ಆ್ಯಪ್ನಗರ

ಸಾಂಪ್ರದಾಯಕ ಕಲೆ ಉಳಿಸುವ ಕಾರ್ಯವಾಗಲಿ

ನರೇಗಲ್ಲ : ಇತ್ತೀಚಿನ ದಿನಮಾನಗಳಲ್ಲಿ ಸಾಂಪ್ರದಾಯಕ ಕಲೆ ಮಾಯವಾಗುತ್ತಿದ್ದು, ಅದನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸಿಕೊಡುವ ಬಹುದೊಡ್ಡ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸಿರಿಗನ್ನಡ ಕಲಾ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಅಂದಾನಗೌಡ ಲಕ್ಕನಗೌಡ್ರ ತಿಳಿಸಿದರು.

Vijaya Karnataka 10 Mar 2019, 5:00 am
ನರೇಗಲ್ಲ : ಇತ್ತೀಚಿನ ದಿನಮಾನಗಳಲ್ಲಿ ಸಾಂಪ್ರದಾಯಕ ಕಲೆ ಮಾಯವಾಗುತ್ತಿದ್ದು, ಅದನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸಿಕೊಡುವ ಬಹುದೊಡ್ಡ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಸಿರಿಗನ್ನಡ ಕಲಾ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಅಂದಾನಗೌಡ ಲಕ್ಕನಗೌಡ್ರ ತಿಳಿಸಿದರು.
Vijaya Karnataka Web traditional art saving work
ಸಾಂಪ್ರದಾಯಕ ಕಲೆ ಉಳಿಸುವ ಕಾರ್ಯವಾಗಲಿ


ಅವರು ಸ್ಥಳೀಯ ಕಟ್ಟಿಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಹಮ್ಮಿಕೊಂಡ 15ನೇ ಬಸವನುಡಿ ಮಾಲಿಕೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ಜಾನಪದ ಸೊಗಡು, ಭಜನಾ ಪದ, ದೊಡ್ಡಾಟ ಲಾವಣಿ ಪದ ಹಂತಿಪದ ಮುಂತಾದ ಸಾಂಸ್ಕೃತಿಕ ಅಂಶಗಳು ಇಂದು ಮರೆಯಾಗುತ್ತಿದ್ದು ಆಧುನಿಕ ಪರಂಪರೆಗೆ ಜನತೆ ಮಾರುಹೋಗುತ್ತಿದೆ. ಅದನ್ನು ತಪ್ಪಿಸಿ ನಮ್ಮ ಪುರಾತನ ಕಲೆಗಳನ್ನು ಮತ್ತೆ ಮುಂದಿನ ಪೀಳಿಗೆಗೆ ಜೀವಂತಗೊಳಿಸುವ ಕಾರ್ಯವನ್ನು ಬಸವನುಡಿ ಮಾಲಿಕೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

ಬಸವರಾಜ ಪಾಯಪ್ಪಗೌಡ್ರ,ನಾವೆಲ್ಲ ಕಲಾವಿದರು ಈ ವೇದಿಕೆ ಮೂಲಕ ಮುಂಬರುವ ದಿನಮಾನಗಳಲ್ಲಿ ಹೆಚ್ಚು ಕಲಾವಿದರನ್ನು ಪರಿಚಯಿಸುವ ಮೂಲಕ ಕಾರ್ಯಕ್ರಮಕ್ಕೆ ಬಲತುಂಬುತ್ತೇವೆ ಎಂದರು.

ಬಸವನುಡಿ ಮಾಲಿಕೆ ಸಂಚಾಲಕ ಮಹಾದೇವ ಬೇವಿನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ರಂಗಪ್ಪ ನಾಯ್ಕರ ದೊಡ್ಡಾಟದ ಪದಗಳನ್ನು ಹಾಡಿದರು. ಬಸವರಾಜ ಪಾಯಪ್ಪಗೌಡ್ರ ಹೆಜ್ಜೆಪದ, ಜಾನಪದ ಹಾಗೂ ಭಜನಾ ಪದ ಹಾಡಿದರು. ದಾವಲಖಲಂದರ ರಾಹುತ ರಿವಾಯತ ಪದ ಹಾಡಿದರು. ಶಿವಪ್ಪ ಹೊಸಮನಿ, ಶ್ರೀಕಾಂತ ಹೊಸಮನಿ, ರಾಮನಗೌಡ ಹುಲ್ಲೂರ, ವೀರಣ್ಣ ಗುಜಮಾಗಡಿ, ಮಹಾದೇವಯ್ಯ ನವಲಿಹಿರೇಮಠ, ರಂಗಪ್ಪ ತಳವಾರ ಮುಂತಾದವರು ಉಪಸ್ಥಿತರಿದ್ದರು. ಚೇತನಾ ಬೇವಿನಕಟ್ಟಿ ಪ್ರಾರ್ಥಿಸಿದರು. ಪ್ರಕಾಶ ಬಳಗಾನೂರ ಸ್ವಾಗತಿಸಿದರು. ಬಸವನುಡಿ ಮಾಲಿಕೆ ಸಂಚಾಲಕ ಮಹಾದೇವ ಬೇವಿನಕಟ್ಟಿ ನಿರೂಪಿಸಿದರು. ಪ್ರದೀಪ ಸಂಗನಾಳಮಠ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ