ಆ್ಯಪ್ನಗರ

ಮಿತವಾಗಿ ನೀರು ಬಳಸಿ

ಗದಗ : ಸಕಲ ಜೀವಿಗಳಿಗೆ ನೀರು ಅಮೂಲ್ಯವಾದದ್ದು, ಅದನ್ನು ಮಿತವ್ಯಯದಿಂದ ಬಳಸಬೇಕು. ನೀರಿನ ದುರ್ಬಳಕೆಯಾದರೆ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಈಡಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಬಿ.ಜಿ. ಹಿರೇಮಠ ಹೇಳಿದರು.

Vijaya Karnataka 24 Jul 2019, 5:00 am
ಗದಗ : ಸಕಲ ಜೀವಿಗಳಿಗೆ ನೀರು ಅಮೂಲ್ಯವಾದದ್ದು, ಅದನ್ನು ಮಿತವ್ಯಯದಿಂದ ಬಳಸಬೇಕು. ನೀರಿನ ದುರ್ಬಳಕೆಯಾದರೆ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಈಡಾಗುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಬಿ.ಜಿ. ಹಿರೇಮಠ ಹೇಳಿದರು.
Vijaya Karnataka Web GDG-23RUDRAGOUD6

ಗದಗ ಪಂ. ಪಂಚಾಕ್ಷ ರ ಗವಾಯಿಗಳ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಲಶಕ್ತಿ ಅಭಿಯಾನ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಡಾ.ಬಿ.ಜಿ. ಹಿರೇಮಠ ಮಾತನಾಡಿದರು.


ನಗರದ ಪಂ.ಪಂಚಾಕ್ಷ ರ ಗವಾಯಿಗಳ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜಲಶಕ್ತಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಚರ್ಚಾಕೂಟ ಹಾಗೂ ನಿಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಜೀವಜಲ, ಸಂರಕ್ಷ ಣೆ ಜತೆಗೆ ಸರಕಾರ ಸಂಘ ಸಂಸ್ಥೆಗಳು ಅನೇಕ ಯೋಜನೆ ಹಮ್ಮಿಕೊಂಡಿವೆ.ಹಳ್ಳ ಕೊಳ್ಳಗಳಿಗೆ, ಬಾಂದಾರ ನಿರ್ಮಿಸುವುದು. ಕೊಯ್ಲು ನೀರು ಸಂಗ್ರಹಣೆ ಮಾಡುವುದು, ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು ರೈತರು ಬೆಳೆ ಬೆಳೆಯಬಹುದು ಎಂದರು.

ಡಾ.ಜಿ.ಎಸ್‌.ಯತ್ನಟ್ಟಿ ಅಧ್ಯಕ್ಷ ತೆ ವಹಿಸಿ, ಜಲವೇ ಜೀವನ, ಸಕಲ ಜೀವಾತ್ಮಗಳಿಗೆ ಅತ್ಯವಶ್ಯವಾಗಿದೆ. ನೈಸರ್ಗಿಕವಾಗಿ ದೊರೆಯುವ ನೀರನ್ನು ಕಾಪಾಡಿಕೊಂಡು ಬರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಪ್ರೊ.ಎಂ.ಎನ್‌.ಹೊಂಬಾಳಿ, ಡಾ.ಆರ್‌.ಎಸ್‌.ದಾನರಡ್ಡಿ, ಪ್ರೊ.ಬಿ.ಕೆ.ಪೂಜಾರ, ಪ್ರೊ.ಎಫ್‌.ಬಿ.ಅಂಗಡಿ, ಪ್ರೊ. ಕರಬಿಸ್ಠಿ ಇದ್ದರು.

ದೇವರಡ್ಡಿ ಸ್ವಾಗತಿಸಿದರು. ಪ್ರೊ.ಎಂ.ಐ.ಜೋಬಾಲಿ ನಿರೂಪಿಸಿದರು. ಪ್ರೊ.ಬಿ.ಎಂ.ಗಾಣಿಗೇರ ಪ್ರಾರ್ಥಿಸಿದರು. ಮುತ್ತು ಗುಡ್ಲಾನೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ