ಆ್ಯಪ್ನಗರ

ವಿಡಿಎಸ್‌ ಬಾಲಕೀಯರ ಪ್ರೌಢಶಾಲೆ: ವನಮಹೋತ್ಸವ

ಗದಗ: ನಗರದ ವಿದ್ಯಾದಾನ ಸಮಿತಿಯ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ವನಮಹೋತ್ಸವ ಹಾಗೂ ಎಸ್‌ ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನ ಸಮಾರಂಭ ನಡೆಯಿತು.

Vijaya Karnataka 10 Jul 2019, 5:00 am
ಗದಗ: ನಗರದ ವಿದ್ಯಾದಾನ ಸಮಿತಿಯ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ವನಮಹೋತ್ಸವ ಹಾಗೂ ಎಸ್‌ ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಸನ್ಮಾನ ಸಮಾರಂಭ ನಡೆಯಿತು.
Vijaya Karnataka Web GDG-9RUDRAGOUD13

ಗದಗನ ವಿದ್ಯಾದಾನ ಸಮಿತಿಯ ಬಾಲಕಿಯರ ಪ್ರೌಢಶಾಲೆಯಲ್ಲಿ ಮಂಗಳವಾರ ವನಮಹೋತ್ಸವ ಅಂಗವಾಗಿ ಶಾಲಾ ಆವವರಣದಲ್ಲಿ ಸಸಿ ನೆಡಲಾಯಿತು.


ಕ್ಷೇತ್ರ ಶಿಕ್ಷ ಣಾಧಿಕಾರಿ ಕಾರ್ಯಾಲಯದ ಸಿಆರ್‌ಪಿ ತಳವಾರ ಮಾತನಾಡಿ, ಪ್ರೌಢಶಾಲಾ ಶಿಕ್ಷ ಣವು ಜೀವನದಲ್ಲಿ ಉನ್ನತ ಸಾಧನೆಗೈಯಲು ನಾಂದಿಯಾಗುವುದು ಎಂದರು.

ಪ್ರಾಚಾರ್ಯ ಗಂಗೂಬಾಯಿ ಪವಾರ ಮಾತನಾಡಿ, ಹಸಿರೇ ಉಸಿರು ಎನ್ನುವ ಮಾತಿನಂತೆ ಪರಿಸರ ಸಂರಕ್ಷ ಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜತೆಗೆ ವಿದ್ಯಾರ್ಥಿನಿಯರು ಉತ್ತಮ ವಿದ್ಯಾರ್ಜನೆ ಮಾಡಿ ಉನ್ನತ ಅಂಕ ಗಳಿಸಿರಿ ಎಂದರು.

ಅಧ್ಯಕ್ಷ ತೆ ವಹಿಸಿದ್ದ ವಿದ್ಯಾದಾನ ಸಮಿತಿ ಅಧ್ಯಕ್ಷ ಡಿ.ಬಿ.ಹುಯಿಲಗೋಳ ಮಾತನಾಡಿ, ಅರಣ್ಯ ನಾಶ ತಡೆಗಟ್ಟುವಲ್ಲಿ ವನಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಲು ದಾರಿಯಾಗುವುದು. ನಾವೆಲ್ಲರೂ ಪರಿಸರ ಸಂರಕ್ಷ ಣೆ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜೆ.ಎಸ್‌.ಕಲ್ಯಾಣಿ, ಬಿ.ಎಸ್‌. ಹುಲಮನಿ, ಸುಪ್ರೀತಾ ಮಾಳಪ್ಪನವರ, ಆರ್‌.ಸರೋಜಾಬಾಯಿ, ಪ್ರೀಯಾ ಹುಯಿಲಗೋಳ, ಅಕ್ಷ ತಾ ಕುಲಕರ್ಣಿ, ಸುಜಾತಾ ಮೆಕಾಳೆ, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ