ಮುಂಡರಗಿ: ಇಲ್ಲಿಯ ಸಾರಿಗೆ ಸಂಸ್ಥೆ ನೌಕರರು ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸಿ ಸರಕಾರಿ ಪಿಂಚಣಿ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಬಸ್ ನಿಲ್ದಾಣದಿಂದ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು, ತಾಂತ್ರಿಕ ವರ್ಗದವರು ಸೇರಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಮ್ಮ ಬೇಡಿಕೆಗೆ ಆಗ್ರಹಿಸಿದರು.
ನಂತರ ಸಲ್ಲಿಸಿದ ಮನವಿಯಲ್ಲಿ ಈವರೆಗೆ ಎಲ್ಲ ಸರಕಾರಗಳು ಸಾರಿಗೆ ನೌಕರರ ಬಗ್ಗೆ ದ್ವಿಮುಖ ಧೋರಣೆ ತಾಳಿದ್ದು ಸರಕಾರದ ಇತರ ಎಲ್ಲ ಇಲಾಖೆಗಳಿಗಿಂತ ಸಾರಿಗೆ ನೌಕರರು ಕಠಿಣ ಶ್ರಮ ವಹಿಸುತ್ತಿದ್ದು, ವೇತನ ವಿಷಯದಲ್ಲೂ ಕಡಿಮೆ ಪಡೆಯುತ್ತಿದ್ದಾರೆ.
ಕೆಎಸ್ಆರ್ಟಿಸಿ ನೌಕರರು ಮೂಲ ಹಕ್ಕುಗಳನ್ನು ಹೊಂದಿದ್ದು ಈಗಾಗಲೇ ವಿಧಾನಸಭೆ, ವಿಧಾನಪರಿಷತ್, ಸಂಬಂಧಪಟ್ಟ ಸಚಿವರು ನಮ್ಮ ಬೇಡಿಕೆಗೆ ನಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿದ್ದಾರೆ. ತಾವು ಕೂಡಾ ಚುನಾವಣೆ ಪೂರ್ವದಲ್ಲಿ ಸರಕಾರಿ ನೌಕರರು ಎಂದು ಪರಿಗಣಿಸುತ್ತೇನೆ ಎಂದು ಭರವಸೆ ನೀಡಿದ್ದೀರಿ, ಈಗಾಗಲೇ ಆಂಧ್ರದಲ್ಲಿ ಸಾರಿಗೆ ನಿಗಮಗಳು ಸರಕಾರದಲ್ಲಿ ವಿಲೀನಗೊಂಡಿವೆ. ಹೀಗಾಗಿ ನಮ್ಮನ್ನು ಕೂಡಾ ಸರಕಾರಿ ನೌಕರರು ಎಂದು ಪರಿಗಣಿಸಿ ಹಾಗೂ ಪಿಂಚಣಿ ಸೌಲಭ್ಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ.
ಡಿಪೋ ಮ್ಯಾನೇಜರ್ ವಿಜಯಕುಮಾರ ಕುಮಠಳ್ಳಿ, ಉಮೇಶ ಹಾರೋಗೇರಿ, ಎಂ.ಎಫ್.ತಳವಾರ, ವೈ.ಎಚ್.ಮೇಟಿ, ಉಮೇಶ ಲಕ್ಕುಂಡಿ, ಶಶಿಕಲಾ ಹಿರೇಮಠ, ಅಶೋಕ ಅಣ್ಣಿಗೇರಿ, ಜಿ.ಬಿ.ಮೆಟ್ಟಿನ, ಮಂಜುಳಾ ಕಣಗಿನಹಾಳ, ಮೌನೇಶ ಹಡಪದ, ವಿ.ಬಿ.ಗದಗಿನ, ವಿ.ಎಸ್.ಹೆಬ್ಬಾಳ, ತಾರಾಮತಿ ಪಾಟೀಲ, ಎಂ.ಲೀಲಾಕ್ಷಿ, ಎಂ.ವೈ.ಭಜಂತ್ರಿ, ಎಸ್.ಎನ್.ಹಿರೇಮಠ, ಬುಡ್ನೇಸಾಬ ಜಲಾಲನವರ, ಎಚ್.ಟಿ.ಗುಗ್ಗರಿ ಇತರರು ಪಾಲ್ಗೊಂಡಿದ್ದರು.
ಬಸ್ ನಿಲ್ದಾಣದಿಂದ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು, ತಾಂತ್ರಿಕ ವರ್ಗದವರು ಸೇರಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಮ್ಮ ಬೇಡಿಕೆಗೆ ಆಗ್ರಹಿಸಿದರು.
ನಂತರ ಸಲ್ಲಿಸಿದ ಮನವಿಯಲ್ಲಿ ಈವರೆಗೆ ಎಲ್ಲ ಸರಕಾರಗಳು ಸಾರಿಗೆ ನೌಕರರ ಬಗ್ಗೆ ದ್ವಿಮುಖ ಧೋರಣೆ ತಾಳಿದ್ದು ಸರಕಾರದ ಇತರ ಎಲ್ಲ ಇಲಾಖೆಗಳಿಗಿಂತ ಸಾರಿಗೆ ನೌಕರರು ಕಠಿಣ ಶ್ರಮ ವಹಿಸುತ್ತಿದ್ದು, ವೇತನ ವಿಷಯದಲ್ಲೂ ಕಡಿಮೆ ಪಡೆಯುತ್ತಿದ್ದಾರೆ.
ಕೆಎಸ್ಆರ್ಟಿಸಿ ನೌಕರರು ಮೂಲ ಹಕ್ಕುಗಳನ್ನು ಹೊಂದಿದ್ದು ಈಗಾಗಲೇ ವಿಧಾನಸಭೆ, ವಿಧಾನಪರಿಷತ್, ಸಂಬಂಧಪಟ್ಟ ಸಚಿವರು ನಮ್ಮ ಬೇಡಿಕೆಗೆ ನಕಾರಾತ್ಮಕವಾಗಿ ಸ್ಪಂದಿಸಿ ಭರವಸೆ ನೀಡಿದ್ದಾರೆ. ತಾವು ಕೂಡಾ ಚುನಾವಣೆ ಪೂರ್ವದಲ್ಲಿ ಸರಕಾರಿ ನೌಕರರು ಎಂದು ಪರಿಗಣಿಸುತ್ತೇನೆ ಎಂದು ಭರವಸೆ ನೀಡಿದ್ದೀರಿ, ಈಗಾಗಲೇ ಆಂಧ್ರದಲ್ಲಿ ಸಾರಿಗೆ ನಿಗಮಗಳು ಸರಕಾರದಲ್ಲಿ ವಿಲೀನಗೊಂಡಿವೆ. ಹೀಗಾಗಿ ನಮ್ಮನ್ನು ಕೂಡಾ ಸರಕಾರಿ ನೌಕರರು ಎಂದು ಪರಿಗಣಿಸಿ ಹಾಗೂ ಪಿಂಚಣಿ ಸೌಲಭ್ಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ.
ಡಿಪೋ ಮ್ಯಾನೇಜರ್ ವಿಜಯಕುಮಾರ ಕುಮಠಳ್ಳಿ, ಉಮೇಶ ಹಾರೋಗೇರಿ, ಎಂ.ಎಫ್.ತಳವಾರ, ವೈ.ಎಚ್.ಮೇಟಿ, ಉಮೇಶ ಲಕ್ಕುಂಡಿ, ಶಶಿಕಲಾ ಹಿರೇಮಠ, ಅಶೋಕ ಅಣ್ಣಿಗೇರಿ, ಜಿ.ಬಿ.ಮೆಟ್ಟಿನ, ಮಂಜುಳಾ ಕಣಗಿನಹಾಳ, ಮೌನೇಶ ಹಡಪದ, ವಿ.ಬಿ.ಗದಗಿನ, ವಿ.ಎಸ್.ಹೆಬ್ಬಾಳ, ತಾರಾಮತಿ ಪಾಟೀಲ, ಎಂ.ಲೀಲಾಕ್ಷಿ, ಎಂ.ವೈ.ಭಜಂತ್ರಿ, ಎಸ್.ಎನ್.ಹಿರೇಮಠ, ಬುಡ್ನೇಸಾಬ ಜಲಾಲನವರ, ಎಚ್.ಟಿ.ಗುಗ್ಗರಿ ಇತರರು ಪಾಲ್ಗೊಂಡಿದ್ದರು.