ಆ್ಯಪ್ನಗರ

ಧರ್ಮದಿಂದ ನಡೆದು ಸದ್ಗತಿ ಪಡೆಯಿರಿ

ಗದಗ: ಜನರು ಶ್ರದ್ಧಾ ಭಕ್ತಿಯಿಂದ ಧರ್ಮ ಮಾರ್ಗದಲ್ಲಿಮುನ್ನಡೆದರೆ ಅವರು ಬದುಕು ಸುಂದರವಾಗುವುದು ಎಂದು ಪಂಢರಪುರ ಕ್ಷೇತ್ರದ ಹ.ಭ.ಪ ಮಹಾರಾಜ ಪ್ರಭಾಕರ (ದಾದಾ) ಬೋಧಲೆ ಮಹಾರಾಜ ಹೇಳಿದರು.

Vijaya Karnataka 27 Nov 2019, 5:32 pm
ಗದಗ: ಜನರು ಶ್ರದ್ಧಾ ಭಕ್ತಿಯಿಂದ ಧರ್ಮ ಮಾರ್ಗದಲ್ಲಿಮುನ್ನಡೆದರೆ ಅವರು ಬದುಕು ಸುಂದರವಾಗುವುದು ಎಂದು ಪಂಢರಪುರ ಕ್ಷೇತ್ರದ ಹ.ಭ.ಪ ಮಹಾರಾಜ ಪ್ರಭಾಕರ (ದಾದಾ) ಬೋಧಲೆ ಮಹಾರಾಜ ಹೇಳಿದರು.
Vijaya Karnataka Web walk by religion and get virtuous
ಧರ್ಮದಿಂದ ನಡೆದು ಸದ್ಗತಿ ಪಡೆಯಿರಿ


ಮಂಗಳವಾರ ನಗರದ ವಿಠ್ಠಲ ಮಂದಿರದಲ್ಲಿಭಾವಸಾರ ಕ್ಷತ್ರೀಯ ಸಮಾಜ ಏರ್ಪಡಿಸಿದ್ದ ಸಂತ ಜ್ಞಾನೇಶ್ವರ ಮಹಾರಾಜರ ಸಂಜೀವಿನಿ ಸಮಾಧಿ, ದಿಂಡಿ ಸೋಹಳಾ ಉತ್ಸವದಲ್ಲಿಕಾಲಾಕೀರ್ತನದಲ್ಲಿಮಾತನಾಡಿದರು.

ವಿಠ್ಠಲ ರುಕ್ಮಿಣಿ ಮಹಿಮೆ ಹಾಗೂ ಫಂಡರಾಪುರ ಕ್ಷೇತ್ರದ ಮಹತ್ವ ವಿವರಿಸಿ ಭಕ್ತರು ಭಕ್ತಿ ಮತ್ತು ಧರ್ಮಮಾರ್ಗದಲ್ಲಿಮುನ್ನಡೆಯಬೇಕೆಂದರು. ಆರಾಧನೆಯಿಂದ ಮನಸ್ಸಿನ ಕಲ್ಮಶ ಕಳೆಯುತ್ತದೆ. ನಿತ್ಯ ಶ್ರದ್ಧಾ ಪೂರಕವಾಗಿ ಭಗವಂತನ ಆರಾಧನೆ ಮಾಡಿ. ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ, ಸಂಸ್ಕೃತಿ ನೀಡುವುದರ ಮೂಲಕ ಅವರ ಉಜ್ವಲ ಭವಿಷ್ಯ ರೂಪಿಸಿಬೇಕಾಗಿದೆ ಎಂದರು.

ಶರಣರ ಸಂತರ ಮಹಾತ್ಮರ ಅನುಭಾವದ ನುಡಿಗಳು ನಮ್ಮ ಜೀವನವನ್ನು ಪುನಶ್ಚೇತನಗೊಳಿಸುತ್ತದೆ ಎಲ್ಲರೂ ತಮ್ಮ ಜೀವನದಲ್ಲಿಅವುಗಳನ್ನು ಅಳವಡಿಸಿಕೊಂಡು ಸಾರ್ಥಕತೆ ಪಡೆಯಬೇಕು. ಧರ್ಮದಿಂದ ನಡೆದು ಸದ್ಗತಿಯನ್ನು ಪಡೆಯಬೇಕು ಎಂದರು.

ಮಾನವೀಯ ಮೌಲ್ಯಗಳು ಇಂದು ದೂರ ಸರಿಯುತ್ತಿದ್ದು ಸಂಸ್ಕಾರಯುತವಾದ ಬದುಕು ಮಕ್ಕಳಲ್ಲಿತುಂಬಲು ಪ್ರಯತ್ನಿಸಬೇಕೆಂದರಲ್ಲದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿಪಾಲಕ ಪೋಷಕರು ಮುಂದಾಗಬೇಕು. ದೇವರು ಡಾಂಭಿಕ ಭಕ್ತಿಗೆ ಒಲಿಯುವದಿಲ್ಲ, ಶೃದ್ಧೆ, ಭಕ್ತಿ ಸತ್ಯ ಶುದ್ಧ ಕಾಯಕದಿಂದ ಮನುಷ್ಯ ಉನ್ನತಿ ಹೊಂದಲು ಸಾಧ್ಯ ಎಂದರು.

ನಂತರ ನಡೆದ ಮಹಾಮಂಗಳಾರತಿ, ಮಹಾಪ್ರಸಾದ ಕಾರ್ಯಕ್ರಮದಲ್ಲಿಗದಗ ಭಾವಸಾರ ಕ್ಷತ್ರೀಯ ಸಮಾಜ ಬಾಂಧವರು, ಉತ್ಸವ ಸಮಿತಿ ಹಾಗೂ ದೈವ ಮಂಡಳಿ, ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಂಡಿದ್ದರು.

ಸಂಜೆ ವಿಠ್ಠಲ ಮಂದಿರದಿಂದ ಆರಂಭಗೊಂಡ ದಿಂಡಿಯು ನಗರ ಪ್ರದಕ್ಷಿಣೆ ಪೂರೈಸಿ ವಿಠ್ಠಲ ಮಂದಿರಕ್ಕೆ ಮರಳಿತು. ನಂತರ ಆರತಿ ಮಹಾಪ್ರಸಾದ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ