ಆ್ಯಪ್ನಗರ

ಬಸ್‌ ಸ್ಥಗಿತಗೊಳಿಸಲು ಯತ್ನ

ಮುಂಡರಗಿ : ಬಿಸಿಯೂಟ, ಆಶಾ, ಬಿಸಿಯೂಟ ಕಾರ್ಯಕರ್ತರು ಕಾರ್ಮಿಕರು ಒಕ್ಕೂಟ ಆಶ್ರಯದಲ್ಲಿ ಹಮ್ಮಿಕೊಂಡ ಬುಧವಾರ 2ನೇ ದಿನದ ಪ್ರತಿಭಟನೆ ಮುಂದುವರಿಸಿದಾಗ ಬಸ್‌ ನಿಲ್ದಾಣ ಬಳಿ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರ ಮಾಡುತ್ತಿರುವರನ್ನು ವಿರೋಧಿಸಿ ಪ್ರತಿಭಟಿಸಿದರು.

Vijaya Karnataka 10 Jan 2019, 5:00 am
ಮುಂಡರಗಿ : ಬಿಸಿಯೂಟ, ಆಶಾ, ಬಿಸಿಯೂಟ ಕಾರ್ಯಕರ್ತರು ಕಾರ್ಮಿಕರು ಒಕ್ಕೂಟ ಆಶ್ರಯದಲ್ಲಿ ಹಮ್ಮಿಕೊಂಡ ಬುಧವಾರ 2ನೇ ದಿನದ ಪ್ರತಿಭಟನೆ ಮುಂದುವರಿಸಿದಾಗ ಬಸ್‌ ನಿಲ್ದಾಣ ಬಳಿ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರ ಮಾಡುತ್ತಿರುವರನ್ನು ವಿರೋಧಿಸಿ ಪ್ರತಿಭಟಿಸಿದರು.
Vijaya Karnataka Web try to stop the bus
ಬಸ್‌ ಸ್ಥಗಿತಗೊಳಿಸಲು ಯತ್ನ


ಸ್ಥಳಕ್ಕೆ ಆಗಮಿಸಿದ ಡಿಪೋ ವ್ಯವಸ್ಥಾಪಕ ವಿಜಯಕುಮಾರ ಕಮಠಳ್ಳಿ ಜತೆಗೆ ವಾಗ್ವಾದ್ಕಕಿಳಿದ ಪ್ರತಿಭಟನಾಕಾರರು ಬಸ್‌ಗಳನ್ನು ಓಡಿಸಬೇಡಿರಿ ಎಂದು ಬಸ್‌ ಹೊರ ಹೋಗದಂತೆ ಅಡ್ಡಲಾಗಿ ಕುಳಿತರು. ವಿಜಯಕುಮಾರ ಅವರು ಗದಗ ಸಾರಿಗೆ ಅಧಿಕಾರಿಗಳ ಆದೇಶದ ಮೇರೆಗೆ ಬಸ್‌ಗಳು ಸಂಚರಿಸುತ್ತಿವೆ. ಮೇಲಿಂದ ಆದೇಶ ಬಂದರೆ ಮಾತ್ರ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಸಮಜಾಯಿಸಿ ನೀಡಿದರು. ಪಟ್ಟು ಬಿಡದ ಪ್ರತಿಭಟನಾಕಾರರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಾರಿಗೆ ವ್ಯವಸ್ಥಾಪಕರು ಬಸ್‌ ಸಂಚಾರ ಸ್ಥಗಿತಗೊಳಿಸಿದರು.

ಪರಿಸ್ಥಿತಿ ತಿಳಿಗೊಳಿಸಿದ ಸಿಪಿಐ :

ಸ್ಥಳಕ್ಕೆ ಆಗಮಿಸಿದ ಸಿಪಿಐ ಶ್ರೀನಿವಾಸ ಮೇಟಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಗದಗನಲ್ಲಿ ಬಸ್‌ಗಳು ಸಂಚರಿಸುತ್ತಿವೆ. ಇಲ್ಲೇಕೆ ವೃಥಾ ಅಡ್ಡಿ ಪಡಿಸುತ್ತೀರಿ ? ನೀವು ಬಸ್‌ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಮನವಿ ಇಲ್ಲವೆ ಪ್ರತಿಭಟನೆಯಲ್ಲಿ ಹೇಳಿಲ್ಲ. ಹೀಗೆ ಮಾಡುವುದು ಸರಿಯಲ್ಲ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಭ್ಯಂತರ ಇಲ್ಲ. ಆದರೆ ಬಸ್‌ ಸಂಚಾರ ಸ್ಥಗಿತಗೊಳಿಸುವುದು ಸರಿಯಲ್ಲ ಎಂದಾಗ ಪ್ರತಿಭಟನಾಕಾರರು ಬಸ್‌ ಸಂಚರಿಸಲು ಅನುಕೂಲ ಮಾಡಿಕೊಟ್ಟರು.

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸಿ.ಬಿ.ಶೆಳಕೆ, ಗೌರವಾಧ್ಯಕ್ಷ ಶಂಕರದೇವರಮನಿ,ವಿ.ಎಸ್‌.ಘಟ್ಟಿ, ವಿಶಾಲಾಕ್ಷಿ ದೇವರಮನಿ ಸೇರಿದಂತೆ ಆಶಾ, ಬಿಸಿಯೂಟ ಅಡುಗೆದಾರರು ಇತರ ಕಾರ್ಮಿಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ