ಆ್ಯಪ್ನಗರ

ದೌರ್ಜನ್ಯ ಮರುಕಳಿಸಿದರೆ ಕಠಿಣ ಕ್ರಮ

ಗದಗ : ರೋಣ ತಾಲೂಕಿನ ಹೊಳೆಆಲೂರ ಸಮೀಪದ ಕರಮುಡಿ, ಮೆಣಸಗಿ, ಅಸೂಟಿ ಗ್ರಾಮದಲ್ಲಿದ್ದ ಅಸ್ಪೃಶ್ಯತೆ ಹೋಗಲಾಡಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ದಲಿತರ ಮೇಲೆ ದೌರ್ಜನ್ಯ ನಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Vijaya Karnataka 24 Feb 2019, 5:00 am
ಗದಗ : ರೋಣ ತಾಲೂಕಿನ ಹೊಳೆಆಲೂರ ಸಮೀಪದ ಕರಮುಡಿ, ಮೆಣಸಗಿ, ಅಸೂಟಿ ಗ್ರಾಮದಲ್ಲಿದ್ದ ಅಸ್ಪೃಶ್ಯತೆ ಹೋಗಲಾಡಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ದಲಿತರ ಮೇಲೆ ದೌರ್ಜನ್ಯ ನಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Vijaya Karnataka Web GDG-23SALIM6
ರೋಣ ತಾಲೂಕಿನ ಕರಮುಡಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಖಾಜಾಹುಸೇನ ಮುಧೋಳ ಮಾತನಾಡಿದರು.


ಶನಿವಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ತಹಸೀಲ್ದಾರ ಮತ್ತು ಸಿಪಿಐ ಸಹಿತ ಅನೇಕ ಅಧಿಕಾರಿಗಳು ಕರಮುಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಶಾಂತಿಸಭೆ ನಡೆಸಿದರು. ನಂತರ ದಲಿತರಿಗೆ ಗ್ರಾಮದ ಬಾವಿಯ ನೀರು ಸೇದಿಸಿ, ಆಂಜನೇಯ ಮತ್ತು ಲಕ್ಕಮ್ಮ ದೇವಸ್ಥಾನಗಳಿಗೆ ಪ್ರವೇಶ ಮಾಡಿಸುವ ಮೂಲಕ ಅಸ್ಪೃಶ್ಯತೆ ನಿವಾರಣೆಗೆ ಕ್ರಮ ಕೈಗೊಂಡಿದ್ದಾರೆ.

ಕರಮುಡಿ ಗ್ರಾಮದಲ್ಲಿ ದಲಿತರನ್ನು ಕೀಳರಿಮೆಯಿಂದ ಕಾಣಲಾಗುತ್ತಿದೆ. ನೀರು, ಕ್ಷೌರದಂಗಡಿ ಮತ್ತು ದೇವಸ್ಥಾನಗಳಿಗೆ ಪ್ರವೇಶ ನೀಡದಿರುವುದನ್ನು ಖಂಡಿಸಿ ವಿವಿಧ ದಲಿತಪರ ಸಂಘಟನೆಗಳು ದೂರು ನೀಡಿದ್ದವು.

ದಲಿತ ಸಂಘರ್ಷ ಸಮಿತಿ ಮುಖಂಡ ಮಂಜುನಾಥ ಹಾಳಕೇರಿ ಮಾತನಾಡಿ,ಹಲವು ವರ್ಷಗಳಿಂದ ಕರಮುಡಿಯಲ್ಲಿ ದಲಿತ ವರ್ಗದ ಜನರ ಮೇಲೆ ಶೋಷಣೆ ನಡೆಯುತ್ತ ಬಂದಿದೆ ಎಂದು ಆರೋಪಿಸಿದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಖಾಜಾಹುಸೇನ ಮುಧೋಳ ಮಾತನಾಡಿ, ಅಸೂಟಿ, ಮೆಣಸಗಿ, ಗುಳಗುಂದಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜನರು ಕಾನೂನು ಅಡಿಯಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಬೇಕು ಎಂದರು.

ತಹಸೀಲ್ದಾರ ಶರಣಮ್ಮ ಕಾರಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ. ಚಳಗೇರಿ, ಪಿಎಸ್‌ಐ ಎಲ್‌.ಕೆ. ಜೂಲಕಟ್ಟಿ, ದಲಿತ ಮುಖಂಡ ವೀರಪ್ಪ ತೆಗ್ಗಿನಮನಿ, ಹನುಮಂತ ಪೂಜಾರ, ಮಂಜುನಾಥ ಚಲುವಾದಿ, ಮುತ್ತು ಚಲುವಾದಿ, ಶರಣಪ್ಪ ಚಲುವಾದಿ, ಗ್ರಾಮಸ್ಥರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ