ಭಾವಚಿತ್ರ ಮೆರವಣಿಗೆಯಿಂದ ನಡೆಯಲಿದೆ.

ಜ.ಡಾ.ಅನ್ನದಾನೀಶ್ವರ ಸ್ವಾಮಿಗಳು, ಬಂಜಾರ ಗುರುಪೀಠದ ಬಸವ ಸರ್ಧಾರ ಸೇವಾಲಾಲ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಚಿವ ಪಿ.ಟಿ. ಪರಮೇಶ್ವರ ನಾಯಕ, ಶಾಸಕ ಕಳಕಪ್ಪ ಬಂಡಿ, ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸುವರು. ಶಾಸಕ ರಾಮಣ್ಣ ಲಮಾಣಿ ಅಧ್ಯಕ್ಷ ತೆ ವಹಿಸುವರು. ಕುಡಚಿ ಶಾಸಕ ಪಿ.ರಾಜೀವ, ಮಾಜಿ ಶಾಸಕರಾದ ಜಿ.ಎಸ್‌.ಪಾಟೀಲ, ರಾಮಕೃಷ್ಣ ದೊಡ್ಡಮನಿ, ಹಾಗೂ ಜಿಪಂ ಸಿಎಸ್‌ಒ ಮಂಜುನಾಥ ಚವ್ಹಾಣ, ತಹಸೀಲ್ದಾರ ಡಾ.ವೆಂಕಟೇಶ ನಾಯಕ, ಲಿಂಗರಾಜಗೌಡ ಪಾಟೀಲ, ಅರುಣ ಚವ್ಹಾಣ ಸೇರಿದಂತೆ ಇತರರು ಪಾಲ್ಗೊಳ್ಳುವರು. ಡಾ.ಮಿಟ್ಯಾನಾಯ್ಕ ಉಪನ್ಯಾಸ ನೀಡುವರು ಎಂದರು.

ಸೋಮನಾಥ ನಾಯಕ, ದೇವಪ್ಪ ನಾಯಕ, ಶಂಕ್ರಪ್ಪ ನಾಯಕ, ಹನುಮಂತಪ್ಪ ನಾಯಕ, ಎಸ್‌.ಡಿ.ರಾಠೋಡ, ತುಳಸಪ್ಪ ಮುರುಡಿ, ಡಿ.ಎಚ್‌.ನಾಯಕ, ಉಮೇಶ ದೇವರಮನಿ, ಲಕ್ಷ ್ಮಣ ಮುರಡಿ, ಕೃಷ್ಣ ರಾಠೋಡ, ಗಣೇಶ ಬೊಮ್ಮನಪಾಡು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ