ಆ್ಯಪ್ನಗರ

ಚಿನ್ಮಯ ಕಲಾಶ್ರೀ ಪ್ರಶಸ್ತಿಗೆ ವಿಜಯೀಂದ್ರ ಅರ್ಚಕ ಆಯ್ಕೆ

ಗದಗ: ನಗರದ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ಪ್ರಸಕ್ತ ವರ್ಷದ ರಂಗ ಸಾಧಕರಿಗೆ ನೀಡುವ 'ಚಿನ್ಮಯ ಕಲಾಶ್ರೀ' ಪ್ರಶಸ್ತಿಗೆ ಧಾರವಾಡದ ಹಿರಿಯ ರಂಗ ಕಲಾವಿದ ವಿಜಯೀಂದ್ರ ಅರ್ಚಕ ಆಯ್ಕೆಯಾಗಿದ್ದಾರೆ ಎಂದು ಹಿರಿಯ ರಂಗಕರ್ಮಿ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಗೌರವ ಸಲಹೆಗಾರ ಪ್ರೊ.ಆರ್‌. ಎನ್‌. ಕುಲಕರ್ಣಿ ತಿಳಿಸಿದ್ದಾರೆ.

Vijaya Karnataka 19 Mar 2019, 5:00 am
ಗದಗ: ನಗರದ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿಯ ಪ್ರಸಕ್ತ ವರ್ಷದ ರಂಗ ಸಾಧಕರಿಗೆ ನೀಡುವ 'ಚಿನ್ಮಯ ಕಲಾಶ್ರೀ' ಪ್ರಶಸ್ತಿಗೆ ಧಾರವಾಡದ ಹಿರಿಯ ರಂಗ ಕಲಾವಿದ ವಿಜಯೀಂದ್ರ ಅರ್ಚಕ ಆಯ್ಕೆಯಾಗಿದ್ದಾರೆ ಎಂದು ಹಿರಿಯ ರಂಗಕರ್ಮಿ ಹಾಗೂ ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಗೌರವ ಸಲಹೆಗಾರ ಪ್ರೊ.ಆರ್‌. ಎನ್‌. ಕುಲಕರ್ಣಿ ತಿಳಿಸಿದ್ದಾರೆ.
Vijaya Karnataka Web vijayendra archaka selected for chinmaya kalashri award
ಚಿನ್ಮಯ ಕಲಾಶ್ರೀ ಪ್ರಶಸ್ತಿಗೆ ವಿಜಯೀಂದ್ರ ಅರ್ಚಕ ಆಯ್ಕೆ


ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಕಚೇರಿಯಲ್ಲಿ ನಡೆದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಈ ಕುರಿತು ಮಾತನಾಡಿದರು.

ವಿಜಯೀಂದ್ರ ಅರ್ಚಕ ಅವರು ನಟರಾಗಿ, ನಿರ್ದೇಶಕರಾಗಿ, ಬೆಳಕು ವಿನ್ಯಾಸ, ವಸ್ತ್ರ ವಿನ್ಯಾಸ ಹೀಗೆ ರಂಗದ ಎಲ್ಲ ವಿಭಾಗಗಳಲ್ಲಿ ಕಳೆದ 30 ವರ್ಷಗಳಿಂದ ಧಾರವಾಡದ ರಂಗ ಪರಿಸರದಲ್ಲಿ ತೊಡಗಿಸಿಕೊಂಡಿದ್ದು, ಅವರು ಈ ವರ್ಷದ ಚಿನ್ಮಯ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.

ಮಾ.27 ರಂದು ಈ ಬಾರಿ ವಿಶ್ವ ರಂಗಭೂಮಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ರಂಗಭೂಮಿ ಇಂದಿನ ಸ್ಥಿತಿಗತಿ ವಿಚಾರ ಸಂಕಿರಣ, ರಂಗ ಗೀತೆಗಳ ಪ್ರಸ್ತುತಿ, ರಂಗ ಸನ್ನಿವೇಶ ಹಾಗೂ ಚಿನ್ಮಯ ಕಲಾಶ್ರೀ ಪ್ರಶಸ್ತಿ ಪ್ರದಾನ ಮತ್ತು ಹಿರಿಯ ರಂಗ ಕಲಾವಿದರು ಅನಿಸಿಕೆ ಹಂಚಿಕೊಳ್ಳಲಿದ್ದಾರೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆದಾರಸ್ವಮಿ ಶಿರಹಟ್ಟಿಮಠ ಅಧ್ಯಕ್ಷ ತೆ ವಹಿಸಿದ್ದರು. ಚಿನ್ಮಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಮೌನೇಶ ಬಡಿಗೇರ, ಆರ್‌.ಎನ್‌.ಕೆ. ಮಿತ್ರ ಮಂಡಳಿ ಉಪಾಧ್ಯಕ್ಷ ಎಸ್‌.ಬಿ.ಕುಲಕರ್ಣಿ, ಪ್ರೊ.ಎಂ.ಎಸ್‌. ಕುಲಕರ್ಣಿ, ಪ್ರೊ.ಮುರಲೀಧರ ಸಂಕನೂರ, ಬಿ. ಮಹೇಶ, ಬಿ. ವಿಷ್ಣು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ