ಆ್ಯಪ್ನಗರ

ಭಾರತರ ಹೆಮ್ಮೆ ವಿವೇಕಾನಂದರು

ಹೊಳೆಆಲೂರ: ಹಿಂದೂಸ್ತಾನದ ಬಗ್ಗೆ ಅಭಿಮಾನ, ಹೆಮ್ಮೆ ಮೂಡಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಕಲ್ಮೇಶ್ವರ ಪದವಿ ಮಹಾ ವಿದ್ಯಾಲಯದ ಉಪನ್ಯಾಸಕ ವಿ.ಪಿ. ಪಾಟೀಲ ಹೇಳಿದರು.

Vijaya Karnataka 24 Jan 2020, 7:34 pm
ಹೊಳೆಆಲೂರ: ಹಿಂದೂಸ್ತಾನದ ಬಗ್ಗೆ ಅಭಿಮಾನ, ಹೆಮ್ಮೆ ಮೂಡಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಕಲ್ಮೇಶ್ವರ ಪದವಿ ಮಹಾ ವಿದ್ಯಾಲಯದ ಉಪನ್ಯಾಸಕ ವಿ.ಪಿ. ಪಾಟೀಲ ಹೇಳಿದರು.
Vijaya Karnataka Web vivekananda is proud of bharatha
ಭಾರತರ ಹೆಮ್ಮೆ ವಿವೇಕಾನಂದರು


ಅವರು ಇಲ್ಲಿನ ಬದಾಮಿ ಕ್ರಾಸ್‌ ಬಳಿ ಇರುವ ಗೌರಿಮಠ ಕಾಂಪ್ಲೆಕ್ಸ್‌ನಲ್ಲಿಜರುಗಿದ ವಾರದ ಸಾಹಿತ್ಯ ಚಿಂತನ ಕಾರ್ಯಕ್ರಮದಲ್ಲಿಸ್ವಾಮಿ ವಿವೇಕಾನಂದರ ಬಾಲ್ಯ ಮತ್ತು ಜೀವನದ ಕುರಿತು ಉಪನ್ಯಾಸ ನೀಡಿದರು.

ರೋಣ ಕಸಾಪ ಅಧ್ಯಕ್ಷ ಐ.ಎ. ರೇವಡಿ ಅಧ್ಯಕ್ಷತೆ ವಹಿಸಿ, ಕನ್ನಡ ಸಾಹಿತ್ಯ ಪರಿಷತ್‌ ತಿಂಗಳಿಗೊಮ್ಮೆ ವಾರದ ಸಾಹಿತ್ಯ ಚಿಂತನ ಕಾರ್ಯಕ್ರಮ ಮಹಾತ್ಮರ ಕುರಿತು ಉಪನ್ಯಾಸ, ಕನ್ನಡ ನಾಡು, ನುಡಿ, ಸಂಸ್ಕೃತಿ ಹೆಮ್ಮೆಯ ಕುರಿತ ಜಾಗೃತಿ ಮೂಡಿಸಲು ವೇದಿಕೆಯನ್ನೊದಗಿಸುತ್ತದೆ ಎಂದರು. ಹೊಳೆಆಲೂರ ಹೋಬಳಿ ಘಟಕದ ಅಧ್ಯಕ್ಷ ಎಂ.ಎಸ್‌. ಕರಡದ ಮಾತನಾಡಿ, ಕಸಾಪ ಕನ್ನಡಿಗರ ಮನದಲ್ಲಿಅಭಿಮಾನ ಬಿತ್ತುವ ಕೆಲಸ ಮಾಡುತ್ತಿದ್ದು ಬರುವ ದಿನಮಾನಗಳಲ್ಲಿದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳುವು ಯೋಜನೆಯಿದೆ ಎಂದರು.

ಪಿ.ಡಿ. ಶೇಬಣ್ಣವರ ಕವನವಾಚನ ಮಾಡಿದರು.ವೇದಿಕೆಯಲ್ಲಿಎ.ಜಿ. ಚಿತ್ರಗಾರ, ಮುಂಡಾಸದ ಇದ್ದರು. ವಿಜಯಲಕ್ಷ್ಮೀ ರುಮ್ಮಿ ನಿರೂಪಿಸಿ, ವಂದಿಸಿದರು.

ಎಂ.ವಿ. ಪಾಟೀಲ, ಎಸ್‌.ಜಿ. ಮಾಳವಾಡ, ಕಲ್ಮೇಶ ಗಾಣಿಗೇರ, ಎಂ ಎಸ್‌ ಸನಬದ, ನಿಂಗಬಸಪ್ಪ ಚಲವಾದಿ, ಎ ಜಿ ಹಡಪದ, ವಸಂತ ದಾಮೋದರ, ಎಸ್‌.ವೈ. ಚನ್ನದಾಸರ, ಮಾಲಾ ಕಾತರಕಿ, ಪಿ.ವಿ. ಸಾಸಳ್ಳಿ, ಶ್ರೀಕಾಂತ ಲಮಾಣಿ, ಶಂಕರ ಕಲ್ಲಿಗನೂರ, ಹರೀಶ ಕಂಠಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ