ಆ್ಯಪ್ನಗರ

ತೆರವುಗೊಳಿಸದ ಭಾವಚಿತ್ರ :ಪ್ರತಿಭಟನೆ

ಗದಗ: ಮಾದರಿ ನೀತಿ ಸಂಹಿತೆ ಜಾರಿ ಇದ್ದರು ಸಹ ನಗರದ ವೀರಶೈವ ಲೈಬ್ರರಿ ಹತ್ತಿರದ ಶುದ್ಧ ಕುಡಿಯುವ ಘಟಕದ ಮೇಲೆ ದಿ.ಕೆ.ಎಚ್‌.ಪಾಟೀಲ್‌ ಅವರ ಭಾವ ಚಿತ್ರ ತೆರವುಗೊಳಿಸದ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಕಾರ‍್ಯಕರ್ತರು ಪ್ರತಿಭಟನೆ ನಡೆಸಿದರು.

Vijaya Karnataka 2 Apr 2019, 5:00 am
ಗದಗ: ಮಾದರಿ ನೀತಿ ಸಂಹಿತೆ ಜಾರಿ ಇದ್ದರು ಸಹ ನಗರದ ವೀರಶೈವ ಲೈಬ್ರರಿ ಹತ್ತಿರದ ಶುದ್ಧ ಕುಡಿಯುವ ಘಟಕದ ಮೇಲೆ ದಿ.ಕೆ.ಎಚ್‌.ಪಾಟೀಲ್‌ ಅವರ ಭಾವ ಚಿತ್ರ ತೆರವುಗೊಳಿಸದ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಕಾರ‍್ಯಕರ್ತರು ಪ್ರತಿಭಟನೆ ನಡೆಸಿದರು.
Vijaya Karnataka Web GDG-1RUDRAGOUD20


ಜಿಲ್ಲಾಡಳಿತದ ವಿರುದ್ದ ಘೋಷಣೆ ಕೂಗಿ ತಮ್ಮ ಅಸಮಾಧಾನ ಹೊರಹಾಕಿದರು. ಲೋಕಸಭೆ ಚುನಾವಣೆ ಅಧಿಸೂಚನೆ ಹೊರಬಿದ್ದಾಗಿನಿಂದ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲಿದೆ. ಆದರೆ ನಗರದ ಮಧ್ಯೆ ಭಾಗದಲ್ಲಿರುವ ರಾಜಕೀಯ ವ್ಯಕ್ತಿಯ ಪ್ರತಿಮೆ ಜಿಲ್ಲಾಡಳಿತದ ಗಮನಕ್ಕೆ ಬಾರದಿರುದು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸದಿದ್ದರೆ ರಾಜ್ಯ ಚುನಾವಣೆ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು.

ಅಮರೇಶ ಬೆಟಗೇರಿ, ಅನೀಲ ಅಬ್ಬಿಗೇರಿ, ಪ್ರಶಾಂತ ನಾಯ್ಕರ, ಮಂಜುನಾಥ ಮ್ಯಾಗೇರಿ, ಡಿ.ಬಿ.ಕರೇಗೌಡರ, ವೆಂಕಟೇಶ ಬಳ್ಳಾರಿ, ಸಿರಾಜ, ಸಾಧಿಕ ಮನಿಯಾರ, ಶರಣಪ್ಪಾ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ