ಆ್ಯಪ್ನಗರ

ಧಾರಾಕಾರ ಸುರಿದ ಮಳೆ.. ಬೆಳೆ ಹಾನಿಯ ಆತಂಕದಲ್ಲಿ ರೈತರು

​ಹೊಳೆಆಲೂರ: ಹೊಳೆಆಲೂರು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿಶನಿವಾರ ಮಧ್ಯಾಹ್ನದ ನಂತರ ಧಾರಾಕಾರ ಮಳೆ ಸುರಿಯಿತು. ಈಗಾಗಲೇ ಮಳೆ ಹಾಗೂ ನೆರೆಯಿಂದ ಸಮೀಪದ ಅಮರಗೋಳ, ಬಸರಕೋಡ, ಹೊಳೆಹಡಗಲಿ, ಬಿ.ಎಸ್‌ ಬೇಲೇರಿ ಗಾಡಗೋಳಿ, ಹೊಳೆಮಣ್ಣೂರ

Vijaya Karnataka 13 Sep 2020, 5:00 am
ಹೊಳೆಆಲೂರ: ಹೊಳೆಆಲೂರು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿಶನಿವಾರ ಮಧ್ಯಾಹ್ನದ ನಂತರ ಧಾರಾಕಾರ ಮಳೆ ಸುರಿಯಿತು. ಈಗಾಗಲೇ ಮಳೆ ಹಾಗೂ ನೆರೆಯಿಂದ ಸಮೀಪದ ಅಮರಗೋಳ, ಬಸರಕೋಡ, ಹೊಳೆಹಡಗಲಿ, ಬಿ.ಎಸ್‌ ಬೇಲೇರಿ ಗಾಡಗೋಳಿ, ಹೊಳೆಮಣ್ಣೂರ ಮುಂತಾದ ಗ್ರಾಮಗಳಲ್ಲಿಬೆಳೆದು ನಿಂತ ಗೋವಿನ ಜೋಳ, ಕಬ್ಬು ಇತ್ಯಾದಿ ಬೆಳೆಗಳು ನೆಲಕ್ಕುರುಳಿವೆ. ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳು ಪರಿಶೀಲನೆ ನಡೆಸಿಲ್ಲ. ಹೊಳೆಆಲೂರಿನಿಂದ ಬಾದಾಮಿ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು ಸಂಚಾರ ಸ್ಥಗಿತವಾಗಿ ಇಂದಿಗೆ 5-6 ದಿನಗಳಾಗಿವೆ. ರಸ್ತೆಯನ್ನು ಮೇಲ್ದರ್ಜೆಗೆ ಏರಿಸಲು ಜನಪ್ರತಿನಿಧಿಗಳು ಕಾಳಜಿ ವಹಿಸದಿರುವುದರಿಂದ ಇಲ್ಲಿನ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ.
Vijaya Karnataka Web 12HLR1B_25
ಹೊಳೆಹಡಗಲಿ ಚನ್ನಪ್ಪಗೌಡ ಪೊಲೀಸ್‌ಪಾಟೀಲ ಜಮೀನಿನಲ್ಲಿಬೆಳೆದಿದ್ದ ಮೆಕ್ಕೆಜೋಳ ನೆಲಕ್ಕುರುಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ