ಆ್ಯಪ್ನಗರ

ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಮುಂದು

ಗದಗ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಅಂತಾರಾಷ್ಟ್ರೀಯ ಸಾಕ್ಷ ರತಾ ದಿನಾಚರಣೆ ಹಾಗೂ ರಾಮಕೃಷ್ಣ ಪರಮಹಂಸರ ಜನ್ಮದಿನ ಇರುವುದು ನಮ್ಮ ಪುಣ್ಯ ಎಂದು ಜಿಲ್ಲಾ ಯೋಗ ಸಾಧಕ ಪ್ರಶಸ್ತಿ ವಿಜೇತ ಹಾಗೂ ನಿವೃತ್ತ ಮುಖ್ಯಾಧ್ಯಾಪಕ ಎಸ್‌.ವೈ.ಬಾವಿಕಟ್ಟಿ ಹೇಳಿದರು.

Vijaya Karnataka 4 Mar 2019, 5:00 am
ಗದಗ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಅಂತಾರಾಷ್ಟ್ರೀಯ ಸಾಕ್ಷ ರತಾ ದಿನಾಚರಣೆ ಹಾಗೂ ರಾಮಕೃಷ್ಣ ಪರಮಹಂಸರ ಜನ್ಮದಿನ ಇರುವುದು ನಮ್ಮ ಪುಣ್ಯ ಎಂದು ಜಿಲ್ಲಾ ಯೋಗ ಸಾಧಕ ಪ್ರಶಸ್ತಿ ವಿಜೇತ ಹಾಗೂ ನಿವೃತ್ತ ಮುಖ್ಯಾಧ್ಯಾಪಕ ಎಸ್‌.ವೈ.ಬಾವಿಕಟ್ಟಿ ಹೇಳಿದರು.
Vijaya Karnataka Web women continue in all fields
ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಮುಂದು


ನಗರದ ಮುನಸಿಪಲ್‌ ಮೈದಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಸಪ್ತಾಹದ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಿಳೆ ಎಷ್ಟೇ ಎತ್ತರಕ್ಕೆ ಬೆಳೆದರು, ಮನೆಯಲ್ಲಿ ಗೃಹಣಿ, ತಾಯಿ, ಅಕ್ಕ, ತಂಗಿ, ಮಗಳು, ಸೊಸೆ, ಹೀಗೆ ಎಲ್ಲ ಸ್ಥಾನದ ತನ್ನ ಎಲ್ಲ ಕರ್ತವ್ಯ ನಿಬಾಯಿಸಿ ಮತ್ತೆ ಶಾಂತಳಾಗಿ ಇರುತ್ತಾಳೆ. ಪ್ರತಿಯೊಬ್ಬರಲ್ಲೂ ಮಹಿಳೆಯ ಪಾತ್ರ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದರು.

ಸದಾನಂದ ಕಾಮತ ಮಾತನಾಡಿ, ಮಹಿಳೆ ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾಳೆ. ಭಾರತದಲ್ಲಿ ಮಹಿಳೆಗೆ ಪ್ರಥಮ ಸ್ಥಾನ ಇದೆ. ಮಹಿಳೆ ಸಹೃದಯಿ ಯಾವುದೇ ಸ್ಥಿತಿಯಲ್ಲಿ ತನ್ನ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರ ಹೀಗೆ ಇನ್ನು ಹಲವಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾಳೆ. ತನ್ನ ಸಾಧನೆಯಲ್ಲಿ ತೊಡಗಿರುತ್ತಾಳೆ. ಮಹಿಳಾ ದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ಅಧ್ಯಕ್ಷ ತೆ ವಹಿಸಿದ್ದ ಜಿಲ್ಲಾ ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಗಂಗಾಧರ ಬಡಿಗಣ್ಣವರ ಮಾತನಾಡಿ, ಬಾಬಾ ರಾಮದೇವ ಗುರೂಜಿ ಮಹಿಳೆಯರಿಗೂ ಸಮಾನತೆ ನೀಡಿ ಯೋಗಪೀಠ ಹರಿದ್ವಾರದ ಆಶ್ರಯದಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿ ರಚಿಸಿ ಮಹಿಳೆಯರಿಗೆ ಸ್ಥಾನಮಾನ ನೀಡಿದರು. ಅದಕ್ಕೆ ಪ್ರತಿಯಾಗಿ ಮಹಿಳೆಯರು ತಮ್ಮ ಸೇವೆಯನ್ನು ಯೋಗಕಕ್ಕೆ ನೀಡುತ್ತಾ ಬಂದಿದ್ದಾರೆ. ಮನೆ ಮನೆಗೆ ಯೋಗ ಮುಟ್ಟಿಸುವ ಕಾರ್ಯವನ್ನು ಸಮಿತಿ ಮಹಿಳೆಯರು ಮಾಡುತ್ತಿದ್ದಾರೆ. ಅವರಿಗೆ ಸಮಿತಿ ಅಭಿನಂದನೆ ಸಲ್ಲಿಸುತ್ತದೆ ಎಂದರು.

ಎಲ್ಲ ಮಹಿಳೆಯರು ನಮ್ಮ ಬೆಟಗೇರಿ ಟೊಪಸೆರಗಿನ ಸೀರಿಯನ್ನುಟ್ಟು ಮಹಿಳೆಯರಿಗಾಗಿ ಏರ್ಪಡಿಸಿದ್ದ ಹಾಡಿನ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ನಾಗರತ್ನಾ ಬಡಿಗಣ್ಣವರ, ಬಸಮ್ಮ ಡಗಲಿ, ಮಹಿಳಾ ಯೋಗ ಸಾಧಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ