ಆ್ಯಪ್ನಗರ

ಇಲಾಖೆ ವರದಿ ಇಂಗ್ಲಿಷ್‌ನಲ್ಲಿ ಏಕೆ ?

ಶಿರಹಟ್ಟಿ : ತಾಲೂಕಿನ ಮಾಗಡಿ ಗ್ರಾಮ ಸೇರಿದಂತೆ ವಿವಿಧ ಕಡೆಗಳಲ್ಲಿ ಶಿಕ್ಷ ಣ ಇಲಾಖೆ ಪರವಾನಗಿ ಇಲ್ಲದೇ ಎಲ್‌ಕೆಜಿ,ಯುಕೆಜಿ ಸೇರಿದಂತೆ ಸರಕಾರಿ ನಿಯಮಾವಳಿ ಗಾಳಿಗೆ ತೂರಿ ಶಾಲೆ ನಡೆಸುತ್ತಿದ್ದಾರೆ. ಇಲಾಖೆ ಪರವಾನಗಿ ಇಲ್ಲದೇ ಈ ಶಾಲೆಗಳು ಹೇಗೆ ಕಾರಾರ‍ಯರಂಭ ಮಾಡುತ್ತಿವೆ ಎಂದು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಪ್ರಶ್ನಿಸಿದರು.

Vijaya Karnataka 6 Aug 2019, 5:00 am
ಶಿರಹಟ್ಟಿ : ತಾಲೂಕಿನ ಮಾಗಡಿ ಗ್ರಾಮ ಸೇರಿದಂತೆ ವಿವಿಧ ಕಡೆಗಳಲ್ಲಿ ಶಿಕ್ಷ ಣ ಇಲಾಖೆ ಪರವಾನಗಿ ಇಲ್ಲದೇ ಎಲ್‌ಕೆಜಿ,ಯುಕೆಜಿ ಸೇರಿದಂತೆ ಸರಕಾರಿ ನಿಯಮಾವಳಿ ಗಾಳಿಗೆ ತೂರಿ ಶಾಲೆ ನಡೆಸುತ್ತಿದ್ದಾರೆ. ಇಲಾಖೆ ಪರವಾನಗಿ ಇಲ್ಲದೇ ಈ ಶಾಲೆಗಳು ಹೇಗೆ ಕಾರಾರ‍ಯರಂಭ ಮಾಡುತ್ತಿವೆ ಎಂದು ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಪ್ರಶ್ನಿಸಿದರು.
Vijaya Karnataka Web GDG-5SHT1
ಶಿರಹಟ್ಟಿ ತಾಪಂನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಸುಶೀಲವ್ವ ಥಾವರೆಪ್ಪ ಲಮಾಣಿ ಇತರರು ಪಾಲ್ಗೊಂಡಿದ್ದರು.


ಅವರು ಸೋಮವಾರ ತಾಪಂ ಸಭಾಭವನದಲ್ಲಿ ತಾಪಂ ಅಧ್ಯಕ್ಷೆ ಸುಶೀಲವ್ವ ಥಾವರೆಪ್ಪ ಲಮಾಣಿ ಅಧ್ಯಕ್ಷ ತೆಯಲ್ಲಿ ಜರುಗಿದ ಮಾಸಿಕ ಕೆಡಿಪಿ ಸಭೆಯಲ್ಲಿ ಇಲಾಖಾವಾರು ಚರ್ಚೆ ಸಂದರ್ಭದಲ್ಲಿ ಮಾತನಾಡಿದರು.

ಖಾಸಗಿ ಶಾಲೆಗಳಲ್ಲಿ ಅರ್ಹತೆ ಇಲ್ಲದಿರುವ ಸಿಬ್ಬಂದಿ ಹೆಚ್ಚು ಕಾರ‍್ಯನಿರ್ವಹಿಸುತ್ತಿದ್ದಾರೆ. ಇದರಿಂದ ಶೈಕ್ಷ ಣಿಕ ಪ್ರಗತಿ ಕುಂಠಿತವಾಗುತ್ತದೆ. ಆದ್ದರಿಂದ ಇಂತಹ ಶಾಲೆ ಬಂದ್‌ ಮಾಡಿ ಮಕ್ಕಳ ಶೈಕ್ಷ ಣಿಕ ಗುಣಮಟ್ಟ ಹೆಚ್ಚಿಸಬೇಕೆಂದರು.

ಇಂಗ್ಲಿಷ್‌ನಲ್ಲಿ ಪ್ರಗತಿ ಮಾಹಿತಿ ?:
ಆರೋಗ್ಯ ಇಲಾಖೆ ನೀಡಿದಂತಹ ಪ್ರಗತಿ ವರದಿ ಇಂಗ್ಲಿಷ್‌ನಲ್ಲಿ ಇದ್ದುದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತಾಪಂ ಇಒ ಆರ್‌.ವೈ.ಗುರಿಕಾರ, ಕಡ್ಡಾಯವಾಗಿ ಕನ್ನಡದಲ್ಲಿಯೇ ಸ್ಪಷ್ಟವಾಗಿ ಎಲ್ಲ ಮಾಹಿತಿ ನೀಡುವಂತೆ ಹಲವು ಸಭೆಗಳಲ್ಲಿ ಹೇಳಿದ್ದರೂ ಸಹ ಇನ್ನೂ ಸುಧಾರಿಸಿಕೊಳ್ಳದೆ ಇದ್ದರೆ ಹೇಗೆ ? ಕೈಬರಹದಲ್ಲಿ ಬರೆದ ಮಾಹಿತಿ ನೀಡುತ್ತಿದ್ದೀರಿ ಹೀಗಾದರೆ ಹೇಗೆ ? ಎಂದು ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ‍್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ಸಭೆ ನಡೆಸುವುದು ಕಾಟಾಚಾರಕ್ಕಲ್ಲ ಇದನ್ನು ಮೊದಲು ಅರಿತು ಕೆಲಸ ಮಾಡಿ ಮುಂದಿನ ಸಭೆಗೆ ಬರುವಾಗ ಕನ್ನಡದಲ್ಲಿಯೇ ಎಲ್ಲ ಮಾಹಿತಿ ತರಬೇಕೆಂದು ತಾಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.

ತಾಲೂಕು ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರೆತೆ :
ತಾಲೂಕಾ ಆಸ್ಪತ್ರೆಯು 100ಹಾಸಿಗೆಯ ಆಸ್ಪತ್ರೆಯಾಗಿ ಮಂಜೂರಾಗದ್ದರೂ ಸಹ ಇನ್ನೂ ಕೇವಲ 30 ಹಾಸಿಗೆ ಆಸ್ಪತ್ರೆಯಲ್ಲೇ ಕಾರಾರ‍ಯರಂಭ ಮಾಡುತ್ತಿದೆ. ನಿತ್ಯವೂ 350ಕ್ಕೂ ಹೆಚ್ಚು ಹೊರ ರೋಗಿಗಳು ಹಾಗೂ 150ಕ್ಕೂ ಹೆಚ್ಚು ಹಳೆ ಒಪಿಡಿಗಳು ದಾಖಲಾಗುತ್ತಿವೆ. ತಿಂಗಳಿಗೆ 100ಕ್ಕೂ ಹೆಚ್ಚು ಹೆರಿಗೆ ಪ್ರಕರಣ ದಾಖಲಾಗುತ್ತಿವೆ. ಇದರಿಂದ ಸ್ಥಳಾವಕಾಶದ ಕೊರೆತೆಯಾಗುತ್ತಿದೆ. ರಾತ್ರಿ ಕುಡುಕರು ಬಂದು ಗಲಾಟೆ ಮಾಡುತ್ತಿದ್ದಾರೆ. ಆದ್ದರಿಂದ ರಾತ್ರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲು ವ್ಯವಸ್ಥೆ ಮಾಡಬೇಕೆಂದು ಆಡಳಿತ ವೈದ್ಯಾಧಿಕಾರಿ ಚಂದ್ರು ಲಮಾಣಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಗುರಿಕಾರ, ಕಾಲಕಾಲಕ್ಕೆ ಆರೋಗ್ಯ ರಕ್ಷಾ ಸಭೆ ನಡೆಸಿದ್ದರೇ ಇಂತಹ ಸಮಸ್ಯೆ ಅಲ್ಲಿಯೇ ಪರಿಹರಿಸಬಹುದಿತ್ತು. ಆದರೆ ನೀವು ನಿಗದಿತ ಸಮಯದಲ್ಲಿ ಸಭೆ ನಡೆಸದಿರುವುದರಿಂದ ಸಮಸ್ಯೆ ಉದ್ಭವಿಸುತ್ತಿವೆ ಎಂದರು.

ತಾಪಂ ಅಧ್ಯಕ್ಷೆ ಸುಶೀಲವ್ವ ಥಾವರೆಪ್ಪ ಲಮಾಣಿ, ಉಪಾಧ್ಯಕ್ಷೆ ಪವಿತ್ರಾ ಮಂಜುನಾಥ ಶಂಕಿನದಾಸರ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಇಲ್ಲ :
ಶಿರಹಟ್ಟಿಯ ರೇಷ್ಮೆ ಕಚೇರಿಯಲ್ಲಿ ಸಿಬ್ಬಂದಿ ಕೊರೆತೆ ಇದೆ. ತಾಲೂಕಿಗೆ ಒಬ್ಬ ಸಿಬ್ಬಂದಿ ಮಾತ್ರ ಡೆಮಾನ್‌ಸ್ಟೆಟರ್‌ ಇದ್ದು ,ವಾರದಲ್ಲಿ 3 ದಿನ ಕಲಘಟಗಿ ಹಾಗೂ 3 ದಿನ ಶಿರಹಟ್ಟಿಯಲ್ಲಿ ಕೆಲಸ ನಿರ್ವಹಿಸುವಂತೆ ಮೇಲಾಧಿಕಾರಿಗಳು ನಿರ್ದೆಶನ ನೀಡಿದ್ದಾರೆಂದು ರೇಷ್ಮೆ ಕೃಷಿ ವಿಸ್ತಿರ್ಣಾಧಿಕಾರಿ ಹೇಳಿದರು. ಇದಕ್ಕೆ ಇಒ ಗುರಿಕಾರ ಪ್ರತಿಕ್ರಿಯಿಸಿ, 3ದಿನ ಯಾವ ದಿನಗಳಲ್ಲಿ ತಾಲೂಕಿನ ರೈತರಿಗೆ ಲಭ್ಯವಿರುತ್ತೀರೆಂದು ನಿಮ್ಮ ಕಚೇರಿಯ ನಾಮಫಲಕದಲ್ಲಿ ಪ್ರದರ್ಶಿಸಬೇಕು. ಸಿಬ್ಬಂದಿ ಕೊರತೆ ಬಗ್ಗೆ ನಿಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ