ಆ್ಯಪ್ನಗರ

ಕೃಷಿ ಪರಿಕರ ಮಾರಾಟ ಮಳಿಗೆಗೆ ಭೇಟಿ

ಲಕ್ಷೆತ್ರ್ಮೕಶ್ವರ: ಪಟ್ಟಣದ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಗದಗ ಜಿಲ್ಲಾಜಂಟಿ ಕೃಷಿ ನಿರ್ದೇಶಕ ಟಿ.ಎಸ್‌. ರುದ್ರೇಶ ಭೇಟಿ ನೀಡಿ ರಸಗೊಬ್ಬರ, ಕೀಟನಾಶಕ ಮಾರಾಟ, ದಾಸ್ತಾನು ಮಾಹಿತಿ ಪಡೆದು ಕಟ್ಟು ನಿಟ್ಟಿನ ಸೂಚನೆ ನೀಡಿದರು.

Vijaya Karnataka 20 Aug 2020, 5:00 am
ಲಕ್ಷೆತ್ರ್ಮೕಶ್ವರ: ಪಟ್ಟಣದ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಗದಗ ಜಿಲ್ಲಾಜಂಟಿ ಕೃಷಿ ನಿರ್ದೇಶಕ ಟಿ.ಎಸ್‌. ರುದ್ರೇಶ ಭೇಟಿ ನೀಡಿ ರಸಗೊಬ್ಬರ, ಕೀಟನಾಶಕ ಮಾರಾಟ, ದಾಸ್ತಾನು ಮಾಹಿತಿ ಪಡೆದು ಕಟ್ಟು ನಿಟ್ಟಿನ ಸೂಚನೆ ನೀಡಿದರು.
Vijaya Karnataka Web 060218 LXR 2_25
ಲಕ್ಷೆತ್ರ್ಮೕಶ್ವರ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಜಂಟಿ ಕೃಷಿ ನಿರ್ದೇಶಕ ಪಿ.ರುದ್ರೇಶ ಭೇಟಿ ನೀಡಿದರು. ಚಂದ್ರಶೇಖರ ನರಸಮ್ಮನವರ, ಪಿ.ಕೆ.ಹೊನ್ನಪ್ಪನವರ, ಎನ್‌.ಎಚ್‌. ಹಣಗಿ, ಎಸ್‌.ಬಿ. ಲಮಾಣಿ ಇದ್ದರು.


ರಸಗೊಬ್ಬರ ಪಿಓಎಸ್‌ ಯಂತ್ರದ ಮೂಲಕ ರೈತರಿಂದ ದಾಖಲೆ ಪಡೆದು ಬಿಲ್‌ ನೀಡಿಲ್ಲ. ಕೆಲವೆ ರೈತರ ಹೆಸರಿನಲ್ಲಿಬಿಲ್‌ ಆಗಿವೆ. ಬಿಲ್‌ನಲ್ಲಿವ್ಯತ್ಯಾಸವಾದ ಬಗ್ಗೆ ಪರಿಶೀಲಿಸಿದರು.

ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಇದನ್ನೇ ಬಂಡವಾಳವಾಗಿಸಿಕೊಳ್ಳುವ ನಿಟ್ಟಿನಲ್ಲಿಗೊಬ್ಬರ ದಾಸ್ತಾನು ಮಾಡಿಕೊಳ್ಳುವುದು, ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿಯಾವುದೇ ಮುಲಾಜಿಲ್ಲದೇ ಮಾರಾಟ ಲೈಸನ್ಸ್‌ ರದ್ದು ಪಡಿಸಲಾಗುವುದು. ಅಂಗಡಿಗಳಲ್ಲಿರಸಗೊಬ್ಬರ, ಬೀಜ, ಕೀಟನಾಶಕ ದಾಸ್ತಾನು, ಮಾರಾಟ ದರದ ಫಲಕ ಕಡ್ಡಾಯ ಹಾಕಬೇಕು. ನಿಷೇಧಿತ ಮತ್ತು ಅವಧಿ ಮೀರಿದ ಬೀಜ, ಕೀಟನಾಶಕ ಮಾರಾಟ ಮಾಡಬಾರದು. ರೈತರಿಗೆ ಬಿಲ್‌ ನೀಡಬೇಕು. ಹೆಚ್ಚಿನ ಲಾಭದ ಆಸೆಗೆ ಇಲಾಖೆಯ ನಿಯಮಾವಳಿ ಮೀರಿದ್ದು ಕಂಡು ಬಂದಲ್ಲಿಅಂತಹ ಮಾರಾಟಗಾರರ ಲೈಸನ್ಸ್‌ ರದ್ದು ಪಡಿಸಲಾಗುವುದು. ಜಿಲ್ಲೆಯಲ್ಲಿಗದಗ, ಅಂತೂರ-ಬೆಂತೂರ, ಶಿರಹಟ್ಟಿ ತಾಲೂಕಿನ ಇಟಗಿ, ಗಜೇಂದ್ರಗಡ, ರೋಣ ಭಾಗದಲ್ಲಿಕೆಲವು ಮಳಿಗೆಗಳ ಲೈಸನ್ಸ್‌ ರದ್ದು ಪಡಿಸಲಾಗಿದೆ ಎಂದು ಎಚ್ಚರಿಸಿದರು.

ರೈತರು ತಮಗೆನಾದರೂ ಮಾರಾಟಗಾರರಿಂದ ತೊಂದರೆಯಾದಲ್ಲಿಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ಚಂದ್ರಶೇಖರ ನರಸಮ್ಮನವರ, ಕೃಷಿ ಸಹಾಯಕ ಅಧಿಕಾರಿ ಪಿ.ಕೆ.ಹೊನ್ನಪ್ಪನವರ, ಎನ್‌.ಎಚ್‌. ಹಣಗಿ, ಎಸ್‌.ಬಿ. ಲಮಾಣಿ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ