ಆ್ಯಪ್ನಗರ

ದೀರ್ಘಾಯುಷ್ಯಕ್ಕಾಗಿ ಆಯುರ್ವೇದ ಪದ್ಧತಿ ಬಳಸಿ

ಗಜೇಂದ್ರಗಡ : ರೋಗ್ಯದ ಅಧಿದೇವತೆ ಭಗವಾನ್‌ ಧನ್ವಂತರಿ ಜಯಂತಿಯನ್ನು ಪ್ರಪಂಚದ ಎಲ್ಲದೇಶಗಳು ಅಂತಾರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿಸುವಂತಾಬೇಕು ಎಂದು ಡಾ. ವಿ.ಎಸ್‌. ಕಂಠಿ ಹೇಳಿದರು.

Vijaya Karnataka 30 Oct 2019, 5:00 am
ಗಜೇಂದ್ರಗಡ : ರೋಗ್ಯದ ಅಧಿದೇವತೆ ಭಗವಾನ್‌ ಧನ್ವಂತರಿ ಜಯಂತಿಯನ್ನು ಪ್ರಪಂಚದ ಎಲ್ಲದೇಶಗಳು ಅಂತಾರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿಸುವಂತಾಬೇಕು ಎಂದು ಡಾ. ವಿ.ಎಸ್‌. ಕಂಠಿ ಹೇಳಿದರು.
Vijaya Karnataka Web use the ayurvedic system for longevity
ದೀರ್ಘಾಯುಷ್ಯಕ್ಕಾಗಿ ಆಯುರ್ವೇದ ಪದ್ಧತಿ ಬಳಸಿ


ಸ್ಥಳೀಯ ಭಗವಾನ್‌ ಮಹಾವೀರ ಜೈನ್‌ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜ ಮತ್ತು ಪಿಜಿ ಸೆಂಟರ್‌ನಲ್ಲಿಧನ್ವಂತರಿ ಜಯಂತಿ ಕಾರ‍್ಯಕ್ರಮದಲ್ಲಿಮಾತನಾಡಿದರು.

ಋುಷಿ ಪರಂಪರೆಯಿಂದ ಬಂದಿರುವ ಆಯುರ್ವೇದ ಪದ್ಧತಿ ದೇಶದ ಎಲ್ಲಡೆ ಆರೋಗ್ಯ ಪರಿಪಾಲನೆಗೆ ಬಳಕೆಯಾಗುತ್ತದೆ. ಭಾರತ ಸರಕಾರ ಧನ್ವಂತರಿ ಹುಟ್ಟಿದ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿಸಲಾಗುತ್ತಿದೆ. ದೀರ್ಘಾಯುಷ್ಯಕ್ಕಾಗಿ ಆಯುರ್ವೇದ ಪದ್ಧತಿ ರಾಮಬಾಣವಾಗಿದೆ. ಮನುಷ್ಯ ಆರೋಗ್ಯವಂತರಾಗಿ ಬಾಳಲು ಕಲಿಸುವುದು ಆಯುರ್ವೇದ ಮೂಲ ಉದ್ದೇಶ. ಆಧುನಿಕ ಜೀವನ ಶೈಲಿಯಿಂದ ಕಾಡುವ ರಕ್ತದೊತ್ತಡ, ಮಧುಮೇಹ ಬೊಜ್ಜು, ಮಾನಸಿಕ ಖಿನ್ನತೆ, ಕಂಪ್ಯೂೕಟರ್‌ ಸಿಂಟ್ರೋಮ್‌, ಬೆನ್ನುನೋವು, ಇತರ ಆರೋಗ್ಯ ಸಮಸ್ಯೆಗೆ ಆಧುನಿಕ ಪದ್ಧತಿಗಿಂತ ಧನ್ವಂತರಿ ಆಯುರ್ವೇದ ಚಿಕಿತ್ಸೆ ಸಂಜಿವಿನಿಯಾಗಿದೆ ಎಂದರು.

ವೈದ್ಯ ಕೆ.ಎಸ್‌. ಬೆಲ್ಲದ ಮಾತನಾಡಿ, ಜನ ಈಗ ಹೆಚ್ಚು ಆಯುರ್ವೇದ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ. ಋುತುಮಾನಕ್ಕೆ ತಕ್ಕ ಆಹಾರ ಸೇವಿಸಬೇಕು. ನಿತ್ಯ ಬದುಕಿನಲ್ಲಿಆಹಾರ ಪದ್ಧತಿ ಸ್ವಲ್ಪ ಬದಲಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ವೈದ್ಯರಾದ ಎಂ.ಬಿ. ಗುಗ್ಗರಿ, ಎ.ಡಿ. ಕೋಲಕಾರ, ಕೆ.ಎಂ. ಅಂಗಡಿ, ಪಿ.ಕೆ. ಬೆಲ್ಲದ, ಸೋಮಯ್ಯಾ ಸಾಮುದ್ರಿ, ಎಂ.ಎಂ. ಮಾಡಲಗೇರಿ, ರತ್ನ ಮಂಜರಿ, ಅಭಿನಂದನ ಪಾಟೀಲ, ಸಂನೂರ ಇತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ