ಆ್ಯಪ್ನಗರ

ಸಂಚಾರಕ್ಕೆ ತೊಂದರೆ:ಅಂಗಡಿಗಳ ತೆರವು

ಲಕ್ಷ್ಮೇಶ್ವರ : ಪಟ್ಟಣದ ಬಜಾರ ರಸ್ತೆಯಲ್ಲಿ ಬದಿ ವ್ಯಾಪಾರಕ್ಕಾಗಿ ಅಂಗಡಿಗಳನ್ನು ಮತ್ತು ತಳ್ಳುವ ಗಾಡಿ ಇಟ್ಟುಕೊಂಡು ಜನರ ಸಂಚಾರಕ್ಕೆ ತೊಂದರೆಯನ್ನು ಮಾಡುತ್ತಿರುವ ಅಂಗಡಿಗಳನ್ನು ಪುರಸಭೆ ಮತ್ತು ಪೊಲೀಸರು ಜಂಟಿಯಾಗಿ ಸೋಮವಾರ ತೆರವುಗೊಳಿಸಿದರು.

Vijaya Karnataka 11 Jun 2019, 5:00 am
ಲಕ್ಷ್ಮೇಶ್ವರ : ಪಟ್ಟಣದ ಬಜಾರ ರಸ್ತೆಯಲ್ಲಿ ಬದಿ ವ್ಯಾಪಾರಕ್ಕಾಗಿ ಅಂಗಡಿಗಳನ್ನು ಮತ್ತು ತಳ್ಳುವ ಗಾಡಿ ಇಟ್ಟುಕೊಂಡು ಜನರ ಸಂಚಾರಕ್ಕೆ ತೊಂದರೆಯನ್ನು ಮಾಡುತ್ತಿರುವ ಅಂಗಡಿಗಳನ್ನು ಪುರಸಭೆ ಮತ್ತು ಪೊಲೀಸರು ಜಂಟಿಯಾಗಿ ಸೋಮವಾರ ತೆರವುಗೊಳಿಸಿದರು.
Vijaya Karnataka Web GDG-10LXR02
ಲಕ್ಷ್ಮೇಶ್ವರದ ಭಾನು ಮಾರ್ಕೆಟ್‌ ಮುಂಭಾಗದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲಾಯಿತು.


ಪಟ್ಟಣದ ಹೃದಯ ಭಾಗವಾಗಿರುವ ಭಾನು ಮಾರ್ಕೆಟ್‌ ಮುಂಭಾಗದಲ್ಲಿ ಮತ್ತು ಬಜಾರ ರಸ್ತೆಯ ಬದಿಯಲ್ಲಿ ವ್ಯಾಪಾರಸ್ಥರು ತಳ್ಳುವ ಗಾಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಇದರಿಂದ ಸಂಚಾರಕ್ಕೆ ಅಡೆತಡೆಯಾಗಿ ಪ್ರತಿನಿತ್ಯ ಟ್ರಾಫಿಕ್‌ಜಾಮ್‌ ಆಗುತ್ತಿತ್ತು. ಇನ್ನೋಮ್ಮೆ ಜನರಿಗೆ ತೊಂದರೆಯಾಗುವಂತೆ ಅಂಗಡಿಗಳನ್ನು ಹಚ್ಚಿದರೆ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.

ಎಎಸ್‌ಐ ನಿಗೋಜಿ, ಪುರಸಭೆ ಪರಿಸರ ಅಭಿಯಂತರ ಆನಂದ ಬದಿ, ಮಂಜುನಾಥ ಮುದಗಲ್‌, ಬಸಣ್ಣ ನಂದೆಣ್ಣವರ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ