ಗದಗ : ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಕೆಎಂಎಫ್ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಭೇಟಿ ನೀಡಿ, ಹಾಲು ಉತ್ಪಾದಕ ಸಂಘದವರಿಗೆ ಸಾಂತ್ವನ ಹೇಳಿದರು. ಪ್ರವಾಹದಿಂದ ಉಂಟಾದ ನಷ್ಟದ ಕುರಿತು ತಕ್ಷಣವೇ ಒಕ್ಕೂಟದ ನುರಿತ ತಾಂತ್ರಿಕ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ, ದುರಸ್ತಿ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೇ ರಸ್ತೆಗಳು ದುರಸ್ತಿಯಾದ ತಕ್ಷಣವೇ ಪುನಃ ಹಾಲು ಶೇಖರಣೆ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರು.
ನೆರೆ ಪೀಡಿತ ಗ್ರಾಮಗಳಿಗೆ ಭೇಟಿ
ಗದಗ : ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಿಗೆ ಕೆಎಂಎಫ್ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಭೇಟಿ ನೀಡಿ, ಹಾಲು ಉತ್ಪಾದಕ ಸಂಘದವರಿಗೆ ಸಾಂತ್ವನ ಹೇಳಿದರು. ಪ್ರವಾಹದಿಂದ ಉಂಟಾದ ನಷ್ಟದ ಕುರಿತು ತಕ್ಷಣವೇ ಒಕ್ಕೂಟದ ನುರಿತ ತಾಂತ್ರಿಕ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ
Vijaya Karnataka 18 Aug 2019, 5:00 am