ಆ್ಯಪ್ನಗರ

ತೋಂಟದ ಶ್ರೀ ಸಮಾಧಿಗೆ ಜಾಟ್‌ ಸಮುದಾಯದ ಭಕ್ತರ ಭೇಟಿ

ಗದಗ : ನಗರದ ತೋಂಟದಾರ್ಯ ಮಠಕ್ಕೆ ದಿಲ್ಲಿಯಿಂದ ಆಗಮಿಸಿದ್ದ ಜಾಟ್‌ ಸಮುದಾಯದ ಭಕ್ತರು ಶುಕ್ರವಾರ ಭೇಟಿ ನೀಡಿ, ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಸಮಾಧಿಗೆ ನಮಸ್ಕರಿಸಿ, ಕಂಬನಿ ಮಿಡಿದರು. ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ರಾಷ್ಟ್ರೀಯ ಕೋಮು ಸೌಹಾರ್ದತೆ ಪ್ರಶಸ್ತಿ ಪಡೆಯಲು ದಿಲ್ಲಿಗೆ ಹೋದಾಗ ಅಲ್ಲಿನ ಜಾಟ್‌ ಸಮುದಾಯದವರು ಶ್ರೀಗಳನ್ನು ತಮ್ಮ ಮನೆಯಲ್ಲಿ ಆತಿಥ್ಯ ಸ್ವೀಕರಿಸುವಂತೆ ಕೇಳಿಕೊಂಡಿದ್ದರು.

Vijaya Karnataka 27 Oct 2018, 5:00 am
ಗದಗ : ನಗರದ ತೋಂಟದಾರ್ಯ ಮಠಕ್ಕೆ ದಿಲ್ಲಿಯಿಂದ ಆಗಮಿಸಿದ್ದ ಜಾಟ್‌ ಸಮುದಾಯದ ಭಕ್ತರು ಶುಕ್ರವಾರ ಭೇಟಿ ನೀಡಿ, ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ ಸಮಾಧಿಗೆ ನಮಸ್ಕರಿಸಿ, ಕಂಬನಿ ಮಿಡಿದರು. ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ರಾಷ್ಟ್ರೀಯ ಕೋಮು ಸೌಹಾರ್ದತೆ ಪ್ರಶಸ್ತಿ ಪಡೆಯಲು ದಿಲ್ಲಿಗೆ ಹೋದಾಗ ಅಲ್ಲಿನ ಜಾಟ್‌ ಸಮುದಾಯದವರು ಶ್ರೀಗಳನ್ನು ತಮ್ಮ ಮನೆಯಲ್ಲಿ ಆತಿಥ್ಯ ಸ್ವೀಕರಿಸುವಂತೆ ಕೇಳಿಕೊಂಡಿದ್ದರು. ಶ್ರೀಗಳು ಅವರ ಇಚ್ಛೆಯಂತೆ ಜಾಟ್‌ ಸಮುದಾಯದ ಜನರು ವಾಸಿಸುವ ಕೇರಿಗೆ ಹೋಗಿ ಪ್ರಸಾದ ಸ್ವೀಕರಿಸಿದ್ದರು. ಜತೆಗೆ ಅವರಿಗೆ ಲಿಂಗದೀಕ್ಷೆ ನೀಡಿದ್ದರು.
Vijaya Karnataka Web visit the jat community devotees to the tomb of shantha
ತೋಂಟದ ಶ್ರೀ ಸಮಾಧಿಗೆ ಜಾಟ್‌ ಸಮುದಾಯದ ಭಕ್ತರ ಭೇಟಿ


''ತೋಂಟದ ಶ್ರೀಗಳು ಜಾತ್ಯತೀತ ಮನೋಭಾವ ಹೊಂದಿದ್ದರು. ಅವರು ನಮ್ಮೊಂದಿಗೆ ಇಲ್ಲ ಅನ್ನುವ ನೋವು ನಮ್ಮನ್ನು ಕಾಡುತ್ತಿದೆ. ಪ್ರತಿ ವರ್ಷ ತೋಂಟದಾರ್ಯ ಮಠದ ಜಾತ್ರೆಗೆ ಆಗಮಿಸುವ ಮೂಲಕ ಶ್ರೀಗಳೊಂದಿಗೆ ಸಾಕಷ್ಟು ಒಡನಾಟ ಬೆಳೆದಿತ್ತು. ಮುಂದೆಯೂ ಸಹ ನಾಗನೂರು ಸಿದ್ದರಾಮ ಶ್ರೀಗಳ ಜತೆಗೆ ನಮ್ಮ ಒಟನಾಟ ಮುಂದುವರಿಯಲಿದೆ'' ಎಂದು ಜಾಟ್‌ ಸಮುದಾಯದ ಭಕ್ತರು ಹೇಳಿದರು.

ಸಮುದಾಯದ ಮುಖಂಡ ಮನೋಜ, ಮಹಾಂತ ದೇವರು, ಜಯಾಭಾರತಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ