ಆ್ಯಪ್ನಗರ

ಮಾಸ್ಕ್‌ ಧರಿಸಿ ಕೊರೊನಾ ಓಡಿಸಿ

ಗದಗ: ನಿತ್ಯ ಸಾವಿರಾರ ಜನರು ಸೇರುವ ಪ್ರದೇಶವಾದ ಸಂತೆಗಳಲ್ಲಿಕೋವಿಡ್‌ ನಿಯಮಾವಳಿ ಉಲ್ಲಂಘಿಘಿಸುತ್ತಿರುವ ಕುರಿತು ವಿಜಯ ಕರ್ನಾಟಕ ರಿಯಾಲಿಟಿ ಚೆಕ್‌ ನಡೆಸಿದ ಹಿನ್ನೆಲೆಯಲ್ಲಿಅಧಿಕಾರಿಗಳು ಕೈಗೊಂಡ ಕ್ರಮಗಳು ಕುರಿತು ಮಾಹಿತಿ ನೀಡಿದ್ದಾರೆ.

Vijaya Karnataka 15 Oct 2020, 5:00 am
ಗದಗ: ನಿತ್ಯ ಸಾವಿರಾರ ಜನರು ಸೇರುವ ಪ್ರದೇಶವಾದ ಸಂತೆಗಳಲ್ಲಿಕೋವಿಡ್‌ ನಿಯಮಾವಳಿ ಉಲ್ಲಂಘಿಘಿಸುತ್ತಿರುವ ಕುರಿತು ವಿಜಯ ಕರ್ನಾಟಕ ರಿಯಾಲಿಟಿ ಚೆಕ್‌ ನಡೆಸಿದ ಹಿನ್ನೆಲೆಯಲ್ಲಿಅಧಿಕಾರಿಗಳು ಕೈಗೊಂಡ ಕ್ರಮಗಳು ಕುರಿತು ಮಾಹಿತಿ ನೀಡಿದ್ದಾರೆ.
Vijaya Karnataka Web carona


ಅವಳಿ ನಗರದಲ್ಲಿನಗರಸಭೆ ಮೂಲಕ ಸಾರ್ವಜನಿಕರಿಗೆ ದಂಡ ಹಾಗೂ ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.ಅದರಲ್ಲೂಪ್ರಮುಖವಾಗಿ ನಗರದ ಗ್ರೇನ್‌ ಮಾರುಕಟ್ಟೆ ಹಾಗೂ ಬೆಟಗೇರಿಯ ಕಾಯಿಪಲ್ಲೆಹಾಗೂ ಎಪಿಎಂಸಿ ಆವರಣದಲ್ಲಿನಡೆಯುವ ಜಾನುವಾರು ಸಂತೆಗಳಲ್ಲಿಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಇರಬೇಕು. ನಗರಸಭೆಯಿಂದ ಬೆಳಗ್ಗೆ ಟಂಟಂ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಹಾಗೆ ನಗರಸಭೆ ಇಬ್ಬರು ಅಧಿಕಾರಿಗಳನ್ನು ಸಹ ಸಾರ್ವಜನಿಕರಿಗೆ ಜಾಗೃತಿ ಹಾಗೂ ದಂಡ ಹಾಕುವ ಕೆಲಸ ನೀಡಲಾಗಿದೆ. ಇದರ ಜತೆಗೆ ಪೊಲೀಸರು ಸಹ ನಗರದ ಪ್ರಮುಖ ರಸ್ತೆಗಳಲಿ ಬೈಕ್‌ ಸಾವಾರರು ಹಾಗೂ ಟಂಟಂ ಸವಾರರು ಕಡ್ಡಾಯವಾಗಿ ಮಾಸ್ಕ್‌ ಹಾಕುವಂತೆ ಜಾಗೃತಿ ಮೂಡಿಸುವ ಕೆಲಸ ಆರಂಭವಾಗಿದೆ.ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ್‌ ಧರಿಸುವ ಹಾಗೂ ಕೈಗಳನ್ನು ಶುಚಿಯಾಗಿಟ್ಟುಕೊಂಡರೆ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ