ಆ್ಯಪ್ನಗರ

ಟೋಲ್‌ ತಪ್ಪಿಸುವ ಮದ್ಯದ ವಾಹನ

ನರಗುಂದ : ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ವಾಹನಗಳ ಮೇಲೆ ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಿ ಹದ್ದಿನ ಕಣ್ಣು ಇರಿಸಿರುವ ಚುನಾವಣಾಧಿಕಾರಿಗಳು ಈವರೆಗೆ ಮೂರು ಬಾರಿ ಅಕ್ರಮ ಮದ್ಯ ಸಾಗಿಸುವ ವಾಹನ ಹಿಡಿದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಈ ಅಬಕಾರಿ ಸರಿಯಾದ ಮಾರ್ಗದಲ್ಲಿ ಸಾಗದೆ ಅಡ್ಡದಾರಿಯಲ್ಲಿ ಸಾಗಿ ಸಿಲುಕಿಕೊಂಡಿದೆ.

Vijaya Karnataka 30 Mar 2019, 5:00 am
ನರಗುಂದ : ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ವಾಹನಗಳ ಮೇಲೆ ಚೆಕ್‌ ಪೋಸ್ಟ್‌ಗಳನ್ನು ನಿರ್ಮಿಸಿ ಹದ್ದಿನ ಕಣ್ಣು ಇರಿಸಿರುವ ಚುನಾವಣಾಧಿಕಾರಿಗಳು ಈವರೆಗೆ ಮೂರು ಬಾರಿ ಅಕ್ರಮ ಮದ್ಯ ಸಾಗಿಸುವ ವಾಹನ ಹಿಡಿದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Vijaya Karnataka Web GDG-29NRD1
ನರಗುಂದ ಹತ್ತಿರದ ಆಚಮಟ್ಟಿ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಂಡ ಮದ್ಯ ಸಾಗಣೆ ವಾಹನದೊಂದಿಗೆ ಅಬಕಾರಿ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ.

ಆದರೆ ಈ ಅಬಕಾರಿ ಸರಿಯಾದ ಮಾರ್ಗದಲ್ಲಿ ಸಾಗದೆ ಅಡ್ಡದಾರಿಯಲ್ಲಿ ಸಾಗಿ ಸಿಲುಕಿಕೊಂಡಿದೆ.

ಹುಬ್ಬಳ್ಳಿ -ಧಾರವಾಡ ಬೈಪಾಸ್‌ ಮೂಲಕ ಹಾದು ಹೋಗಬೇಕಾದ ಭಾರಿ ವಾಹನಗಳು ಟೋಲ್‌ ನಾಕಾದಿಂದ ತಪ್ಪಿಸಿಕೊಳ್ಳಲು ಗದಗ ಮೂಲಕ ಶಲವಡಿ, ನರಗುಂದ ಮಾರ್ಗವಾಗಿ ಸವದತ್ತಿ, ಗೋಕಾಕಗೆ ತೆರಳುತ್ತಿರುವ ಕಾರಣ ಸವದತ್ತಿ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಲು ಕಾರಣವಾಗಿದೆ.

ಇದೆ ತಿಂಗಳದಲ್ಲಿ ಅಚಮಟ್ಟಿ ಚೆಕ್‌ ಪೋಸ್ಟ್‌ನಲ್ಲಿ ಸಾಗುತ್ತಿದ್ದ ಎರಡು ವಾಹನ ಹಿಡಿದು ಮದ್ಯ ವಶಪಡಿಸಿಕೊಂಡ ಎರಡು ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೆ ಶುಕ್ರವಾರ ಬೆಳಗಿನ ಜಾವ ಮದ್ಯ ಸರಬರಾಜು ಮಾಡುತ್ತಿದ್ದ ವಾಹನದಿಂದ 42,24,933 ಲಕ್ಷ ಬೆಲೆ ಬಾಳುವ ವಿವಿಧ 1700 ಮದ್ಯದ ಕೇಸ್‌ಗಳು ಹಾಗೂ ಲಾರಿ ವಶಪಡಿಸಿಕೊಂಡ ಚುನಾವಣೆ ಸಿಬ್ಬಂದಿಗಳು ಅಬಕಾರಿ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಈ ಹಿಂದೆ ವಾಹನದೊಂದಿಗೆ 191ಲಕ್ಷ ಮತ್ತು 48ಲಕ್ಷ ದ ಮದ್ಯ ಪಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಈ ಹಿಂದೆಯೂ ಪರವಾನಗಿಯಂತೆ ನಿಗದಿತ ಮಾರ್ಗದಲ್ಲಿ ಹೋಗದೆ ಅಡ್ಡದಾರಿಯಲ್ಲಿ ಹೋಗಿ ಸಿಲುಕಿಕೊಂಡಿದ್ದು ಇಂದು ಸಹ ಬೆಂಗಳೂರಿನ ಪಿರಿಯಾಪಟ್ಟಣದಿಂದ, ತುಮಕೂರು, ಚಿತ್ರದುರ್ಗ, ಹುಬ್ಬಳ್ಳಿ, ಸವದತ್ತಿ ಮೂಲಕ ಗೋಕಾಕನಲ್ಲಿರುವ ಡೀಪೊಗೆ ಹೋಗಬೇಕಾದ ವಾಹನ ಮಾರ್ಗ ಬದಲಾವಣೆ ಮಾಡಿ ಚಿತ್ರದುರ್ಗ, ಡಾವಣಗೇರೆ, ಗದಗ ,ನರಗುಂದ, ಸವದತ್ತಿ ಮೂಲಕ ಗೋಕಾಕಗೆ ತೆರಳುವ ನಡುವೆ ಸಿಕ್ಕಿ ಬಿದ್ದಿದ್ದು ಈ ಕುರಿತು ಎಫ್‌ಐಆರ್‌ ದಾಖಲಾಗಿದೆ.

ಟೋಲ್‌ ತಪ್ಪಿಸುವುದರ ಜತೆಗೆ ಕಡಿಮೆ ಹಾದಿ ಹುಡುಕಿಕೊಂಡು ಹೋಗುವ ಮಾರ್ಗದಲ್ಲಿ ಮದ್ಯ ಸಾಗಣೆ ವಾಹನಗಳು ಚುನಾವಣೆ ಸಿಬ್ಬಂದಿ ಕೈಗೆ ಸಿಕ್ಕಿಕೊಂಡ ಘಟನೆಗಳು ನಡೆದಿವೆ. ಆದರೆ ಈ ವರೆಗೆ ಆಕ್ರಮ ಮದ್ಯ ಸಾಗಣೆ, ಹಣ ಸಾಗಣೆ ಪ್ರಕರಣಗಳು ದಾಖಲಾಗಿಲ್ಲ.

ಟೋಲ್‌ ತಪ್ಪಿಸುವ ಲಾರಿಗಳು:
ಡಾವಣಗೇರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಕಡೆ ಹೋಗುವ ಭಾರಿ ಲಾರಿಗಳು ಟೋಲ್‌ ನಾಕಾದಿಂದ ಬಚಾವಾಗಲು ಗದಗ ನಿಂದ ಶಲವಡಿ, ನರಗುಂದ, ಸವದತ್ತಿ ಮೂಲಕ ಬೆಳಗಾವಿ ಮತ್ತು ಗೋಕಾಕಗೆ ಸಂಚರಿಸುತ್ತಿವೆ. ಕತ್ತಲು ಆವರಿಸುತ್ತಿದ್ದಂತೆ ಒಂದರ ಮೇಲೆ ಒಂದು ಲಾರಿಗಳು ಗದಗ ಒಳ ರಸ್ತೆಯಿಂದ ಸವದತ್ತಿ ರಸ್ತೆ ಮೇಲೆ ಸಂಚಾರಿಸುತ್ತವೆ. ಇದರಿಂದ ಭಾರಿ ವಾಹನಗಳ ಸಂಚಾರದಿಂದ ಗದಗ ಒಳ ರಸ್ತೆ ಮೇಲೆ ಕಿತ್ತು ಹೋಗುತ್ತಿದ್ದರೂ ಟೋಲ್‌ನಿಂದ ತಪ್ಪಿಸಿಕೊಳ್ಳಲು ಮಾರ್ಗ ಬದಲಿಸಿ ಸಂಚರಿಸುವ ವಾಹನಗಳ ನಿಯಂತ್ರಣಕ್ಕೆ ಪೊಲೀಸ್‌, ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಮಬ ಮಾರುಗಳು ಕೇಳಿ ಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ