ಆ್ಯಪ್ನಗರ

ವೀಸಾ ಆಯ್ತು, ಈಗ ಕ್ರೆಡಿಟ್‌ ಕಾರ್ಡ್‌ ವಂಚನೆ

ಗದಗ :ಅಜರಬೈಜಾನ್‌ ದೇಶಕ್ಕೆ ಪ್ರಯಾಣಿಸಲು ಕಡಿಮೆ ದರದಲ್ಲಿ ವೀಸಾ ಕೊಡಿಸುವುದಾಗಿ ಇಬ್ಬರು ಮಧ್ಯವರ್ತಿಗಳು ಜಿಲ್ಲೆಯ ರೋಣ ಪಟ್ಟಣದ ನಿವಾಸಿಯೊಬ್ಬರಿಗೆ ಒಂದು ಲಕ್ಷ ರೂ. ಪಂಗನಾಮ ಹಾಕಿದ ಬೆನ್ನಲ್ಲೆ, ಬಿ.ಟೆಕ್‌ ಪದವೀಧರನಿಂದ ಕ್ರೆಡಿಟ್‌ ಕಾರ್ಡ್‌ ಸಂಖ್ಯೆ ಪಡೆದು 36 ಸಾವಿರ ರೂ. ಶಾಪಿಂಗ್‌ ಮಾಡಿರುವ ಘಟನೆ ಮುಂಡರಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Vijaya Karnataka 28 Aug 2018, 5:00 am
ಗದಗ :ಅಜರಬೈಜಾನ್‌ ದೇಶಕ್ಕೆ ಪ್ರಯಾಣಿಸಲು ಕಡಿಮೆ ದರದಲ್ಲಿ ವೀಸಾ ಕೊಡಿಸುವುದಾಗಿ ಇಬ್ಬರು ಮಧ್ಯವರ್ತಿಗಳು ಜಿಲ್ಲೆಯ ರೋಣ ಪಟ್ಟಣದ ನಿವಾಸಿಯೊಬ್ಬರಿಗೆ ಒಂದು ಲಕ್ಷ ರೂ. ಪಂಗನಾಮ ಹಾಕಿದ ಬೆನ್ನಲ್ಲೆ, ಬಿ.ಟೆಕ್‌ ಪದವೀಧರನಿಂದ ಕ್ರೆಡಿಟ್‌ ಕಾರ್ಡ್‌ ಸಂಖ್ಯೆ ಪಡೆದು 36 ಸಾವಿರ ರೂ. ಶಾಪಿಂಗ್‌ ಮಾಡಿರುವ ಘಟನೆ ಮುಂಡರಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web visa is now a credit card fraud
ವೀಸಾ ಆಯ್ತು, ಈಗ ಕ್ರೆಡಿಟ್‌ ಕಾರ್ಡ್‌ ವಂಚನೆ


ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಪ್ರಧಾನ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ ಖದೀಮರು, ಕ್ರೆಡಿಟ್‌ ಕಾರ್ಡ್‌ ಸಂಖ್ಯೆ ಹಾಗೂ ಸಿವಿವಿ ಸಂಖ್ಯೆ ಪಡೆದು 36,409 ರೂ. ಮೌಲ್ಯದ ವಸ್ತುಗಳನ್ನು ಆನ್‌ಲೈನ್‌ ಮೂಲಕ ಖರೀದಿಸಿರುವ ಪ್ರಕರಣ ಗದಗ ಜಿಲ್ಲೆಯ ಜನರನ್ನು ಮತ್ತೊಮ್ಮೆ ಬೆಚ್ಚಿ ಬೀಳಿಸಿದೆ.

ಮಹಾನಗರಗಳಲ್ಲಿ ಕಂಡು ಬರುತ್ತಿದ್ದ ಇಂಥ ಆನ್‌ಲೈನ್‌ ಪ್ರಕರಣಗಳು ಜಿಲ್ಲೆಯ ಗ್ರಾಮೀಣ ಭಾಗಕ್ಕೂ ವ್ಯಾಪಿಸಿವೆ. ಅಲ್ಲದೆ ಬ್ಯಾಂಕ್‌ನ ವಹಿವಾಟು, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಮೊಬೈಲ್‌ ಬ್ಯಾಂಕಿಂಗ್‌ ಮಾಡುವ ಪ್ರಜ್ಞಾವಂತರೇ ಇಂಥ ವಂಚನೆ ಜಾಲಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ.

ಹೀಗಿದೆ ವಂಚನೆ: ಮಹಾರಾಷ್ಟ್ರ ಎಸ್‌ಬಿಐ ಬ್ಯಾಂಕ್‌ನ ಪ್ರಧಾನ ಕಚೇರಿ ವ್ಯವಸ್ಥಾಪಕ ವಿಕಾಸ ದೀಕ್ಷಿತ (917397196) ಎಂದು ಹಿಂದಿಯಲ್ಲಿ ಪರಿಚಯಿಸಿಕೊಳ್ಳುತ್ತಾನೆ ವಂಚಕ. ಕ್ರೆಡಿಟ್‌ ಕಾರ್ಡ್‌ ಅಪ್ಡೇಟ್‌ ಮತ್ತು ರಿಅವಾರ್ಡ್‌ ಪಾಯಿಂಟ್‌ಗಳನ್ನು ಚೆಕ್‌ ಮಾಡಬೇಕಿದೆ ಎಂದು ಮುಂಡರಗಿ ತಾಲೂಕಿನ ಗಂಗಾಪುರ ಗ್ರಾಮದ ವಿಜಯನಗರ ಶುಗರ್ಸ್‌ (ಸಕ್ಕರೆ ಕಾರ್ಖಾನೆ)ನಲ್ಲಿ ನೌಕರಿ ಮಾಡುವ ಮಹಮ್ಮದ ಹನೀಫ್‌ ಅವರಿಗೆ ಕರೆ ಮಾಡುತ್ತಾರೆ.

ವಂಚಕನ ಮಾತನ್ನು ನಂಬುವ ಮಹಮ್ಮದ ಹನೀಫ್‌, ತಮ್ಮ ಕ್ರೆಡಿಟ್‌ ಕಾರ್ಡ್‌ ಸಂಖ್ಯೆ ಜತೆಗೆ ಕಾರ್ಡ್‌ ಹಿಂದಿನ ಸಿವಿವಿ ಸಂಖ್ಯೆಯನ್ನೂ ಕೊಡುತ್ತಾರೆ. ಕ್ರೆಡಿಟ್‌ ಕಾರ್ಡ್‌ ಸಂಖ್ಯೆ ಪಡೆಯುತ್ತಿದ್ದಂತೆ ವಂಚಕ ಆನ್‌ಲೈನ್‌ ಶಾಪಿಂಗ್‌ ಮೂಲಕ 31,450 ರೂ. ಖರ್ಚು ಮಾಡುತ್ತಾನೆ. ಇದಾದ ಕೆಲ ಹೊತ್ತಿನಲ್ಲಿ 5 ಸಾವಿರ ರೂ. ಖರ್ಚು ಮಾಡುತ್ತಾರೆ. ಹೀಗೆ ಒಟ್ಟು 36,409 ರೂ. ಕಡಿತವಾದ ಎಸ್‌ಎಂಎಸ್‌ ಬರುತ್ತಿದ್ದಂತೆ ಒಂದು ಕ್ಷಣ ಗಾಬರಿಗೆ ಒಳಗಾಗುವ ಹನೀಫ್‌ ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತದೆ. ತಕ್ಷಣ ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.

ಅಜ್ಞಾನವಲ್ಲದೇ ಮತ್ತೆನು?

ಬ್ಯಾಂಕ್‌ನ ಮಾಹಿತಿ, ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಸಂಖ್ಯೆ ಕೇಳಿ ಬರುವ ಇಂಥ ಕರೆಗಳ ಬಗ್ಗೆ ಎಚ್ಚರಿಕೆ ವಹಿಸಿ. ಬ್ಯಾಂಕ್‌ನ ವತಿಯಿಂದ ಕರೆ ಮಾಡಿ ಯಾರೂ ನಿಮ್ಮ ಕಾರ್ಡ್‌ನ ಮಾಹಿತಿ ಕೇಳುವುದಿಲ್ಲ ಎಂದು ಸ್ವತಃ ಆಯಾ ಬ್ಯಾಂಕ್‌ನವರು ಎಸ್‌ಎಂಎಸ್‌ ಕಳುಹಿಸುತ್ತಾರೆ. ಅಲ್ಲದೆ ಪೊಲೀಸರು ಸಹ ಅಪರಿಚಿತರ ಕರೆಗೆ ಬ್ಯಾಂಕ್‌ ಅಥವಾ ಆಧಾರ್‌ ಕಾರ್ಡ್‌ನ ಮಾಹಿತಿ ಹಂಚಿಕೊಳ್ಳಬೇಡಿ ಎಂದು ಸಾಕಷ್ಟು ಬಾರಿ ವಿನಂತಿಸಲಾಗಿದೆ. ಈ ಎಲ್ಲದರ ಬಗ್ಗೆ ಅರಿವಿದ್ದರೂ ಈ ರೀತಿ ಮೋಸ ಹೋಗುವುದು ಅಜ್ಞಾನವಲ್ಲವೇ ಎಂದು ಪೊಲೀಸರು ಪ್ರಶ್ನಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ