ಆ್ಯಪ್ನಗರ

ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ತ

ಗದಗ : ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಅವಳಿ ನಗರ ವ್ಯಾಪ್ತಿಯಲ್ಲಿ ಮಧ್ಯಾಹ್ನ ಏಕಾಏಕಿ ಮೋಡ ಕವಿದ ವಾತವರಣ ಇತ್ತು. ಸಂಜೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಸಮಯ ಸುರಿಯಿತು.

Vijaya Karnataka 11 Apr 2019, 5:00 am
ಗದಗ : ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಅವಳಿ ನಗರ ವ್ಯಾಪ್ತಿಯಲ್ಲಿ ಮಧ್ಯಾಹ್ನ ಏಕಾಏಕಿ ಮೋಡ ಕವಿದ ವಾತವರಣ ಇತ್ತು. ಸಂಜೆ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಸಮಯ ಸುರಿಯಿತು.
Vijaya Karnataka Web GDG-10RUDRAGOUD18A
ಗದಗ ರೋಟರಿ ಸರ್ಕಲ್‌ ಹತ್ತಿರದಲ್ಲಿನ ಅಂಗಡಿಗಳಿಗೆ ಚರಂಡಿ ನೀರು ನುಗ್ಗಿತು.


ಎಸ್‌.ಎಂ.ಕೃಷ್ಣ ನಗರ, ಗಂಗಿಮಡಿ, ರಾಜೀವ ಗಾಂಧಿ ನಗರ, ಸಿದ್ಧಲಿಂಗ ನಗರ, ಕುಷ್ಠರೋಗ ಕಾಲೊನಿ, ಬೆಟಗೇರಿ ಭಾಗ, ಸರ್ವವೋದಯ ಕಾಲೊನಿ, ಹುಡ್ಕೋ ಕಾಲೊನಿ, ಹಾತಲಗೇರಿ ನಾಕಾ ಇನ್ನಿತರ ಭಾಗದಲ್ಲಿ ಸ್ವಲ್ಪ ಮಳೆಯಾದರೆ ಸಾಕು ಮನೆಯಲ್ಲಿ ಗಟಾರು ನೀರು ಹೋಗುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳು ಮನೆ ಸ್ವಚ್ಛ ಮಾಡುವುದೇ ಅವರ ಕೆಲಸವಾಗಿದೆ. ಇಷ್ಟು ದಿನಗಳಾದರು ಅವಳಿ ನಗರದ ಕೆಲವು ತಗ್ಗು ಪ್ರದೇಶದ ಜನರಿಗೆ ಮಳೆ ನೀರಿನಿಂದ ಮುಕ್ತಿ ಸಿಕ್ಕಿಲ್ಲ. ಮಳೆ ಬಂದರೆ ಸಾಕು ಮನೆ ರಕ್ಷ ಣೆ ಮಾಡುಕೊಳ್ಳಲು ಹರಸಾಹಸ ಪಡುತ್ತಾರೆ. ವಾಹನ ಸವಾರರು ಹಗಲಿನಲ್ಲೇ ಲೈಟ್‌ ಹಾಕಿಕೊಂಡು ರಸ್ತೆ ದಾಟುವ ದೃಶ್ಯ ಕಂಡು ಬಂದಿತ್ತು.

ರಸ್ತೆ ಮೇಲೆ ಹರಿದ ನೀರು:

ಭಾರಿ ಮಳೆಗೆ ನಗರದ ಪ್ರಮುಖ ಬೀದಿಯಲ್ಲಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ಸಾರ್ವಜನಿರು ಪರದಾಡುವಂತಾಯಿತು. ಅವಳಿ ನಗರದ ಕೆಲವು ಭಾಗದಲ್ಲಿ ಗಟಾರು ನೀರಿನೊಂದಿಗೆ ಮಳೆ ನೀರು ಸೇರಿಕೊಂಡು ರಸ್ತೆ ಮೇಲೆ ಹರಿಯಿತು. ಇದರಿಂದ ರಸ್ತೆಯಲ್ಲಾ ಕೆಸರು ಮಯವಾಗಿತ್ತು. ಬೈಕ್‌ ಸವಾರರು, ಪಾದಚಾರಿಗಳು ರಸ್ತೆ ದಾಟಲು ಹರ ಸಾಹಸ ಪಡುವಂತಾಯಿತು. ಜಿಲ್ಲೆಯಲ್ಲಿ ಕೆಲವು ಭಾಗದಲ್ಲಿ ಸುರಿದ ಮಳೆಯಿಂದ ಅಲ್ಲಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ.

ದಿಢೀರ್‌ ಮಳೆಯಿಂದ ರಸ್ತೆ ಬದಿಯ ವ್ಯಾಪಾರಿಗಳು, ವಾಹನ ಸವಾರರು ಸ್ವಲ್ಪ ತೊಂದರೆ ಅನುಭವಿಸಿದರು.

ಬಿಸಿಲಿನಿಂದ ಹೈರಾಣಾದ ಜನತೆಗೆ ಮಳೆಯಿಂದ ತುಸು ತಂಪುಗಾಳಿ ಬಿಸುವ ಮೂಲಕ ಆನಂದ ಉಂಟು ಮಾಡಿತು.

ಅಂಗಡಿಗೆ ನುಗ್ಗಿದ ನೀರು :

ನಗರದ ರೋಟರಿ ಸರ್ಕಲ್‌ ಹತ್ತಿರದಲ್ಲಿರುವ ಸುಮಾರು ಹತ್ತು ಅಂಗಡಿ, ಹಳೆ ಬಸ್‌ ನಿಲ್ದಾಣ ಸಮೀಪದಲ್ಲಿರುವ ಅಂಗಡಿ, ಕೆ.ಎಚ್‌.ಪಾಟೀಲ ಮೂರ್ತಿ ಹಿಂಭಾಗ, ಜನತಾ ಬಜಾರಾ ರಸ್ತೆ, ಭೀಷ್ಮ ಕರೆ ಹತ್ತಿರ, ವಿಶ್ವ ಹೋಟಲ್‌ ಹತ್ತಿರದಲ್ಲಿರುವ ಅಂಗಡಿಯೊಳಗೆ ನೀರು ನುಗ್ಗಿದ್ದರಿಂದ ಅಂಗಡಿಯಲ್ಲಿನ ವಸ್ತುಗಳು ನೀರು ಪಾಲಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ