ಆ್ಯಪ್ನಗರ

ಗರ್ಭಿಣಿ, ಬಾಲಕ ಹತ್ಯೆಗೆ ವ್ಯಾಪಕ ಖಂಡನೆ

ಗದಗ: ಪಶ್ಚಿಮ ಬಂಗಾಳದ ಮುರ್ಷಿದಾಬಾದ ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಕಾಶ ಪಾಲ್‌ ಅವರ ಗರ್ಭಿಣಿ ಪತ್ನಿ ಹಾಗೂ 8 ವರ್ಷದ ಪುತ್ರನ ಅಮಾನುಷ ಹತ್ಯೆ ಖಂಡಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಜಿಲ್ಲಾಕಾರ್ಯಕರ್ತರು ಜಿಲ್ಲಾಡಳಿತ ಮುಂಭಾಗದಲ್ಲಿಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.

Vijaya Karnataka 16 Oct 2019, 5:00 am
ಗದಗ: ಪಶ್ಚಿಮ ಬಂಗಾಳದ ಮುರ್ಷಿದಾಬಾದ ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಕಾಶ ಪಾಲ್‌ ಅವರ ಗರ್ಭಿಣಿ ಪತ್ನಿ ಹಾಗೂ 8 ವರ್ಷದ ಪುತ್ರನ ಅಮಾನುಷ ಹತ್ಯೆ ಖಂಡಿಸಿ ಮಂಗಳವಾರ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಜಿಲ್ಲಾಕಾರ್ಯಕರ್ತರು ಜಿಲ್ಲಾಡಳಿತ ಮುಂಭಾಗದಲ್ಲಿಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.
Vijaya Karnataka Web 15RUDRAGOUD7B_25
ಪಶ್ಚಿಮ ಬಂಗಾಳದಲ್ಲಿಹಿಂದೂ ಹತ್ಯೆ ಖಂಡಿಸಿ ಗದಗನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿವಿಶ್ವ ಹಿಂದೂ ಪರಿಷತ್‌ನಿಂದ ಪ್ರತಿಭಟನೆ ನಡೆಯಿತು.


ಪಶ್ಚಿಮ ಬಂಗಾಳದಲ್ಲಿರುವ ರಾಷ್ಟ್ರ ವಿರೋಧಿ ಹಾಗೂ ಸಮಾಜ ಘಾತಕ ಶಕ್ತಿಗಳನ್ನು ಕಾನೂನು ಕ್ರಮದಿಂದ ಮಟ್ಟ ಹಾಕಬೇಕು ಎಂದು ಆಗ್ರಹಿಸಿದರು. ಹತ್ಯೆ ಖಂಡಿಸಿ ಪಶ್ಚಿಮ ಬಂಗಾಳದ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಅ.10 ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ ಜಿಲ್ಲೆಯಲ್ಲಿಬಿಂದು ಪ್ರಕಾಶ ಅವರ ಗರ್ಭಿಣಿ ಪತ್ನಿ ಹಾಗೂ 8 ವರ್ಷದ ಬಾಲಕನ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ಹಿಂದೂ ಸಮಾಜ ಆತಂಕಗೊಂಡಿದೆ. ಪ.ಬಂಗಾಳ ರಾಜ್ಯವು ಅಲ್ಲಿನ ಹಿಂದೂಗಳಿಗೆ ಆತಂಕಕಾರಿಯಾಗಿ ಪರಿಣಮಿಸಿದೆ. ಬಾಂಗ್ಲಾದೇಶದ ನುಸುಳುಕೋರರ ಕಾರಣ ಅವರ ಓಟಿನ ಆಸೆಯಿಂದ ಕೂಡಿದ ಮಮತಾ ಸರಕಾರ ಅವರ ಕಾನೂನು ವಿರೋಧಿ ಕೃತ್ಯಗಳನ್ನು ಕಂಡರೂ ಕಣ್ಮಚ್ಚಿ ಕುಳಿತಿದೆ. ಸರಕಾರದ ಧೋರಣೆ ನೋಡಿದರೆ ಹಿಂದೂಗಳ ಮೇಲೆ ಷಡ್ಯಂತ್ರ ಪೂರ್ವಕವಾಗಿ ಭಯ ಹುಟ್ಟಿಸುವುದು ಮತ್ತು ಹೊಡೆತ ನೀಡುವ ಕಾರ್ಯ ನಡೆಯುತ್ತಿದೆ. ಅಂತಹ ಭಯೋತ್ಪಾದಕರಿಗೆ ಸರಕಾರ ಮುಕ್ತವಾಗಿ ಬೆಂಬಲ ನೀಡುತ್ತಿದೆ. ಇದನ್ನು ಇಲ್ಲಿಗೆ ಬಿಡುವಂತೆ ಆಗ್ರಹಿಸಿ ದೇಶಾದ್ಯಂತ ಭಜರಂಗದಳದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪಶ್ಚಿಮ ಬಂಗಾಳದ ಸರಕಾರ ವಜಾಗೊಳಿಸಿ, ರಾಷ್ಟ್ರಪತಿ ಶಾಸನ ಹೇರಬೇಕು. ಬಂದು ಪ್ರಕಾಶ ಪಾಲ್‌ ಪರಿವಾರದ ಹತ್ಯೆ ಪ್ರಕರಣ ಸಿಬಿಐಗೆ ವಹಿಸಬೇಕು. ಹಂತಕರಿಗೆ ಮರಣ ದಂಡನೆ ವಿಧಿಸಬೇಕು. ಪಶ್ಚಿಮ ಬಂಗಾಳದಲ್ಲಿಎನ್‌ಆರ್‌ಸಿ ಜಾರಿಗೊಳಿಸಿ ಬಾಂಗ್ಲಾದೇಶದ ಅಕ್ರಮ ವಿದೇಶಿಗಳನ್ನು ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಬೇಕು. ನಾಗರಿಕ ಕಾನೂನು ತಿದ್ದುಪಡಿ ಮಾಡಿ ಬಾಂಗ್ಲಾದೇಶದಿಂದ ಹೊಡೆತ ತಿಂದು ಭಾರತಕ್ಕೆ ಬಂದ ಹಿಂದೂಗಳಿಗೆ ಪೌರತ್ವ ನೀಡಿ ಆಶ್ರಯ ನೀಡಬೇಕು ಎಂದು ಮನವಿಯಲ್ಲಿಒತ್ತಾಯಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್‌ ಜಿಲ್ಲಾಕಾರ್ಯದರ್ಶಿ ಶ್ರೀಧರ ಕುಲಕರ್ಣಿ, ಜಿಲ್ಲಾಸಹ ಕಾರ್ಯದರ್ಶಿ ರಾಘವೇಂದ್ರ ಹಬೀಬ, ಜಿಲ್ಲಾಅಧ್ಯಕ್ಷ ಪ್ರಲಾದ ಇನಾಮದಾರ, ರಾಜು ಕುರಡಗಿ, ಮೋಹನ ಮಾಳಶೆಟ್ಟಿ, ವಿನಾಯಕ ಹಬೀಬ, ಕಾರ್ಯಕರ್ತರು ಭಾಗವಹಿಸಿದ್ದರು.

ಸಂಸದ ಉದಾಸಿ ಭೇಟಿ;

ಪಶ್ಚಿಮ ಬಂಗಾಳದಲ್ಲಿಹಿಂದೂಗಳ ಹತ್ಯೆ ಖಂಡಿಸಿ ಸಾಂಕೇತಿಕವಾಗಿ ವಿಶ್ವ ಹಿಂದೂ ಪರಿಷತ್‌ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಸಂಸದ ಶಿವಕುಮಾರ ಉದಾಸಿ ಭೇಟಿ ನೀಡಿದರು. ಧರಣಿ ಸ್ಥಳದಲ್ಲಿಸ್ವಲ್ಪ ಸಮಯ ಕುಳಿತು ಧರಣಿಗೆ ಬೆಂಬಲ ವ್ಯಕ್ತ ಪಡಿಸಿದರು. ಸಂಘಟಕರಿಂದ ಮನವಿ ಪತ್ರ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ