ಆ್ಯಪ್ನಗರ

ಬರದ ಎಫೆಕ್ಟ್ :ಸೊರಗಿದ ಅಂತರಗಂಗೆ

ಗಜೇಂದ್ರಗಡ : ನಾಡಿನ ಅಸಂಖ್ಯಾತ ಭಕ್ತರ ಆರಾಧ್ಯ ದೈವ ದಕ್ಷಿಣ ಕಾಶಿ ಪ್ರಸಿದ್ದಿಯ ಶ್ರೀ ಕಾಲಕಾಲೇಶ್ವರ ಪುಣ್ಯಕ್ಷೇತ್ರ ಸನ್ನಿಧಿಯಲ್ಲಿ ಶಿವನ ಜಡೆಯಂತಿರುವ ಅಂತರಗಂಗೆ ಹರಿವು ಮಳೆ ಅಭಾವದಿಂದ ಜುಳಜುಳು ನಿನಾದ ಕ್ಷೀಣಿಸಿದೆ. ಬರ ಹಿನ್ನೆಲೆಯಲ್ಲಿ ಈಗ ಅದು ಕಣ್ಣಿರು ಸುರಿಸುಂತಿದೆ.

Vijaya Karnataka 31 Dec 2018, 5:00 am
ಗಜೇಂದ್ರಗಡ : ನಾಡಿನ ಅಸಂಖ್ಯಾತ ಭಕ್ತರ ಆರಾಧ್ಯ ದೈವ ದಕ್ಷಿಣ ಕಾಶಿ ಪ್ರಸಿದ್ದಿಯ ಶ್ರೀ ಕಾಲಕಾಲೇಶ್ವರ ಪುಣ್ಯಕ್ಷೇತ್ರ ಸನ್ನಿಧಿಯಲ್ಲಿ ಶಿವನ ಜಡೆಯಂತಿರುವ ಅಂತರಗಂಗೆ ಹರಿವು ಮಳೆ ಅಭಾವದಿಂದ ಜುಳಜುಳು ನಿನಾದ ಕ್ಷೀಣಿಸಿದೆ. ಬರ ಹಿನ್ನೆಲೆಯಲ್ಲಿ ಈಗ ಅದು ಕಣ್ಣಿರು ಸುರಿಸುಂತಿದೆ.
Vijaya Karnataka Web GDG-29GJD4
ಗಜೇಂದ್ರಗಡ ತಾಲೂಕು ಶ್ರೀ ಕಾಲಕಾಲೇಶ್ವರ ಪುಣ್ಯಕ್ಷೇತ್ರ ಸನ್ನಿಧಿಯಲ್ಲಿ ಶಿವನ ಜಡೆಯಂತಿರುವ ಅಂತರ್‌ ಗಂಗೆ ಹರಿವು ಕ್ಷೀಣಿಸಿದೆ.


ಪ್ರಕೃತಿ ಸೌಂದರ್ಯ ಮಡಿಲಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಏಕಶಿಲೆ ಬೆಟ್ಟದ ತುದಿಯಲ್ಲಿ ಸ್ವಯಂಭು ಲಿಂಗ ಸ್ವರೂಪಿ ಶ್ರೀ ಕಾಲಕಾಲೇಶ್ವರ ದೇವರನ್ನು ಉತ್ತರ ಪಡೆಯ ಗವಿಯಲ್ಲಿ ಭಕ್ತರು ಪೂಜಿಸುತ್ತಾರೆ. ಇಲ್ಲಿಂದ ಮುಂದೆ ನಾಲ್ಕು ಹೆಜ್ಜೆ ನಡೆದರೆ ಬರುವುದೇ ಶಿವನ ಜಡೆಯಲ್ಲಿ ನೆಲೆಸಿದ ಗಂಗೆಯು ಗುಡ್ಡದ ಮೇಲಿನ ಪಡೆಯಿಂದ ಆಲದ ಮರದ ಮೂಲಕ ಭೂ ಮಾತೆ ಸ್ಪರ್ಶಿಸುವಂತೆ ಇದೆ. ಇದರ ಹರಿವು ಎಲ್ಲಿಂದ ಬರುತ್ತದೆ ಎಂಬುದು ಇಂದಿಗೂ ನಿಗೂಢ. ಹೀಗಾಗಿ ಇದಕ್ಕೆ ಅಂತರ್‌ಗಂಗೆ ಎಂದು ಐತಿಹ್ಯ ಇದೆ.

ಮಳೆಯ ಕೊರತೆಯಿಂದ ಅಂತರ್‌ಗಂಗೆ ಹರಿವು ಕಡಿಮೆಯಾಗಿದೆ. ಬರದಲ್ಲೂ ಜಲ ಬತ್ತಿ ಕಣ್ಣಿರು ಹನಿ ಬೀಳುವ ರೀತಿ ಇದೆ. ಸ್ವಯಂಭು ಲಿಂಗಸ್ವರೂಪಿ ಕಾಣಲು ನೂರಾರು ಮೆಟ್ಟಿಲುಗಳನ್ನು ಏರಿದರೆ ಎರಡು ಏಕಶಿಲೆಯಲ್ಲಿ ನಿರ್ಮಿಸಲ್ಪಟ್ಟ ದೀಪ ಸ್ಥಂಭಗಳು ಕಾಣಬಹುದು. ಪುನಃ ಮೆಟ್ಟಿಲನ್ನೇರಿ ದ್ವಾರಬಾಗಿಲು ಪ್ರವೇಶಿಸುವ ಬಲಭಾಗದಲ್ಲಿ ಕಾಣುವ ಅಂತರ್‌ಗಂಗೆ ಹಿಮಾಲಯದಲ್ಲಿ ಹುಟ್ಟಿರುವ ಗಂಗೆಯಷ್ಟೆ ಪುಣ್ಯ ಸಮಾನ ಎನ್ನುವ ನಂಬಿಕೆ ಇದೆ. ಹೀಗಾಗಿ ಇಲ್ಲಿಗೆ ಬರುವ ಭಕ್ತರು ಅಂತರ್‌ಗಂಗೆ ತೀರ್ಥ ತೆಗೆದುಕೊಂಡು ಹೋಗುತ್ತಾರೆ.
ಗ್ರಾಮದ ಬಸ್‌ ನಿಲ್ದಾಣದಿಂದಲೇ ಕಾಣುವ ಶ್ರೀ ಕಾಲಕಾಲೇಶ್ವರ ಬೆಟ್ಟದ ಶಿಖರ ಸದ್ಭಕ್ತರನ್ನು ಕೈಬೀಸಿ ಸ್ವಾಗತಿಸುತ್ತಿದೆ. ದೇವಸ್ಥಾನಕ್ಕೆ ಏರುವ ಮೊದಲು ಕಲ್ಲಿನ ಮಹಾದ್ವಾರ ಬಳಿಯ ವಿನಾಯಕ ಮಧ್ಯೆದಲ್ಲಿಯ ಶ್ರೀ ಹನುಮಾನ್‌ ದರ್ಶನ, ಮರಗಿಡಗಳು ಭಕ್ತÜರನ್ನು ಮಂತ್ರಮುಗ್ದರನ್ನಾ ಗಿಸುತ್ತದೆ. ಗ್ರಾಮದ ಕೂಗಳತೆ ದೂರವಿರುವ ಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶಿಲಾ ಮೂರ್ತಿಯು ವಿರಾಜಮಾನರಾಗಿದ್ದು, ಈ ಗುಡಿ ಹಿಂಬದಿ ಗುಡ್ಡ ದಲ್ಲಿ ಕಾಲ್ದಾರಿಯಲ್ಲಿ ಕೊಂಚ ನಡೆದರೆ ಅದ್ಭುತವಾದ ಏಕ ಶಿಲೆಯೊಂದು ಬೆಕ್ಕಸಬೆರಗಾಗುವಂತೆ ವಿಸ್ಮಯಗೊಳಿಸು ತ್ತದೆ. ಶ್ರೀ ಕಾಲಕಾಲೇಶ್ವರ ಬೆಟ್ಟಕ್ಕೆ ಎದುರಾಗಿ ನಂದಿ ಸ್ವರೂಪದಲ್ಲಿ ಗುಡ್ಡವೆ ಮೈದಳೆದಿದ್ದು, ಅದರ ಮೇಲೆ ರುದ್ರನ ಪಾದ ಅನೇಕ ಮಹಿಮೆಗಳಿಂದ ಕೂಡಿದೆ.

ನಿಸರ್ಗ ವಿಸ್ಮಯ :

ಸುತ್ತಲಿನ ಗುಡ್ಡಗಳ ವಿಸ್ಮಯಗೊಳಿಸುವ ಕಲ್ಲು ಬಂಡೆಗಳು ಅನೇಕ ಮಹಿಮೆಗಳಿಂದ ಕಂಗೊಳಿಸುತ್ತ ಅಪರಿ ತವಾಗಿಯೆ ಉಳಿದಿವೆ. ಇಲ್ಲಿಯ ಬೆಟ್ಟಗಳ ವ್ಯಶಿಷ್ಟವೆಂದರೆ ಭೌಗೋಳಿಕ ಎತ್ತರದೊಂದಿಗೆ ದೈವಿಕ, ಆಧ್ಯಾತ್ಮಿಕ ಎತ್ತರಗಳು ಕೂಡ ಕಲ್ಪನೆಯ ವಸ್ತುಗಳಾಗಿವೆ. ಪ್ರಕೃತಿ ದತ್ತ ಏಕಶಿಲಾ ಬಂಡೆಯಿಂದ ನಿರ್ಮಿತವಾಗಿ ವಿಹಾರಧಾಮ, ಗಿರಿಧಾಮಗಳ ಜತೆ ವರಧಾಮವಾಗಿ ಪರಿವರ್ತನೆ ಹೊಂದಿ ಯಾತ್ರಿಕರನ್ನು ತಮ್ಮೆಡೆಗೆ ಆಕರ್ಷಿಸುತ್ತಿವೆ. ಭಕ್ತರಿಗೆ ಭಕ್ತಿಯ ತೊಟ್ಟಿಲಾಗಿ ಮಳೆ ಗಾಲದಲ್ಲಿ ನಿಸರ್ಗ ಪ್ರೀಯರಿಗೆ ರಮಣೀಯ ಸ್ವರ್ಗ, ಚಾರಣಿಯರಿಗೆ ಸಾಹಸ ವೇದಿಕೆ, ಸಂಶೋಧಕರಿಗೆ ಅಧ್ಯಯನ ಕೇಂದ್ರ, ಕಲಾವಿದರಿಗೆ ಸ್ಪೂರ್ತಿಯ ಕಾರಂಜಿ, ಯಾತ್ರಾರ್ಥಿಗಳಿಗೆ ಚೈತನ್ಯದ ಚಿಲುಮೆಯ ಪ್ರತೀಕಗಳಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ