ಆ್ಯಪ್ನಗರ

ಹದಗೆಟ್ಟ ರಸ್ತೆ..ಸಂಚಾರಕ್ಕೆ ತೊಂದರೆ!

ಮುಂಡರಗಿ : ಪಟ್ಟಣದ ಹೃದಯ ಭಾಗವಾದ ಕೊಪ್ಪಳ ವೃತ್ತದಿಂದ ಬೃಂದಾವನ ವೃತ್ತದವರೆಗಿನ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆ ಹದೆಗೆಟ್ಟಿದ್ದು, ಇಲ್ಲಿ ಓಡಾಡುವ ವಾಹನಗಳು, ಅಟೋ,ಕಾರು, ದ್ವಿಚಕ್ರವಾಹನ ಹಾಗೂ ಪಾದಚಾರಿಗಳು ನಿತ್ಯ ಸರ್ಕಸ್‌ ಮಾಡುತ್ತ ಹೋಗುವಂತಹ ಸ್ಥಿತಿ ಉಂಟಾಗಿದೆ. ಹೀಗಿದ್ದರೂ ಪುರಸಭೆ ಮಾತ್ರ ಕಂಡೂ ಕಾಣದಂತೆ ನಿರ್ಲಕ್ಷ್ಯ ವಹಿಸಿದೆ.

Vijaya Karnataka 29 Jun 2019, 5:00 am
ಮುಂಡರಗಿ : ಪಟ್ಟಣದ ಹೃದಯ ಭಾಗವಾದ ಕೊಪ್ಪಳ ವೃತ್ತದಿಂದ ಬೃಂದಾವನ ವೃತ್ತದವರೆಗಿನ ಪುರಸಭೆ ವ್ಯಾಪ್ತಿಯ ಪ್ರಮುಖ ರಸ್ತೆ ಹದೆಗೆಟ್ಟಿದ್ದು, ಇಲ್ಲಿ ಓಡಾಡುವ ವಾಹನಗಳು, ಅಟೋ,ಕಾರು, ದ್ವಿಚಕ್ರವಾಹನ ಹಾಗೂ ಪಾದಚಾರಿಗಳು ನಿತ್ಯ ಸರ್ಕಸ್‌ ಮಾಡುತ್ತ ಹೋಗುವಂತಹ ಸ್ಥಿತಿ ಉಂಟಾಗಿದೆ. ಹೀಗಿದ್ದರೂ ಪುರಸಭೆ ಮಾತ್ರ ಕಂಡೂ ಕಾಣದಂತೆ ನಿರ್ಲಕ್ಷ್ಯ ವಹಿಸಿದೆ.
Vijaya Karnataka Web troubled road
ಹದಗೆಟ್ಟ ರಸ್ತೆ..ಸಂಚಾರಕ್ಕೆ ತೊಂದರೆ!


ಕೆಲವೇ ವರ್ಷದ ಹಿಂದೆ ಈ ರಸ್ತೆ ಕಾಮಗಾರಿ ನಡೆದು ಈಗ ಸಂಪೂರ್ಣ ಕಿತ್ತು ಹೋಗಿದ್ದು ಅಲ್ಲಲ್ಲಿ ತಗ್ಗುದಿನ್ನೆಗಳು ಕಾಣಿಸುತ್ತಿವೆ. ಈ ಮಾರ್ಗ ಯಾವಾಗಲೂ ಜನನಿಬಿಡವಾಗಿದ್ದು ವಾಹನಗಳ ಸಂಚಾರವೂ ದಟ್ಟವಾಗಿರುತ್ತದೆ. ಗದಗ ಭಾಗದಿಂದ ಡಂಬಳ, ಮೇವುಂಡಿ, ಬರದೂರ, ಹಳ್ಳಿಗುಡಿ, ವೆಂಕಟಾಪೂರ ಸೇರಿದಂತೆ ಅನೇಕ ಊರುಗಳಿಂದ ಬರುವ ನಾಗರಿಕರು ಕೊಪ್ಪಳ ವೃತ್ತದ ಮೂಲಕ ಈ ಮಾರ್ಗದಲ್ಲಿಯೇ ಸಂಚರಿಸುತ್ತಾರೆ. ಹಾಗೇ ಪಟ್ಟಣದ ಎಲ್ಲ ವಾರ್ಡ್‌ಗಳಿಗೂ ಇದು ಸಂಪರ್ಕ ರಸ್ತೆ. ಈ ಮಾರ್ಗದಲ್ಲಿ ಸರಕಾರಿ ಆಸ್ಪತ್ರೆ, ತಾಪಂ ಸೇರಿದಂತೆ ಶಾಲಾ ಕಾಲೇಜು ಇತರ ಪ್ರಮುಖ ಕಚೇರಿಗಳು ಇವೆ. ಹೀಗಾಗಿ ವಾಹನಗಳು ಈ ಮಾರ್ಗದಲ್ಲಿ ಬಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ.

ಇದು ಪ್ರಮುಖ ರಸ್ತೆಯಾಗಿದ್ದು ಕಾಂಕ್ರಿಟ್‌ ರಸ್ತೆ ಮಾಡಿಸಬೇಕು, ಇಲ್ಲದಿದ್ದರೆ ಮಳೆಗೆ ಡಾಂಬರ್‌ ಕಿತ್ತು ಹೋಗುತ್ತದೆ. ಕೂಡಲೇ ಸಂಬಂಧಪಟ್ಟವರು ಹದಗೆಟ್ಟ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ