ಆ್ಯಪ್ನಗರ

ನೀರಿನ ಮಲಿನತೆ ಮನುಕುಲಕ್ಕೆ ಮಾರಕ

ಗದಗ: ಇಂದಿನ ದಿನಮಾನಗಳಲ್ಲಿ ಮನುಕುಲದ ಮೇಲೆ ಮಾರಣಾಂತಿಕ ರೋಗಗಳ ಪ್ರಭಾವ ಹೆಚ್ಚುತ್ತಿದ್ದು, ಅದಕ್ಕೆ ಮೂಲ ಕಾರಣ ನೀರಿನ ಮಲಿನತೆ. ಶುದ್ಧ ನೀರು ಮಾನವನ ಹಲವಾರು ಕಾರ್ಯಗಳಿಂದ ಕಲುಷಿತಗೊಂಡು ಅಶುದ್ಧ ರೂಪತಾಳಿ ಮನುಕುಲಕ್ಕೆ ಮಾರಕವಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಮಿತಿ ಅಳವಂಡಿಯ ಕಾರ್ಯದರ್ಶಿ ರೇವಣಸಿದ್ದೇಶ್ವರಸ್ವಾಮಿ ಹಿರೇಮಠ ಹೇಳಿದರು.

Vijaya Karnataka 24 Feb 2019, 5:00 am
ಗದಗ: ಇಂದಿನ ದಿನಮಾನಗಳಲ್ಲಿ ಮನುಕುಲದ ಮೇಲೆ ಮಾರಣಾಂತಿಕ ರೋಗಗಳ ಪ್ರಭಾವ ಹೆಚ್ಚುತ್ತಿದ್ದು, ಅದಕ್ಕೆ ಮೂಲ ಕಾರಣ ನೀರಿನ ಮಲಿನತೆ. ಶುದ್ಧ ನೀರು ಮಾನವನ ಹಲವಾರು ಕಾರ್ಯಗಳಿಂದ ಕಲುಷಿತಗೊಂಡು ಅಶುದ್ಧ ರೂಪತಾಳಿ ಮನುಕುಲಕ್ಕೆ ಮಾರಕವಾಗಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಮಿತಿ ಅಳವಂಡಿಯ ಕಾರ್ಯದರ್ಶಿ ರೇವಣಸಿದ್ದೇಶ್ವರಸ್ವಾಮಿ ಹಿರೇಮಠ ಹೇಳಿದರು.
Vijaya Karnataka Web water pollution is mortal to humanity
ನೀರಿನ ಮಲಿನತೆ ಮನುಕುಲಕ್ಕೆ ಮಾರಕ


ತಾಲೂಕಿನ ನರಸಾಪೂರ ಗ್ರಾಮದಲ್ಲಿ ಎನ್‌ಎಸ್‌ಎಸ್‌ ಕೋಶ ಕವಿವಿ ಧಾರವಾಡ, ಜಿಪಂ ಗದಗ, ತಾಪಂ ಸಹಯೋಗದಲ್ಲಿ ಜಗದ್ಗುರು ಪಂಚಾಚಾರ್ಯ ಶಿಕ್ಷ ಣ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ಘಟಕದ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಂ.ಟಿ. ಮಾಗಳದ ಅವರು ಶುದ್ಧ ನೀರು ಆರೋಗ್ಯದ ಉಸಿರು ಎಂಬ ವಿಷಯ ಹಾಗೂ ನೀರಿನ ಮಹತ್ವ, ಬಳಕೆ, ಸಂರಕ್ಷ ಣೆಯಂತಹ ಮಹತ್ವದ ಅಂಶಗಳ ಕುರಿತು ಉಪನ್ಯಾಸ ನೀಡಿದರು.

ಜಗದ್ಗುರು ಪಂಚಾಚಾರ್ಯ ಶಿಕ್ಷ ಣ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಸಿ.ಉಪ್ಪಿನ, ಡಾ.ಬಸವರಾಜ ಎಂ.ಎಚ್‌., ಮಂಜುಳ ಹರಿಜನ, ಬಸವರಾಜ ಗೌರಿಮನಿ, ಶಕುಂತಲಾ ಶಿವಪೂಜಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ