ಆ್ಯಪ್ನಗರ

ಆಹ್ಮಾದಕರ ಮನಸ್ಸಿನಿಂದ ಸ್ವಾಸ್ಥತ್ರ್ಯ ಆರೋಗ್ಯ

ರೋಣ : ಮಾನಸಿಕ ಅಸ್ಥಿರತೆ ದೇಹದ ಮೇಲೆ ನಿಧಾನವಾಗಿ ಪ್ರಹಾರ ಮಾಡುತ್ತದೆ. ಆದರೆ ಅದು ಈ ಕ್ಷಣದ ನಮ್ಮ ಬದುಕು ಹಾಳು ಮಾಡುತ್ತದೆ. ನಿರಂತರವಾಗಿ ಅದು ನಮ್ಮ ಬೆನ್ನು ಹತ್ತಿದಾಗ ಬದುಕು, ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಇಂತಹ ಮಾನಸಿಕ ಅನಾರೋಗ್ಯವನ್ನು ಮಾನಸಿಕ ರೋಗ ತಜ್ಞರ ಸಲಹೆ

Vijaya Karnataka 12 Oct 2019, 5:00 am
ರೋಣ : ಮಾನಸಿಕ ಅಸ್ಥಿರತೆ ದೇಹದ ಮೇಲೆ ನಿಧಾನವಾಗಿ ಪ್ರಹಾರ ಮಾಡುತ್ತದೆ. ಆದರೆ ಅದು ಈ ಕ್ಷಣದ ನಮ್ಮ ಬದುಕು ಹಾಳು ಮಾಡುತ್ತದೆ. ನಿರಂತರವಾಗಿ ಅದು ನಮ್ಮ ಬೆನ್ನು ಹತ್ತಿದಾಗ ಬದುಕು, ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಇಂತಹ ಮಾನಸಿಕ ಅನಾರೋಗ್ಯವನ್ನು ಮಾನಸಿಕ ರೋಗ ತಜ್ಞರ ಸಲಹೆ ಸಮಾಲೋಚನೆ ಮತ್ತು ಆಹ್ಲಾದಕರ ವಾತಾವರಣದಿಂದ ಸ್ವಾಸ್ಥತ್ರ್ಯ ಮಾನಸಿಕ ಆರೋಗ್ಯ ಸೃಷ್ಠಿಸಲು ಸಾಧ್ಯ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶೆ ವಿ.ನಾಗಮಣಿ ಹೇಳಿದರು.
Vijaya Karnataka Web wellness health with pleasant mind
ಆಹ್ಮಾದಕರ ಮನಸ್ಸಿನಿಂದ ಸ್ವಾಸ್ಥತ್ರ್ಯ ಆರೋಗ್ಯ


ಪಟ್ಟಣದ ನ್ಯಾಯಾಲಯದ ಪ್ರಾಂಗಣದಲ್ಲಿಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಮಾನಸಿಕ ಆರೋಗ್ಯ ವಿಭಾಗ, ಗದಗ ಜಿಲ್ಲಾಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗ, ಗದಗ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ತಾಲೂಕು ಆಸ್ಪತ್ರೆ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ರೋಣ ಇವರ ಆಶ್ರಯದಲ್ಲಿಗುರುವಾರ ಜರುಗಿದ ವಿಶ್ವ ಮಾನಸಿಕ ಆರೋಗ್ಯ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿದರು. ಆರೋಗ್ಯಕ್ಕೆ ಆಹ್ಲಾದಕರ ವಾತವರಣ ಅವಶ್ಯಕ ಎಂದು ಹೇಳಿದರು

ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ.ಹಾದಿಮನಿ ಮಾತನಾಡಿ, ಜಾಗತಿಕ ಮಾನಸಿಕ ಆರೋಗ್ಯ ಸಂಸ್ಥೆಯ ಈ ಸಾಲಿನ ಜಾಗತಿಕ ಘೋಷಣೆ ಎಲ್ಲರೂ ಒಗ್ಗೂಡಿ ಆತ್ಮಹತ್ಯೆ ತಡೆಗಟ್ಟೋಣ ಎನ್ನುವದಾಗಿದೆ. ಯಾವುದೇ ವ್ಯಕ್ತಿ ತೀವ್ರತರ ಮಾನಸಿಕ ಖಿನ್ನತೆಗೆ ಒಳಗಾದಾಗ, ಮಾನಸಿಕ ಅನಾರೋಗ್ಯದ ಸಂದರ್ಭದಲ್ಲಿಆತ್ಮಹತ್ಯೆಯಂತ ಜೀವ ಕಳೆದುಕೊಳ್ಳುವ ಅಪಾಯಕ್ಕೆ ಒಳಗಾಗುತ್ತಾರೆ. ಅಂತಹ ವ್ಯಕ್ತಿ ಬೇಗನೆ ಗುರುತಿಸಿ, ಆಪ್ತ ಸಮಾಲೋಚನೆಯಿಂದ ಆತ್ಮಹತ್ಯೆ ತಡೆಗಟ್ಟಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ವ್ಹಿ.ಡಿ.ಪಾವಾಸ್ಕರ ಮಾತನಾಡಿ, ಮಾನಸಿಕ ರೋಗದಲ್ಲಿವ್ಯಕ್ತಿಯು ಹಿಂಸೆ, ನಿಂದನೆ ಮತ್ತು ತಾರತಮ್ಯದಿಂದ ಮುಕ್ತವಾಗಬೇಕು. ಸ್ವಾಯತ್ತೆಯಿಂದ ಸ್ವಂತ ನಿರ್ಧಾರದೊಂದಿಗೆ ಬದುಕಬೇಕು. ಸಮುದಾಯದಲ್ಲಿಬೆರೆತು, ತಲೆಯತ್ತಿ ಗೌರವದೊಂದಿಗೆ ಬದುಕವಂತಾಗಬೇಕು ಎಂದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶ ಮೊಹಮ್ಮದ್‌ ಯೂನುಸ್‌ ಅಥಣಿ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಹಿರಿಯ ಆರೋಗ್ಯ ಸಹಾಯಕ ಬಿ ಆರ್‌ ಪಾಟೀಲ, ರೋಣ ವಕೀಲರ ಸಂಘದ ಉಪಾಧ್ಯಕ್ಷ ಬಿ ಎಸ್‌ ರಂಗನಗೌಡರ, ಕಾರ್ಯದರ್ಶಿ ಎ ಎಸ್‌ ಅರಹುಣಸಿ ಉಪಸ್ಥಿತರಿದ್ದರು. ವಕೀಲ ವೈ.ಡಿ.ನಧಾಫ್‌ ನಿರೂಪಿಸಿ, ಸ್ವಾಗತಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ